ಉಮೇಶ್ ಕಾರಜೋಳ ಕಾರಿನ ಮೇಲೆ ಕಲ್ಲು ತೂರಿದ ಪ್ರಕರಣ: ಸಚಿವ ಆರ್​ಬಿ ತಿಮ್ಮಾಪುರ ಖುಲಾಸೆ

ಕಾರಿನ ಮೇಲೆ ಕಲ್ಲು ತೂರಿದ ಪ್ರಕರಣದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಖುಲಾಸೆಯಾಗಿದ್ದಾರೆ. ತಿಮ್ಮಾಪುರ ಹಾಗೂ ಅವರ ಬೆಂಬಲಿಗರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಏನಿದು ಕೇಸ್?

ಉಮೇಶ್ ಕಾರಜೋಳ ಕಾರಿನ ಮೇಲೆ ಕಲ್ಲು ತೂರಿದ ಪ್ರಕರಣ: ಸಚಿವ ಆರ್​ಬಿ ತಿಮ್ಮಾಪುರ ಖುಲಾಸೆ
ಆರ್.ಬಿ.ತಿಮ್ಮಾಪುರ
Updated By: ರಮೇಶ್ ಬಿ. ಜವಳಗೇರಾ

Updated on: Dec 19, 2023 | 9:32 PM

ಬೆಂಗಳೂರು, (ಡಿಸೆಂಬರ್ 19): ಕಲ್ಲು ತೂರಾಟ ಪ್ರಕರಣದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ(RB timmapur) ಖುಲಾಸೆಯಾಗಿದ್ದಾರೆ. 2013ರ ಚುನಾವಣೆ ಸಂದರ್ಭದಲ್ಲಿ ಉಮೇಶ್ ಕಾರಜೋಳ ಕಾರಿನ ಮೇಲೆ ಕಲ್ಲು ತೂರಿದ ಆರೋಪದ ಮೇಲೆ ಆರ್.ಬಿ.ತಿಮ್ಮಾಪುರ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ತಿಮ್ಮಾಪುರ ಹಾಗೂ ಅವರ ಬೆಂಬಲಿಗರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ಇಡಗಂಟು ಹೆಚ್ಚಿಸುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರ್ಟ್ ಸೂಚನೆ

ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ವೇಳೆ ನೀಡುವ ಇಡುಗಂಟು ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಮಹತ್ವದ ನಿರ್ದೇಶನ ನೀಡಿದೆ. ಇಡುಗಂಟು ಹೆಚ್ಚಿಸುವ ಬಗ್ಗೆ 2 ತಿಂಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ವೇಳೆ ನೀಡುವ ಇಡುಗಂಟು 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಹೆಚ್ಚಳ ಕೋರಿದ್ದರು. ಸಹಾಯಕಿಯರಿಗೆ 30 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಕೋರಿದ್ದರು. ಇದನ್ನು ವಿಚಾರಣೆ ನಡೆಸಿದ ನ್ಯಾ. ಎನ್.ಎಸ್.ಸಂಜಯಗೌಡ ಅವರಿದ್ದ ಹೈಕೋರ್ಟ್ ಪೀಠ, ಬಡವರೇ ಹೆಚ್ಚಿರುವ ಅಂಗನವಾಡಿ ಕಾರ್ಯಕರ್ತರಿಗೆ ಕಡಿಮೆ ವೇತನವಿದೆ. ಸಮಾಜದ ಕೆಳಸ್ತರದವರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಅಂಶವನ್ನೂ ಪರಿಗಣಿಸಿ ತೀರ್ಮಾನಿಸಲು ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:24 pm, Tue, 19 December 23