ಮಂಡ್ಯದಲ್ಲಿ ‌ಭ್ರೂಣ ಹತ್ಯೆ ಹೇಗೆ ನಡೆಯುತ್ತೆ ಗೊತ್ತಾ? ಎಳೆಎಳೆಯಾಗಿ ಬಿಚ್ಚಿಟ್ಟ ಪುರಸಭೆ ಸದಸ್ಯ

ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ವಿಚಾರವಾಗಿ ಮೈಸೂರಿನಲ್ಲಿ ಶ್ರೀರಂಗಪಟ್ಟಣ ಪುರಸಬೆ ಸದಸ್ಯ ನಂದೀಶ್ ಮಾತನಾಡಿದ್ದು, ಭ್ರೂಣ ಹತ್ಯೆ ಹೇಗೆ ನಡೆಯುತ್ತೆ ಎಂಬುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜೊತೆಗೆ ಮಂಡ್ಯದ ಅರೋಗ್ಯಧಿಕಾರಿಗಳ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ‌ಭ್ರೂಣ ಹತ್ಯೆ ಹೇಗೆ ನಡೆಯುತ್ತೆ ಗೊತ್ತಾ? ಎಳೆಎಳೆಯಾಗಿ ಬಿಚ್ಚಿಟ್ಟ ಪುರಸಭೆ ಸದಸ್ಯ
ಪುರಸಭೆ ಸದಸ್ಯರು
Edited By:

Updated on: Nov 27, 2023 | 12:20 PM

ಮೈಸೂರು, ನವೆಂಬರ್​​ 27: ಮಂಡ್ಯ (Mandya) ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಲಾಗುತ್ತಿತ್ತು ಎಂಬ ವಿಚಾರ ಸದ್ಯ ಬಯಲಾಗಿದೆ. ಈ ವಿಚಾರವಾಗಿ ಮಂಡ್ಯದ ಆರೋಗ್ಯಧಿಕಾರಿಗಳ ವಿರುದ್ದ ಶ್ರೀರಂಗಪಟ್ಟಣ ಪುರಸಭೆ ಸದಸ್ಯ ನಂದೀಶ್ ಗಂಭೀರ ಆರೋಪ ಮಾಡುವುದರೊಂದಿಗೆ ಭ್ರೂಣ ಹತ್ಯೆ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. 100 ಗಂಡು ಮಕ್ಕಳಾದ್ದರೆ, 60 ಹೆಣ್ಣ ಮಕ್ಕಳಿದ್ದಾರೆ. 2021ರಲ್ಲೇ ನನಗೆ ಮಾಹಿತಿ ಇತ್ತು. ಅದರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರು. ಮಂಡ್ಯದ ನರ್ಸಿಂಗ್ ಹೊಂಗಳಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದರು. ಇದರಲ್ಲಿ ಏಜೆಂಟ್​ಗಳ ದೊಡ್ಡ ತಂಡವೇ ಇದೆ ಎಂದಿದ್ದಾರೆ.

ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಮೊದಲಿಗೆ ಭ್ರೂಣ ಪತ್ತೆ ಮಾಡುತ್ತಾರೆ. ನಂತರ ಹೆಣ್ಣು ಭ್ರೂಣವಾದರೆ ಅಮೌಂಟ್ ಫಿಕ್ಸ್ ಮಾಡುತ್ತಾರೆ. ಇದರಲ್ಲಿ ಆಸ್ಪತ್ರೆ ವೈದ್ಯರು ಮತ್ತು ಏಜೆಂಟ್​ರ ದೊಡ್ಡ ಜಾಲಾವೇ ಇದೆ. ನಾನು ಮೆಡಿಕಲ್ ಸ್ಟೋರಿ ಇಟ್ಟಿದ್ದೇನೆ. ಮೆಡಿಕಲ್ ಸ್ಟೋರ್​ಗೆ ಅಬಾರ್ಷನ್ ಮಾತ್ರೆ ಕೇಳಿಕೊಂಡು ಬರುತ್ತಿದ್ದರು. ನಾವು ಮಾತ್ರೆಯನ್ನ ಕೊಡುತ್ತಿರಲಿಲ್ಲ. ನಂತರ ಮಂಡ್ಯದಲ್ಲಿ ಏಜೆಂಟ್ ಮೂಲಕ‌ ಅಬಾರ್ಷನ್ ಮಾಡಿಸಿಕೊಳ್ಳುತ್ತಿರುವುದು ಗೊತ್ತಾಯಿತು ಎಂದರು.

ಇದನ್ನೂ ಓದಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಸ್ಥಳ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು

ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ವಿಚಾರ ಮಾಡಿದಾಗ ಹಣ ಕೊಟ್ಟು ಅಬಾರ್ಷನ್ ಮಾಡಿಸಿರುವುದಾಗಿ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ನರ್ಸ್​ಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಕೆ.ಆರ್ ಪೇಟೆ ಭಾಗದಲ್ಲಿ ಹೆಚ್ಚು ಈ ಕೃತ್ಯ ನಡೆದಿದೆ. ನಗರ ಪ್ರದೇಶದಲ್ಲಿ ಕಡಿಮೆ ನಡೆದಿದೆ. ಈ ಹಿಂದೆ ಅಬಾರ್ಷನ್​ ಮಾತ್ರೆಗಳನ್ನ ಕೊಡುತ್ತಿದ್ದರು. ಸದ್ಯ ಸರ್ಕಾರ ಮಾತ್ರೆಗಳನ್ನ ಬ್ಯಾನ್ ಮಾಡಿದೆ. ಈ ಪ್ರಕರಣವನ್ನ ಸಿಐಡಿಗೆ ವಹಿಸಬೇಕು. ಆರೋಗ್ಯ ಅಧಿಕಾರಿಗಳು ಸೇರಿದಂತೆ ಅನೇಕ ದೊಡ್ಡ ದೊಡ್ಡ ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಬಾರ್ಷನ್ ಮಾಡಿಸಿಕೊಂಡು 900 ಪೋಷಕರ ಎದೆಯಲ್ಲಿ ಢವ ಢವ.

ಮೈಸೂರು ಜಿಲ್ಲಾ DHO ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಎಲ್ಲವು ಈಗ ತನಿಖೆ ಹಂತದಲ್ಲಿದೆ. ತನಿಖೆಯಲ್ಲಿ ಯಾರು ಭ್ರೂಣ ಹತ್ಯೆ ಮಾಡಿಸಿದ್ದಾರೆ ಅವರ ಮಾಹಿತಿ ಸಿಗುತ್ತದೆ ಎಂದಿದ್ದಾರೆ. ಆ ಮೂಲಕ ಅಬಾರ್ಷನ್ ಮಾಡಿಸಿಕೊಂಡು 900 ಪೋಷಕರ ಎದೆಯಲ್ಲಿ ಢವ ಢವ ಶುರುವಾಗಿದೆ. ಭ್ರೂಣ ಹತ್ಯೆ ಕಾನೂನು ಬಾಹಿರ. ಸದ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಸ್ಪತ್ರೆಗಳು ಕೆ.ಪಿ.ಎಂ ಪ್ರಕಾರ ರೆಜಿಸ್ಟರ್ ಆಗಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us