AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದಲ್ಲಿ ಆಸ್ತಿಗಾಗಿ ಅಜ್ಜಿಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ, ಮೊಮ್ಮಕ್ಕಳು

ಬೋರೇಗೌಡ ಮತ್ತು ನಿಂಗಮ್ಮ ದಂಪತಿಗೆ ಮಕ್ಕಳಿಲ್ಲದ ಕಾಣರ ಸಿದ್ದರಾಮೇಗೌಡ ಎಂಬುವವರನ್ನು ದತ್ತು ತೆಗೆದುಕೊಂಡಿದ್ದರು. ಬೋರೇಗೌಡ ತಮ್ಮನ ಮಗ ಸಿದ್ದರಾಮೇಗೌಡಗೆ 16 ವರ್ಷವಿದ್ದಾಗಲೇ ದತ್ತು ಪಡೆದುಕೊಂಡಿದ್ದರು.

ಮಂಡ್ಯದಲ್ಲಿ ಆಸ್ತಿಗಾಗಿ ಅಜ್ಜಿಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ, ಮೊಮ್ಮಕ್ಕಳು
ಬೀದಿಗೆ ಬಂದ ಅಜ್ಜಿ
TV9 Web
| Edited By: |

Updated on:Feb 05, 2022 | 4:30 PM

Share

ಮಂಡ್ಯ: ಆಸ್ತಿಗಾಗಿ (Property) ಮನೆಯವರು ಅಜ್ಜಿಯನ್ನು ಮನೆಯಿಂದ ಹೊರಗೆ ಹಾಕಿರುವ ಅಮಾನವೀಯ ಘಟನೆ ಮಂಡ್ಯ (Mandya) ತಾಲೂಕಿನ ಕೊಣನಹಳ್ಳಿಯಲ್ಲಿ ನಡೆದಿದೆ. ಕೋಟಿ-ಕೋಟಿ ಆಸ್ತಿ ಹೊಂದಿದ್ದ ನಿಂಗಮ್ಮ (85) ಎಂಬ ಅಜ್ಜಿ ಬೀದಿ ಪಾಲಾಗಿದ್ದಾರೆ. ಅಜ್ಜಿಗೆ ಆಸ್ತಿ ಎಲ್ಲಾ ನಮಗೆ ಬರಿ ಎಂದು ಸಹಿ ಹಾಕಲು ಸೊಸೆ ಮೊಮ್ಮಕ್ಕಳು ಹಠ ಮಾಡಿದ್ದಾರಂತೆ. ಆದರೆ ನಾನು ಸಹಿ ಹಾಕಲ್ಲ ಅಂತ ಅಜ್ಜಿ ಹೇಳಿದಕ್ಕೆ ಮಾನವೀಯತೆ ಮರೆತು ಮನೆಯಿಂದ ಹೊರಗೆ ಹಾಕಿದ್ದಾರೆ.

ಬೋರೇಗೌಡ ಮತ್ತು ನಿಂಗಮ್ಮ ದಂಪತಿಗೆ ಮಕ್ಕಳಿಲ್ಲದ ಕಾಣರ ಸಿದ್ದರಾಮೇಗೌಡ ಎಂಬುವವರನ್ನು ದತ್ತು ತೆಗೆದುಕೊಂಡಿದ್ದರು. ಬೋರೇಗೌಡ ತಮ್ಮನ ಮಗ ಸಿದ್ದರಾಮೇಗೌಡಗೆ 16 ವರ್ಷವಿದ್ದಾಗಲೇ ದತ್ತು ಪಡೆದುಕೊಂಡಿದ್ದರು. 24 ವರ್ಷಕ್ಕೆ ಸಿದ್ದರಾಮೇಗೌಡಗೆ ಬೋರೇಗೌಡ ಮತ್ತು ನಿಂಗಮ್ಮ ಮದುವೆ ಮಾಡಿದ್ದರು. ಶಿವಹಳ್ಳಿಯ ನಾಗಮಣಿ ಜೊತೆ ಮದುವೆ ಮಾಡಿದ್ದಾರೆ. ಮದುವೆಯಾದ 20 ವರ್ಷದ ನಂತರ ಸಿದ್ದರಾಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಬೋರೇಗೌಡ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

ಸಾಯುವ ಮುನ್ನ ಎಲ್ಲರಿಗೂ ಸರಿಯಾಗಿ ನ್ಯಾಯ ಸಿಗಬೇಕು ಅಂತ ಬೋರೇಗೌಡ ವಿಲ್ ಮಾಡಿದ್ದರು. ಸೊಸೆ, ಮೊಮ್ಮಕ್ಕಳು, ಅಣ್ಣ-ತಮ್ಮಂದಿರಿಗೆ ಆಸ್ತಿಯಲ್ಲಿ ಸಮಪಾಲು ಮಾಡಿದ್ದರು. ಇದೀಗ ಆಸ್ತಿಯೆಲ್ಲಾ ನಮಗೆ ಬೇಕು ಅಂತ ಸೊಸೆ, ಮೊಮ್ಮಕ್ಕಳು ಹೇಳುತ್ತಿದ್ದಾರಂತೆ. ಅಜ್ಜಿಗೆ ಆಸ್ತಿ ಎಲ್ಲಾ ನಮಗೆ ಬರಿ ಎಂದು ಸಹಿ ಹಾಕಲು ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದ ಅಜ್ಜಿ ನಾನು ಸಹಿ ಹಾಕಲ್ಲ ಎಂದಿದ್ದಾರೆ. ಹತ್ತಾರು ಎಕರೆ ಜಮೀನು, 15 ಸೈಟ್, ಏಳೆಂಟು ಮನೆ, ಮಂಡ್ಯ ನಗರ ಭಾಗದಲ್ಲಿ ಬಿಲ್ಡಿಂಗ್ ಇದ್ದರೂ ಅಜ್ಜಿ ಬೀದಿಗೆ ಬಂದಿದ್ದಾರೆ.

ಹೊಟ್ಟೆ-ಬಟ್ಟೆ ಕಟ್ಟಿ ಆಸ್ತಿ ಮಾಡಿದ್ದರೂ ಹೀಗೆ ಮಾಡುತ್ತಾ ಇದ್ದಾರೆ ಎಂದು ಅಜ್ಜಿ ಕಣ್ಣೀರು ಹಾಕಿದ್ದಾರೆ. ನನ್ನ ಗಂಡ ಎಲ್ಲರಿಗೂ ನ್ಯಾಯ ಕೊಡಿಸಬೇಕೆಂದು ವಿಲ್ ಮಾಡಿದ್ದಾರೆ. ಈಗ ಇವರು ನನ್ನ ಗಂಡನ್ನ ಬೈಯ್ದುಕೊಂಡು ನನ್ನ ಬೀದಿ ಪಾಲು ಮಾಡಿದ್ದಾರೆ. ನಾನು ಆ ಮನೆಗೆ ಹೋಗಲ್ಲ, ನನ್ನ ಗಂಡ ಮಾಡಿರುವುದು ಸರಿ ಇದೆ ಅಂತ ಅಜ್ಜಿ ಹೇಳುತ್ತಿದ್ದಾರೆ.

ಇದನ್ನೂ ಓದಿ

80 ವರ್ಷದ ಅಜ್ಜಿ ಹೆಸರು ಬದಲಿಸಿಕೊಂಡು, ಭಾರತ ಸರ್ಕಾರದ ಗೆಜೆಟ್​​ನಲ್ಲಿ ಪ್ರಕಟಿಸುವಂತೆ ಪಟ್ಟು ಹಿಡಿದಿದ್ದಾರೆ! ಯಾಕೆ?

ಫ್ಲೈ ಓವರ್ ಮೇಲೆ ಬೈಕ್ ವಿಲ್ಹಿಂಗ್ ಮಾಡುತ್ತಿದ್ದ ಪುಂಡರನ್ನು ಬಂಧಿಸಿದ ಬೆಂಗಳೂರು ಪೊಲೀಸ್

Published On - 4:28 pm, Sat, 5 February 22

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!