AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

80 ವರ್ಷದ ಅಜ್ಜಿ ಹೆಸರು ಬದಲಿಸಿಕೊಂಡು, ಭಾರತ ಸರ್ಕಾರದ ಗೆಜೆಟ್​​ನಲ್ಲಿ ಪ್ರಕಟಿಸುವಂತೆ ಪಟ್ಟು ಹಿಡಿದಿದ್ದಾರೆ! ಯಾಕೆ?

Name change: ಅಜ್ಜಿಗೆ 1999ರಲ್ಲಿ ತಮ್ಮ ಹಳೆಯ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಕೆವೈಸಿ (KYC) ರಗಳೆ ಇರಲಿಲ್ಲವಂತೆ. ಎಲೆಕ್ಷನ್ ಕಾರ್ಡ್​, ಪಾನ್​ ಕಾರ್ಡ್ ಮುಂತಾದವುಗಳ ಗೋಜು​ ಇರಲಿಲ್ಲವಂತೆ. ಅಂತಹ ಯಾವುದೇ ದಾಖಲೆಗಳು ಇಲ್ಲದೆ, ಸರಳವಾಗಿ ತಮ್ಮ ಹೆಸರಿನಲ್ಲಿ ಖಾತೆಗಳನ್ನು ತೆಗೆದಿದ್ದರಂತೆ ಪ್ರಭಾ ಸೂದ್!

80 ವರ್ಷದ ಅಜ್ಜಿ ಹೆಸರು ಬದಲಿಸಿಕೊಂಡು, ಭಾರತ ಸರ್ಕಾರದ ಗೆಜೆಟ್​​ನಲ್ಲಿ ಪ್ರಕಟಿಸುವಂತೆ ಪಟ್ಟು ಹಿಡಿದಿದ್ದಾರೆ! ಯಾಕೆ?
ದೆಹಲಿ ಕೋರ್ಟ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 08, 2022 | 6:10 AM

ನವದೆಹಲಿ: ಸುಮಾರು 80 ವರ್ಷದ ಅಜ್ಜಿಯೊಬ್ಬರು (woman) ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು, ಅದನ್ನು ಭಾರತ ಸರ್ಕಾರದ ಗೆಜೆಟ್​​ನಲ್ಲಿ (Official Gazette of India) ಅಧಿಕೃತವಾಗಿ ಪ್ರಕಟಿಸುವಂತೆ ವರಾತ ತೆಗೆದಿದ್ದಾರೆ! ಅಷ್ಟೇ ಅಲ್ಲ ಈ ಸಂಬಂಧ ದೆಹಲಿ ಹೈಕೋರ್ಟ್ (Delhi High Court)​ ಮೆಟ್ಟಿಲೇರಿದ್ದಾರೆ. ಈ ಇಳಿವಯಸ್ಸಿನಲಿ ಇದೇನು ಅಜ್ಜಿಯ ಪಡಿಪಾಟಲು ಎಂದು ನೋಡಿದಾಗ… ಅಜ್ಜಿ ಪತಿಯನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದಾರೆ. ಆಕೆಗೆ ಸದ್ಯಕ್ಕೆ ತಮ್ಮ ಹೆಸರಿನಲ್ಲಿ ಒಂದು ಗುರುತಿನ ಚೀಟಿ (photo identity card) ಬೇಕಾಗಿದೆ. ತಮ್ಮ ಬಳಿಯಿರುವ ಉಳಿತಾಯದ ಹಣ ಮತ್ತು ಹೂಡಿಕೆಯಿಂದ ಬರುವ ಹಣವನ್ನು ತಮ್ಮ ಹೆಸರಿನಲ್ಲಿ ಜೋಪಾನ ಮಾಡಿಕೊಳ್ಳುವುದು ಆಕೆಯ ಸದ್ಯದ ಜರೂರತ್ತು ಆಗಿದೆ. ಅದಕ್ಕಾಗಿ ಅಜ್ಜಿ ಈ ಇಳಿವಯಸ್ಸಿನಲಿ ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡುತ್ತಿದ್ದಾರೆ. ಇದನ್ನು ಆಲಿಸಿದ ದೆಹಲಿ ಹೈಕೋರ್ಟ್​ನ ಜಸ್ಟೀಸ್ ವಿ ಕಾಮೇಶ್ವರ್ ರಾವ್​ ಅವರು ತತ್​ಕ್ಷಣ ಅಜ್ಜಿಗೆ ನೆರವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೊದಲು ಒಂದು ಅಫಿಡವಿಟ್​ ಸಲ್ಲಿಸುವಂತೆ ಅಜ್ಜಿಗೆ ಸೂಚಿಸಿದ ಕೋರ್ಟ್, ಅದಕ್ಕೆ ತಕ್ಷಣ ಸ್ಪಂದಿಸಿ ಸರ್ಟಿಫಿಕೇಟ್​ ನೀಡುವಂತೆ ಆಜ್ಞಾಪಿಸಿದ್ದಾರೆ.

ಅಷ್ಟಕ್ಕೂ ಆ ಮಹಿಳೆ ಯಾರು, ಆಕೆಯ ವೃತ್ತಾಂತ ಏನು ಎಂದು ನೋಡಿದಾಗ 80 ವರ್ಷದ ಮಹಿಳೆ ಪ್ರಭಾ ಸೂದ್​ ಪಂಜಾಬ್​ನ ಹೋಷಿಯಾರ್​ಪುರದವರು. 2002ರಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿ ತಮ್ಮ ವಕೀಲರಾದ ಕೈ ಪ್ರಕಾಶ್ ತೆಹಲಾನಿ ಮೂಲಕ ದೆಹಲಿ ಹೈಕೋರ್ಟ್​ಗೆ ಅರ್ಜಿ ಹಾಕಿಕೊಂಡಿದ್ದಾರೆ. ‘1941ರಲ್ಲಿ ಜನಿಸಿರುವ ಪ್ರಭಾ ಸೂದ್ ಎಂಬ ತಮ್ಮ ಅರ್ಜಿದಾರರು 1963ರಲ್ಲಿ ರಾಮ್​ ಪ್ರಕಾಶ್ ಸೂದ್​ ಅವರನ್ನು ವಿವಾಹವಾದರು. ಆದರೆ ಅವರ ಪತಿ 2009ರಲ್ಲಿ ಮೃತಪಟ್ಟರು. ಅಲ್ಲಿಂದೀಚೆಗೆ ಅವರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಪತಿಯ ಹೆಸರಿನಲ್ಲಿ ಜಮಾ ಆಗಿರುವ ಹಣವನ್ನು ತಾನು ಬಳಸಿಕೊಳ್ಳಲು ಗುರುತಿನ ಚೀಟಿ ಅಡ್ಡಗೋಡೆಯಾಗಿ ಪರಿಣಮಿಸಿದೆ’ ಎಂದು ಪ್ರಭಾ ಸೂದ್ ಅವರ ವಕೀಲರು ಕೋರ್ಟ್​ಗೆ ಅಲವತ್ತುಕೊಂಡಿದ್ದಾರೆ.

ಜೊತೆಗೆ ಪ್ರಭಾ ಸೂದ್ ಅವರು 1999 ರಲ್ಲಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರಂತೆ. ಷೇರು ಮತ್ತಿತರ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿದ್ದರಂತೆ. ಆದರೆ ಅವರು ಶಶಿ ಸೂದ್ ತಮ್ಮ ಹಿಂದಿನ ಹೆಸರಿನಲ್ಲಿ ಈ ಎಲ್ಲಾ ಖಾತೆಗಳನ್ನು ನಿರ್ವಹಿಸತೊಡಗಿದರಂತೆ. ಆ ಕಾಲಕ್ಕೆ, ಅಂದರೆ 1999ರಲ್ಲಿ ಹಳೆಯ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಕೆವೈಸಿ (KYC) ರಗಳೆ ಇರಲಿಲ್ಲ. ಎಲೆಕ್ಷನ್ ಕಾರ್ಡ್​, ಪಾನ್​ ಕಾರ್ಡ್ ಮುಂತಾದವುಗಳ ಗೋಜು​ ಇರಲಿಲ್ಲವಂತೆ. ಅಂತಹ ಯಾವುದೇ ದಾಖಲೆಗಳು ಇಲ್ಲದೆ, ಸರಳವಾಗಿ ತಮ್ಮ ಹೆಸರಿನಲ್ಲಿ ಖಾತೆಗಳನ್ನು ತೆಗೆದಿದ್ದರಂತೆ ಪ್ರಭಾ ಸೂದ್!

2012ರಲ್ಲಿ ಹೋಷಿಯಾರ್​ಪುರದ ಜಿಲ್ಲಾಧಿಕಾರಿ ಪ್ರಭಾ ಸೂದ್ ಹೆಸರಿನಲ್ಲಿ ಆಕೆಯ ಪತಿ ರಾಮ್​ ಪ್ರಕಾಶ್ ಸೂದ್​ ಅವರ ವಾರಸುದಾರರನ್ನಾಗಿ ಗುರುತಿಸಿ, ಸರ್ಟಿಫಿಕೇಟ್​ ಇಶ್ಯೂ ಮಾಡಿದ್ದರಂತೆ. ಆದರೆ ತಮ್ಮ ಖಾತೆ ಶಶಿ ಸೂದ್ ಹೆಸರಿನಲ್ಲಿದ್ದು, ವಾರಸುದಾರಿಕೆ ಪ್ರಮಾಣ ಪತ್ರ ಪ್ರಭಾ ಸೂದ್ ಹೆಸರಿನಲ್ಲಿ ಇದೆ. ಇದೇ ಈಗ ಪೀಕಲಾಟಕ್ಕೆ ಇಟ್ಟುಕೊಂಡಿರುವುದು. ಯಾವುದೇ ಹಣ ತಮ್ಮ ಕೈಗೆ ಬರುತ್ತಿಲ್ಲ. ಜೀವನ ನಡೆಸುವುದು ಸಾಕಾಗಿದೆ. ದಯವಿಟ್ಟು ಇದಕ್ಕೆ ಏನದರೂ ಒಂದು ವ್ಯವಸ್ಥೆ ಮಾಡಿಕೊಡಿ ಎಂದು ದೆಹಲಿ ಹೈಕೋರ್ಟ್​ ಕದತಟ್ಟಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ತಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನು ಅವರು ಅರ್ಜಿಯೊಂದಿಗೆ ಗುಜರಾಯಿಸಿದ್ದಾರೆ.

Published On - 3:26 pm, Sat, 5 February 22

ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್