AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗ್ತೀನಿ ಅಂತಾ ನಂಬಿಸಿ.. ಪಾರ್ಥನೆಗೆಂದು ಚರ್ಚ್​ಗೆ ಬರುತ್ತಿದ್ದ ಯುವತಿಯೊಂದಿಗೆ ಪರಾರಿಯಾದ ಪಾದ್ರಿ, ಯಾವೂರಲ್ಲಿ?

24 ವರ್ಷದ ಯುವತಿ ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ್ದಳು. ಪದವಿ ನಂತ್ರ ಹೋಂಡಾ ಶೋರೂಮ್‌ನಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲ್ಸ ಮಾಡುತ್ತಿದ್ಳು. ಧರ್ಮ ಬೇರೆಯಾದ್ರೂ ಸ್ನೇಹಿತೆ ಜೊತೆ ಭಾನುವಾರ ಚರ್ಚ್​ಗೆ ಹೋಗುತ್ತಿದ್ಳು.

ಮದುವೆ ಆಗ್ತೀನಿ ಅಂತಾ ನಂಬಿಸಿ.. ಪಾರ್ಥನೆಗೆಂದು ಚರ್ಚ್​ಗೆ ಬರುತ್ತಿದ್ದ ಯುವತಿಯೊಂದಿಗೆ ಪರಾರಿಯಾದ ಪಾದ್ರಿ, ಯಾವೂರಲ್ಲಿ?
ಪಾದ್ರಿ ರವಿಕುಮಾರ್
ಪೃಥ್ವಿಶಂಕರ
|

Updated on: Dec 26, 2020 | 8:51 AM

Share

ಬಳ್ಳಾರಿ: ಆತನಿಗೆ 54 ವರ್ಷ ವಯಸ್ಸು, ಚರ್ಚ್​ನಲ್ಲಿ ಪಾದ್ರಿಯಾಗಿದ್ದ. ಧರ್ಮ ಸಂದೇಶ ಕೊಡಬೇಕಿದ್ದ ಈತ ಮಾಡಿದ್ದು ಮಾತ್ರ ಖತರ್ನಾಕ್ ಕೆಲಸ. ಚರ್ಚ್​ಗೆ ಬರುತ್ತಿದ್ದ ಯುವತಿಯರ ಮನಸ್ಸು ಕೆಡಿಸುತ್ತಿದ್ದ ಆರೋಪ ಆತನ ಮೇಲಿದ್ದು, ಇದೀಗ ಯುವತಿಯೊಬ್ಬಳ ಜೊತೆ ಪರಾರಿಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಬಳ್ಳಾರಿ ನಗರದ ಭತ್ರಿ ಬಳಿಯ ಚರ್ಚ್​ನಲ್ಲಿ ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ 54 ವರ್ಷ ವಯಸ್ಸಿನ ರವಿಕುಮಾರ್, 24 ವರ್ಷದ ಯುವತಿ ಜೊತೆ ಎಸ್ಕೇಪ್ ಆಗಿದ್ದಾನೆ ಎಂದು ಆರೋಪ ಕೇಳಿಬಂದಿದೆ.

ಚರ್ಚ್‌ಗೆ ಬಂದ ಯುವತಿಯ ಮನಸ್ಸು ಕೆಡಿಸಿದರಾ ಪಾದ್ರಿ..? ಅಂದಹಾಗೆ 24 ವರ್ಷದ ಯುವತಿ ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ್ದಳು. ಪದವಿ ನಂತ್ರ ಹೋಂಡಾ ಶೋರೂಮ್‌ನಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕೆಲ್ಸ ಮಾಡುತ್ತಿದ್ಳು. ಧರ್ಮ ಬೇರೆಯಾದ್ರೂ ಸ್ನೇಹಿತೆ ಜೊತೆ ಭಾನುವಾರ ಚರ್ಚ್​ಗೆ ಹೋಗುತ್ತಿದ್ಳು. ಹೀಗೆ ಚರ್ಚ್​ಗೆ ಬರ್ತಿದ್ದ ಯುವತಿಯೊಂದಿಗೆ ಫಾಸ್ಟರ್ ಸಲುಗೆಯಿಂದ ಇದ್ದು, ಆಕೆಯನ್ನು ಪ್ರೀತಿ ಬಲೆಗೆ ಬೀಳಿಸಿದ ಆರೋಪ ಕೇಳಿಬಂದಿದೆ.

ಮಗಳು ಪ್ರಾರ್ಥನೆಗೆ ಹೋಗುತ್ತಿದ್ದಾಳೆ ಬಿಡು ಅಂತಾ ಪೋಷಕರು ಭಾವಿಸಿದ್ದರು. ಆದ್ರೆ 54 ವರ್ಷದ ಪಾಸ್ಟರ್ ಯುವತಿಯೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದನಂತೆ. ಮದುವೆ ಆಗ್ತೀನಿ ಅಂತಾ ನಂಬಿಸಿ ಡಿಸೆಂಬರ್ 16 ರಂದು ಯುವತಿ ಜತೆ ಎಸ್ಕೇಪ್ ಆದ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ಯುವತಿ ತಾಯಿ ದೂರು ನೀಡಿದ್ದಾರೆ.

ಫಾಸ್ಟರ್ ವಿರುದ್ಧ ಯುವತಿಯ ಪೋಷಕರು ಬಳ್ಳಾರಿ ಎಸ್​ಪಿಗೆ ಕೂಡ ದೂರು ಸಲ್ಲಿಸಿದ್ದಾರೆ. ಜೊತೆಗೆ ಯುವತಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಫಾಸ್ಟರ್ ರವಿಕುಮಾರ್ ಚರ್ಚ್​ಗೆ ಬರ್ತಿದ್ದ ಯುವತಿಯರನ್ನೆಲ್ಲಾ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ. ಈಗಾಗ್ಲೆ ಸಾಕಷ್ಟು ಯುವತಿಯರಿಗೆ ಈ ರೀತಿ ಮಾಡಿದ್ದಾನೆ ಅಂತಾ ಆರೋಪಿಸಿದ್ದಾರೆ.

ಜೊತೆಗೆ ತಮ್ಮ ಮಗಳ ದಾಖಲಾತಿಗಳನ್ನ ಪಡೆದು ಅಕೌಂಟ್​ನಲ್ಲಿದ್ದ ಹಣ ಕೂಡ ಪಡೆದ್ದಿದ್ದಾನೆಂದು ಆರೋಪಿಸುತ್ತಿದ್ದಾರೆ. ಈಗಾಗ್ಲೇ ಆರೋಪಿ ಇಬ್ಬರನ್ನ ಮದುವೆಯಾಗಿರುವುದಾಗಿ ಗೊತ್ತಾಗಿದೆ. ಹೀಗಾಗಿ ನಮ್ಮ ಮಗಳನ್ನ ನಮಗೆ ಒಪ್ಪಿಸಿ, ಫಾಸ್ಟರ್​ನಿಂದ ಮಗಳನ್ನ ಬಚಾವ್ ಮಾಡಿ ಅಂತಾ ಯುವತಿಯರ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ಹಾಗೂ ಎಸ್​ಪಿಗೆ ದೂರು ನೀಡಿದ್ದಾರೆ. 

ಈಗಾಗಲೇ ಯುವತಿ ನಾಪತ್ತೆಯಾಗಿ 1 ವಾರ ಕಳೆದಿದೆ ಆದರೂ ಸುಳಿವಿಲ್ಲ. ಮತ್ತೊಂದ್ಕಡೆ ಈ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಧರ್ಮಸಂದೇಶ ನೀಡಬೇಕಾದ ವ್ಯಕ್ತಿ ಈ ರೀತಿ ಮಾಡಿರುವ ಆರೋಪ ಕೇಳಿಬಂದಿರೋದು ಜನರನ್ನ ರೊಚ್ಚಿಗೆಬ್ಬಿಸಿದೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ