ಮಂಡ್ಯ: ಬಾರ್​ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

| Updated By: ಆಯೇಷಾ ಬಾನು

Updated on: Nov 24, 2023 | 7:07 AM

ಮಂಡ್ಯದಲ್ಲಿ ಭೀಕರ ಕೊಲೆಯಾಗಿದೆ. ಬಾರ್​ನಲ್ಲಿ ಮದ್ಯ ಸೇವಿಸಲು ಬಂದಿದ್ದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭಗೊಂಡು ಚಂದನ್ ಎಂಬ ಯುವಕನ ಕೊಲೆಯಾಗಿದೆ. ಈ ಸಂಬಂಧ ಆರೋಪಿಯನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿ ನಾಗರಾಜ್​ ಚಂದನ್​ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದೇಹವನ್ನು ಕಾಲಿನಿಂದ ಒದ್ದು ದರ್ಪ ಮೆರೆದಿದ್ದಾನೆ.

ಮಂಡ್ಯ: ಬಾರ್​ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಕೊಲೆಯಾದ ಚಂದನ್​, ಆರೋಪಿ ನಾಗರಾಜ್​
Follow us on

ಮಂಡ್ಯ, ನ.24: ಬಾರ್​ನಲ್ಲಿ ಯುವಕರ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ (Murder) ಅಂತ್ಯ ಕಂಡಿದೆ. ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಬುಯ್ಯನದೊಡ್ಡಿ ಗ್ರಾಮದಲ್ಲಿ ಗೊಲ್ಲರಹಳ್ಳಿಯ ಚಂದನ್(23) ಎಂಬ ಯುವಕನ ಕೊಲೆ ಮಾಡಲಾಗಿದೆ. ಬೆಳ್ತೂರು ಗ್ರಾಮದ ನಾಗರಾಜ್ ಕೊಲೆ ಆರೋಪಿ. ಯುವಕರಿಬ್ಬರೂ ಬೇರೆ ಬೇರೆ ಟೇಬಲ್ ನಲ್ಲಿ ಕುಳಿತು ಮದ್ಯ ಸೇವನೆ ಮಾಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆಯೂ ಗಲಾಟೆ ಶುರುವಾಗಿ ನಂತರ ಗಲಾಟೆ ವಿಕೋಪಕ್ಕೆ ತಿರುಗಿ ಒಬ್ಬನ ಕೊಲೆಯಾಗಿದೆ. ಆರೋಪಿ ನಾಗರಾಜ್​ ಚಂದನ್​ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದೇಹವನ್ನು ಕಾಲಿನಿಂದ ಒದ್ದು ದರ್ಪ ಮೆರೆದಿದ್ದಾನೆ.

ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿ ನಿವಾಸಿ ಚಂದನ್(23) ಮೃತ ದುರ್ದೈವಿ. ಮಳವಳ್ಳಿ ತಾಲೂಕಿನ ಬೆಳ್ತೂರು ಗ್ರಾಮದ ನಾಗರಾಜ್(26) ಕೊಲೆ ಆರೋಪಿ. ಇವರಿಬ್ಬರೂ ಕೂಡ ಅಪರಿಚಿತರು. ನಿನ್ನೆ (ನ.23) ಸಂಜೆ ಇಬ್ಬರೂ ಒಂದೇ ಬಾರ್​ಗೆ ಎಣ್ಣೆ ಹೊಡೆಯೋದಕ್ಕೆ ಎಂದು ಹೋಗಿದ್ದರು. ಬೇರೆ ಬೇರೆ ಟೇಬಲ್ ನಲ್ಲಿ ಕುಳಿತು ಎಣ್ಣೆ ಹೊಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿದ್ದು ಆನಂತರ ಬಾರ್ ಸಿಬ್ಬಂದಿ ಇಬ್ಬರನ್ನು ಬಾರ್​ನಿಂದ ಹೊರಗೆ ಕಳುಹಿಸಿದ್ದಾರೆ. ಕೂಗಾಡಿಕೊಂಡು ಬಂದು ಬೈಕ್ ಏರಿ ಚಂದನ್ ಬಾರ್ ನಿಂದ ಮನೆಗೆ ಹೊರಡಲು ಮುಂದಾಗಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ನಾಗರಾಜ್ ದೊಣ್ಣೆಯಿಂದ ಏಕಾಏಕಿ ತಲೆಗೆ ಹೊಡೆದಿದ್ದಾನೆ. ನಂತರ ಕೆಳಗೆ ಬಿದ್ದ ಚಂದನ್ ನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಆತ ಸಾವನ್ನಪ್ಪಿದ ನಂತರವು ಮೃತದೇಹವನ್ನ ಕಾಲಿನಿಂದ ಒದ್ದು ದರ್ಪ ಮೆರೆದಿದ್ದಾನೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಪತ್ನಿ ಕೊರಳನ್ನೇ ಕತ್ತರಿಸಿ ಕೊಲೆ ಮಾಡಿದ ಪತಿ, ನ್ಯಾಯಕ್ಕಾಗಿ ಕುಟುಂಬಸ್ಥರ ಅಳಲು

ಕೊಲೆಯಾದ ಚಂದನ್ ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆ ಕೆಲಸವನ್ನು ಬಿಟ್ಟು ಗ್ರಾಮದಲ್ಲಿ ಬಂದು ನೆಲೆಸಿದ್ದ. ಇನ್ನು ಕೊಲೆ ಆರೋಪಿ ನಾಗರಾಜ್ ಸಹಾ ಯಾವುದೇ ಕೆಲಸವನ್ನ ಮಾಡದೇ ಗ್ರಾಮದಲ್ಲಿ ಸುತ್ತಾಡಿಕೊಂಡು ಇದ್ದ. ಆದರೆ ನಿನ್ನೆ ಕುಡಿದ ನಶೆಯಲ್ಲಿ ಗಲಾಟೆ ಆರಂಭಿಸಿ ಪಕ್ಕದ ಹಳ್ಳಿಯ ಅಪರಿಚಿತ ಯುವಕನನ್ನ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇನ್ನು ಘಟನೆ ನಡೆಯುತ್ತಿದ್ದಂತೆ ಹಲಗೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 7:06 am, Fri, 24 November 23