ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅವರದ್ದೇ ಕಾಲಕೃತಿಯನ್ನು ಉಡುಗೊರೆಯಾಗಿ ನೀಡಿದ ಮೈಸೂರಿನ ಕಲಾವಿದ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೈಸೂರಿನ ಕಲಾವಿದ ನಂಜುಂಡಸ್ವಾಮಿ  ಅವರು ಪೆನ್ಸಿಲ್ ಲೆಡ್​ನಲ್ಲಿ ಕೆತ್ತಿದ ಸಿಎಂ ಬಸವರಾಜ ಬೊಮ್ಮಾಯಿ ಅವರದ್ದೇ ಕಲಾಕೃತಿಯನ್ನು ಮೈಸೂರಿನಲ್ಲಿ ಉಡುಗೊರೆಯಾಗಿ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅವರದ್ದೇ ಕಾಲಕೃತಿಯನ್ನು ಉಡುಗೊರೆಯಾಗಿ ನೀಡಿದ ಮೈಸೂರಿನ ಕಲಾವಿದ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Updated By: ವಿವೇಕ ಬಿರಾದಾರ

Updated on: Jun 08, 2022 | 9:23 PM

ಮೈಸೂರು:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಮೈಸೂರಿನ (Mysore) ಕಲಾವಿದ ನಂಜುಂಡಸ್ವಾಮಿ  ಅವರು ಪೆನ್ಸಿಲ್ ಲೆಡ್​ನಲ್ಲಿ ಕೆತ್ತಿದ ಸಿಎಂ ಬಸವರಾಜ ಬೊಮ್ಮಾಯಿ ಅವರದ್ದೇ ಕಲಾಕೃತಿಯನ್ನು ಮೈಸೂರಿನಲ್ಲಿ ಉಡುಗೊರೆಯಾಗಿ ನೀಡಿದ್ದಾರೆ. ಪೆನ್ಸಿಲ್ ಲೆಡ್ ನಿಂದ ವಿವಿಧ ಕಲಾಕೃತಿಗಳನ್ನು ಮಾಡುವ ಮೂಲಕ ನಂಜುಂಡಸ್ವಾಮಿ ಗಮನ ಸೆಳೆದಿದ್ದರು. ಸಿಎಂ ಚುನಾವಣಾ ಪ್ರಚಾರಕ್ಕೆಂದು ಮೈಸೂರಿಗೆ ಆಗಮಿಸಿದ್ದ ವೇಳೆ ಉಡುಗರೆ ನೀಡಿದ್ದು, ಕಲಾಕೃತಿಯನ್ನು ಕಂಡು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೊದಲುನಂಜುಂಡಸ್ವಾಮಿ ಮೋದಿ ವಾಜಪೇಯಿ ಸೇರಿ ಹಲವರನ್ನು ಪೆನ್ಸಿಲ್ ಲೆಡ್​ನಲ್ಲಿ ಕೆತ್ತಿದ್ದರು.

ಇದನ್ನು ಓದಿ: ಸಚಿವ ಬಿ.ಸಿ ನಾಗೇಶ್ ಮನೆಗೆ ಮುತ್ತಿಗೆ ಹಾಕಿದ ಪ್ರಕರಣ: ಎನ್​ಎಸ್​ಯುಐ ಅಧ್ಯಕ್ಷ ಸೇರಿದಂತೆ ಕಾರ್ಯಕರ್ತರಿಗೆ ಜಾಮೀನು ನೀಡಿದ ಕೋರ್ಟ್

ನಂತರ ಸಿಎಂ ಬೊಮ್ಮಾಯಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದರು. ಮಠದಲ್ಲಿ ಸಿಎಂ ಬೊಮ್ಮಾಯಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿಗೆ ಸಚಿವರಾದ ಎಸ್ ಟಿ ಸೋಮಶೇಖರ್, ನಾರಾಯಣ್ ಗೌಡ, ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್ ಎ ರಾಮದಾಸ್, ಎಲ್ ನಾಗೇಂದ್ರ ಸೇರಿ ಹಲವು ಮುಖಂಡರು ಸಾಥ್ ನೀಡಿದ್ದರು.

ಪಠ್ಯದಿಂದ ಸುರಪುರ ನಾಯಕರ ವಿಷಯ ಕೈಬಿಟ್ಟ ವಿಚಾರ: ಸಿಎಂಗೆ ಪತ್ರ ಬರೆದ ಸುರಪುರದ ಬಿಜೆಪಿ ಶಾಸಕ

ಯಾದಗಿರಿ: ಪಠ್ಯದಿಂದ ಸುರಪುರ ನಾಯಕರ ವಿಷಯ ಕೈಬಿಟ್ಟ ವಿಚಾರವಾಗಿ ಜಿಲ್ಲೆಯ ಸುರಪುರದ ಬಿಜೆಪಿ ಶಾಸಕ ರಾಜುಗೌಡ ಸಿಎಂ ಬೊಮ್ಮಾಯಿ, ಸಚಿವ ಬಿ.ಸಿ ನಾಗೇಶ್​ ಅವರಿಗೆ ಪತ್ರ ಬರೆದಿದ್ದಾರೆ.  6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ, ಭಾಗ-2ರಲ್ಲಿ ಸುರಪುರ ನಾಯಕರ ವಿಷಯ ತೆಗೆಯಲಾಗಿದೆ. ರಾಜಾ ವೆಂಕಟಪ್ಪ ನಾಯಕರ ವಿಷಯ ಕಡಿತಗೊಳಿಸಿದ್ದಕ್ಕೆ ಬೇಸರ ವ್ಯಕ್ತವಾಗಿದೆ. ಹಿಂದಿನ ಪಠ್ಯದಲ್ಲಿರುವ ಪಾಠವನ್ನೇ ಮುಂದುರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನು ಓದಿ: ಮಂಗಳೂರು ವಿವಿ ಕಾಲೇಜಿನ್​  ಕ್ಲಾಸ್​ ರೂಮ್​ನಲ್ಲಿ ಸಾವರ್ಕರ್​ ಫೋಟೋ; ಫೋಟೋ ತೆರವುಗೊಳಿಸಿದ ಪ್ರಾಂಶುಪಾಲ

ಸುರಪುರದ ನಾಯಕರು ಎಂಬ ಶೀರ್ಷಿಕೆ ಅಡಿಯಲ್ಲಿ ವಿಸ್ತಾರವಾದ ಒಂದು ಪುಟದ ಪಠ್ಯವಿತ್ತು. ಸದ್ಯ ರಾಜಾ ವೆಂಕಟಪ್ಪ ನಾಯಕ ಭಾವಚಿತ್ರ ತೆಗೆದು ಪಠ್ಯ ವಿಷಯವನ್ನ ಕಡಿತಗೊಳಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.  ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Wed, 8 June 22