AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಅರಮನೆ ಆವರಣ ಮತ್ತೆ ಧ್ವನಿ-ಬೆಳಕು ಹೊಂಬಣ್ಣದಲ್ಲಿ ಜಗಮಗ; ತುಂಬಿ ಹರಿಯುತಿವೆ ಚುಂಚನಕಟ್ಟೆ, ಧನುಷ್ಕೋಟಿ ಜಲಪಾತ

ಮೈಸೂರು ಅರಮನೆಯಲ್ಲಿ ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ ಕಾರ್ಯಕ್ರಮವಿರಲಿದೆ ರಾತ್ರಿ 7ರಿಂದ 8ರ ವರೆಗೆ ಮತ್ತೆ ಮೈಸೂರು ಅರಮನೆ ಜಗಮಗಿಸಲಿದೆ. ಇನ್ನುಳಿದ ದಿನಗಳಂದೂ ಸಹ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇರುತ್ತದೆ. ಆದರೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7ರಿಂದ 8 ಹಾಗೂ ಶನಿವಾರ 7 ರಿಂದ 9.15ರ ವರಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತದೆ. 

ಮೈಸೂರು ಅರಮನೆ ಆವರಣ ಮತ್ತೆ ಧ್ವನಿ-ಬೆಳಕು ಹೊಂಬಣ್ಣದಲ್ಲಿ ಜಗಮಗ; ತುಂಬಿ ಹರಿಯುತಿವೆ ಚುಂಚನಕಟ್ಟೆ, ಧನುಷ್ಕೋಟಿ ಜಲಪಾತ
ಮೈಸೂರು ಅರಮನೆ ಆವರಣ
TV9 Web
| Edited By: |

Updated on:Jul 24, 2021 | 11:38 AM

Share

ಮೈಸೂರು: ಐತಿಹಾಸಿಕ ಮೈಸೂರು ಅರಮನೆಗೆ ನಾಳೆಯಿಂದ ದೀಪಾಲಂಕಾರ ಮರುಕಳಿಸಲಿದೆ. ಸಂಜೆಯ ವೇಳೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಕೊರೊನಾ ಹಿನ್ನೆಲೆ ಸ್ಥಗಿತವಾಗಿತ್ತು. ಇದೀಗ ನಾಳೆಯಿಂದ ಮತ್ತೆ ಕಾರ್ಯಕ್ರಮ ಪುನಾರಂಭವಾಗಲಿದೆ.

ಪ್ರವಾಸೋದ್ಯಮ ಹಿತದೃಷ್ಟಿಯಿಂದ ದೀಪಾಲಂಕಾರ ( sound and light program) ಪುನರಾರಂಭವಾಗಿದೆ. ನಾಳೆಯಿಂದ ಮೈಸೂರು ಅರಮನೆ ದೀಪಾಲಂಕಾರ ಪುನರಾರಂಭವಾಗಲಿದ್ದು, ಹೊಂಬಣ್ಣದಲ್ಲಿ ಜಗಮಗಿಸಲಿದೆ.  ಕೊರೊನಾ ನಿಯಂತ್ರಣ ಕ್ರಮವಾಗಿ ಜಾರಿಯಲ್ಲಿದ್ದ ಲಾಕ್​ಡೌನ್​ ಈಗ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅನ್​ಲಾಕ್‌ ಬಳಿಕ ಅರಮನೆ ಆಡಳಿತ ಮಂಡಳಿ (Mysuru Palace Board) ಮತ್ತೆ ಆರಂಭ ಮಾಡುತ್ತಿದೆ.

ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ:

ಮೈಸೂರು ಅರಮನೆಯಲ್ಲಿ ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ ಕಾರ್ಯಕ್ರಮವಿರಲಿದೆ (mysore palace). ರಾತ್ರಿ 7ರಿಂದ 8ರ ವರೆಗೆ ಮತ್ತೆ ಮೈಸೂರು ಅರಮನೆ ಜಗಮಗಿಸಲಿದೆ. ಇನ್ನುಳಿದ ದಿನಗಳಂದೂ ಸಹ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇರುತ್ತದೆ. ಆದರೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7ರಿಂದ 8 ಹಾಗೂ ಶನಿವಾರ 7 ರಿಂದ 9.15ರ ವರಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತದೆ.

ಚುಂಚನಕಟ್ಟೆ ಜಲಪಾತ, ಧನುಷ್ಕೋಟಿ ಜಲಪಾತ ತುಂಬಿ ಹರಿಯುತ್ತಿವೆ

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಕೆ ಆರ್ ನಗರ ತಾಲ್ಲೂಕಿನ ಚುಂಚನಕಟ್ಟೆ ಜಲಪಾತ, ಧನುಷ್ಕೋಟಿ ಜಲಪಾತ ತುಂಬಿ ಹರಿಯುತ್ತಿವೆ. ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾಗಿರುವ ಚುಂಚನಕಟ್ಟೆ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ವರ್ಷಕ್ಕೊಮ್ಮೆ ನಡೆಯುತ್ತಿದ್ದ ಜಲಪಾತೋತ್ಸವವೂ ಸಹ ರದ್ದಾಗಿತ್ತು.

Mysuru Palace: ನಾಳೆಯಿಂದಲೇ ಮೈಸೂರು ಅರಮನೆ ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶ (Historical mysore palace to resume with sound and light program after unlock Mysuru Palace Board)

Published On - 9:12 am, Sat, 24 July 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!