AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Zoo: ಉಕ್ರೇನ್​ನಲ್ಲಿದ್ದ ಬ್ಲ್ಯಾಕ್​ ಪ್ಯಾಂಥರ್, ಜಾಗ್ವಾರ್​ಗೆ ಮೈಸೂರು ಮೃಗಾಲಯದಲ್ಲಿ ಆಶ್ರಯ

ಮೃಗಾಲಯದಲ್ಲಿ ಇರಿಸಿ ಈ ಪ್ರಾಣಿಗಳನ್ನು ಸಾಕಲು ಅವಕಾಶ ಕೊಡಬೇಕು ಎಂಬ ಅವರ ಕೋರಿಕೆಗೆ ಕೇಂದ್ರ ಅರಣ್ಯ ಇಲಾಖೆ ಸಮ್ಮತಿಸಿದೆ.

Mysore Zoo: ಉಕ್ರೇನ್​ನಲ್ಲಿದ್ದ ಬ್ಲ್ಯಾಕ್​ ಪ್ಯಾಂಥರ್, ಜಾಗ್ವಾರ್​ಗೆ ಮೈಸೂರು ಮೃಗಾಲಯದಲ್ಲಿ ಆಶ್ರಯ
ಬ್ಲ್ಯಾಕ್ ಪ್ಯಾಂಥರ್ (ಸಂಗ್ರಹ ಚಿತ್ರ)
TV9 Web
| Edited By: |

Updated on:May 10, 2022 | 2:40 PM

Share

ಮೈಸೂರು: ರಷ್ಯಾ ದಾಳಿಯಿಂದ ಸಂಕಷ್ಟ ಎದುರಿಸುತ್ತಿರುವ ಉಕ್ರೇನ್​ ದೇಶದಿಂದ 50 ಲಕ್ಷಕ್ಕೂ ಹೆಚ್ಚು ಜನರು ಹೊರಗೆ ಬಂದಿದ್ದಾರೆ. ದೇಶ ತೊರೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿರುವ ಸಾಕಷ್ಟು ಜನರಿಗೆ ತಾವು ಮುದ್ದಿನಿಂದ ಸಾಕಿರುವ ಪ್ರಾಣಿಗಳನ್ನು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಆದರೆ ಕೆಲವರು ಮಾತ್ರ ತಾವು ವಲಸೆ ಹೋಗುವ ದೇಶಗಳಿಗೆ ಕೊಂಡೊಯ್ಯುತ್ತಿದ್ದಾರೆ. ತಮ್ಮ ಮನೆಗಳಲ್ಲಿಯೇ ಮುದ್ದಿನ ಪ್ರಾಣಿಗಳನ್ನು ಬಿಟ್ಟು ಬಂದವರ ಸಂಖ್ಯೆಯೂ ಕಡಿಮೆಯಿಲ್ಲ. ವಲಸೆ ಹೋಗುವವರಿಗೆ ಆಶ್ರಯ ಕೊಡುತ್ತಿರುವ ಹಲವು ದೇಶಗಳು ಸಾಕು ಪ್ರಾಣಿಗಳನ್ನೂ ಸ್ವೀಕರಿಸಲು ಮುಂದಾಗಿವೆ.

ಉಕ್ರೇನ್-ರಷ್ಯಾ ಸಂಘರ್ಷದಲ್ಲಿ ಸಿಲುಕಿರು ಭಾರತೀಯ ಮೂಲದ ವೈದ್ಯ ಡಾ.ಗಿರಿಕುಮಾರ್, ಬ್ಲ್ಯಾಕ್ ಪ್ಯಾಂಥರ್ (ಕರಿಚಿರತೆ) ಮತ್ತು ಜಾಗ್ವಾರ್ ಸಾಕಿದ್ದರು. ಉಕ್ರೇನ್​ನಲ್ಲಿ ತಮ್ಮ ಮನೆಯ ನೆಲಮಹಡಿಯಲ್ಲಿ ಈ ಪ್ರಾಣಿಗಳನ್ನು ಸಾಕಿಕೊಂಡಿದ್ದ ಗಿರಿಕುಮಾರ್ ರಷ್ಯಾ ದಾಳಿಯ ನಂತರ ಭಾರತಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಭಾರತದಲ್ಲಿ ಮನೆಗಳಲ್ಲಿ ಕಾಡುಪ್ರಾಣಿಗಳನ್ನು ಸಾಕಲು ಸರ್ಕಾರ ಅನುಮತಿ ಕೊಡುವುದಿಲ್ಲ. ಹೀಗಾಗಿ ಅವರು, ತಮ್ಮ ಬ್ಲ್ಯಾಕ್​ ಪ್ಯಾಂಥರ್ ಮತ್ತು ಜಾಗ್ವಾರ್​ಗಳನ್ನು ಸಾಕುವಂತೆ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.

ಮೃಗಾಲಯದಲ್ಲಿ ಇರಿಸಿ ಈ ಪ್ರಾಣಿಗಳನ್ನು ಸಾಕಲು ಅವಕಾಶ ಕೊಡಬೇಕು ಎಂಬ ಅವರ ಕೋರಿಕೆಗೆ ಕೇಂದ್ರ ಅರಣ್ಯ ಇಲಾಖೆ ಸಮ್ಮತಿಸಿದೆ. 2019ರಲ್ಲೇ ಜಾಗ್ವಾರ್ ತರಿಸಿಕೊಳ್ಳಲು ಮೈಸೂರು ಮೃಗಾಲಯ ಅನುಮತಿ ಕೋರಿತ್ತು. ‘ಬ್ಲ್ಯಾಕ್ ಪ್ಯಾಂಥರ್ ಹಾಗೂ ಜಾಗ್ವಾರ್ ಸಾಕಲು ನಮ್ಮ ಮೃಗಾಲಯದಲ್ಲಿ ಪ್ರಶಸ್ತ ವಾತಾವರಣ ಇದೆ. ನಮ್ಮ ಮೃಗಾಯಲಕ್ಕೆ ಈ ಪ್ರಾಣಿಗಳನ್ನು ತರಿಸಿಕೊಟ್ಟರೆ ಚೆನ್ನಾಗಿ ಬೆಳೆಸುತ್ತೇವೆ’ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವ ಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಯುದ್ಧ: ವಿಜಯ ದಿನದ ಭಾಷಣದಲ್ಲಿ ಕೆಲವು ಸುಳಿವು ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಇದನ್ನೂ ಓದಿ: Atta Price: ಚಪಾತಿ, ಪೂರಿ, ಉಪ್ಪಿಟ್ಟಿನ ಮೇಲೂ ರಷ್ಯಾ- ಉಕ್ರೇನ್ ಯುದ್ಧದ ಎಫೆಕ್ಟ್; ಅಡುಗೆ ಎಣ್ಣೆ ಜತೆಗೆ ಎಲ್ಲವೂ ಮೇಲೇರಿದೆ

Published On - 2:40 pm, Tue, 10 May 22

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ