ಸಫಾರಿ ಹೋಗುವವರಿಗೆ ಗುಡ್​ನ್ಯೂಸ್: ಸಿಂಹ, ಹುಲಿ ಜೊತೆಗೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಆರಂಭ

| Updated By: ರಮೇಶ್ ಬಿ. ಜವಳಗೇರಾ

Updated on: Jun 10, 2024 | 4:41 PM

ಬೆಂಗಳೂರಿನ ಹೊರ ವಲಯದಲ್ಲಿರುವ ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಸಫಾರಿ ಆರಂಭವಾಗಲಿದೆ. ಹೌದು... ಇಷ್ಟು ದಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಲಿ ಇರುವ ಸಿಂಹ ಸಫಾರಿ ಇತ್ತು, ಇದೀಗ ಈಗ ಚಿರತೆ ಸಫಾರಿ ಶುರುವಾಗಲಿದ್ದು, ಇದೇ ಮಾಸಾಂತ್ಯಕ್ಕೆ ಚಿರತೆ ಸಫಾರಿ ಶುರುವಾಗಲಿದೆ.

ಸಫಾರಿ ಹೋಗುವವರಿಗೆ ಗುಡ್​ನ್ಯೂಸ್:  ಸಿಂಹ, ಹುಲಿ ಜೊತೆಗೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಆರಂಭ
Follow us on

ಬೆಂಗಳೂರು (ಜೂ.10): ಬೆಂಗಳೂರಿನ ಹೊರ ವಲಯದಲ್ಲಿರುವ  ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ(Bannerghatta National Park)  ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಚಿರತೆ ಸಫಾರಿ (leopard safari) ಆರಂಭವಾಗಲಿದೆ. ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ. ವಿಕಾಸ ಸೌಧದ ಸಚಿವರ ಕಾರ್ಯಾಲಯದಲ್ಲಿ ಇಂದು (ಜೂನ್ 10) ನಡೆದ ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದರ ಜೊತೆಗೆ, ಮೈಸೂರಿನ ಕಾರಂಜಿ ಕೆರೆಯಲ್ಲಿ ಮತ್ಯ್ಸಾಗಾರ ನಿರ್ಮಾಣಕ್ಕೆ ಸಮ್ಮತಿ ನೀಡಿದರು. ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮೊದನೆ ನೀಡಿದರು.

ಹುಲಿಗಳು ಮತ್ತು ಸಿಂಹಗಳಿಗಿಂತ ಭಿನ್ನವಾಗಿ, ಚಿರತೆಗಳು ಬಹಳ ಚುರುಕುಬುದ್ಧಿಯವು ಮತ್ತು ಚಾಲಾಕಿಗಳು. ತಪ್ಪಿಸಿಕೊಳ್ಳಲು ಸಾಧ್ಯವಿರುವ ಯಾವುದೇ ಮಾರ್ಗವನ್ನು ಕಂಡುಕೊಳ್ಳುತ್ತವೆ, ಆದ್ದರಿಂದ ಆವರಣವನ್ನು ರಚಿಸುವಾಗ ಎಲ್ಲಾ ರೀತಿಯ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ. ಈ ಪ್ರದೇಶದಲ್ಲಿ 20 ಚಿರತೆಗಳಿಗೆ ಸ್ಥಳಾವಕಾಶವಿದೆ, ಆದರೆ ಇದೀಗ ಸುಮಾರು 12 ಚಿರತೆಗಳಿವೆ. ಜಗಳವಾಗದಂತೆ ಪರಸ್ಪರ ಒಗ್ಗಿಕೊಳ್ಳುವಂತೆ ಮಾಡಲಾಗುತ್ತಿದೆ. ಇರಿಸಲಾಗಿರುವ ಚಿರತೆಗಳು ತಲಾ ಆರು ಗುಂಪುಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲ್ಪಟ್ಟಿವೆ. ಪರಸ್ಪರ ಹೊದಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರದರ್ಶನಕ್ಕೆ ಇಡಲಾಗುವ ಎಲ್ಲಾ ಚಿರತೆಗಳು ಒಂದು ವರ್ಷದೊಳಗಿನವು ಮತ್ತು ಮೃಗಾಲಯದಲ್ಲಿ ಸಾಕಲ್ಪಟ್ಟ ಚಿರತೆಗಳಾಗಿವೆ. ಅವರು ಎರಡು ತಿಂಗಳೊಳಗೆ ಇರುವಾಗ ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ವ್ಯಕ್ತಿಗಳು ಹೊಲಗಳಿಂದ ಕರೆತಂದ ರಕ್ಷಿಸಲ್ಪಟ್ಟ ಮರಿಗಳು. ದಾಖಲೆಗಳ ಪ್ರಕಾರ, ಬಿಬಿಪಿಯಲ್ಲಿ 70 ಚಿರತೆಗಳು, 19 ಹುಲಿಗಳು ಮತ್ತು 19 ಸಿಂಹಗಳು ಮೃಗಾಲಯದಲ್ಲಿವೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Mon, 10 June 24