ಮಾಜಿ ಸಚಿವ ಡಾ.ಮಹದೇವಪ್ಪಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು

| Updated By: guruganesh bhat

Updated on: Sep 04, 2021 | 8:53 PM

ನಿಮ್ಮ ಮೊಬೈಲ್ ನಂಬರ್ ಕಳುಹಿಸಿ. ನಾನೇ ಕರೆ ಮಾಡಿ ಸಂವಾದಕ್ಕೆ ಬರುತ್ತೇನೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಡಾ.ಮಹದೇವಪ್ಪಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು
ಪ್ರತಾಪ್ ಸಿಂಹ
Follow us on

ಮೈಸೂರು: ಸಂಸದ ಪ್ರತಾಪ್ ಸಿಂಹ ಮಾಜಿ ಸಚಿವ ಡಾ.ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ತಮ್ಮನ್ನು ಸಂವಾದಕ್ಕೆ ಆಹ್ವಾನಿಸಿದ ಮಾಜಿ ಸಚಿವ ಡಾ.ಮಹದೇವಪ್ಪ ಅವರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಪತ್ರದ ಮೂಲಕ ತಿರುಗೇಟು ನೀಡಿದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಡಾ. ಮಹದೇವಪ್ಪಗೆ ಎರಡು ಪ್ರಶ್ನೆ ಕೇಳಿದ್ದಾರೆ.

ಎರಡು ಪ್ರಶ್ನೆಗೆ ದಾಖಲೆ ಸಮೇತ ಉತ್ತರ ಕೊಡಿ, ನಾನೇ ಬಂದು ಚರ್ಚೆಯಲ್ಲಿ ಭಾಗಿಯಾಗುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. 2 ಸಾವಿರ ಕೋಟಿಯ 10 ಪಥದ ರಸ್ತೆ ಕಾಮಗಾರಿ ವಿಚಾರವಾಗಿ ನೀವು ಏನಾದರೂ 8 ಪೈಸೆ ಅನುದಾನ ನೀಡಿದ್ದೀರಾ ? ಈ ಹಿಂದೆ ಸಂಸದರಾಗಿದ್ದ ಎಚ್. ವಿಶ್ವನಾಥ್ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನೀವು ಯಾರು ಕೊಟ್ಟಿದ್ದೀರಾ? ಜಲದರ್ಶಿನಿಯಿಂದ ಪಡುವಾರಳ್ಳಿವರೆಗೆ 6 ಪಥದ ರಸ್ತೆ ಕಾಮಗಾರಿಗೆ 12 ಕೋಟಿ ಹಣವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ತಂದಿರಿ. ಆದರೆ ಇದರ ಕೆಲಸ ಮಾಡಿದ್ದೀರಾ? ಮಾಡಿದ್ದರೆ ತೋರಿಸಿ’ ಎಂದು ಸಂಸದ ಪ್ರತಾಪ್ ಸಿಂಹ ಮಾಜಿ ಸಚಿವ ಡಾ.ಮಹದೇವಪ್ಪ ಅವರನ್ನು ಪ್ರಶ್ನಿಸಿದ್ದಾರೆ.

ಈ ಎರಡು ಕಾಮಗಾರಿಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ಉತ್ತರ ಕೊಡಿ. ಜೊತೆಗೆ ನಿಮ್ಮ ಮೊಬೈಲ್ ನಂಬರ್ ಕಳುಹಿಸಿ. ನಾನೇ ಕರೆ ಮಾಡಿ ಸಂವಾದಕ್ಕೆ ಬರುತ್ತೇನೆ. ನಾನು ಊರಲ್ಲಿ ಇರದ ಸಮಯ ನೋಡಿ ಸಂವಾದಕ್ಕೆ ಆಹ್ವಾನ ನೀಡಲಾಗಿದೆ. ಇದು ಅವರ ರಣಹೇಡಿತನ ತೋರಿಸುತ್ತದೆ. ನೀವು ಹಿರಿಯರು ಅಂತಾ ನಿಮಗೆ ಪ್ರತಿಕ್ರಿಯೆ ನೀಡಿದ್ದೇನೆ. ನೀವು ನಿಮ್ಮ ಪಕ್ಷದ ಹಾಲಿ‌ ಮತ್ತು ಮಾಜಿ ಜನಪ್ರತಿನಿಧಿಗಳನ್ನು ಕರೆ ತನ್ನಿ. ನಾನು ಒಬ್ಬನೇ ಬರುತ್ತೇನೆ ಎಂದು ಪತ್ರದ ಮೂಲಕ ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: 

ವಿಶ್ವನಾಥ್ ಟೀಕೆ ಮಾಡದ ವ್ಯಕ್ತಿಗಳೇ ಇಲ್ಲ; ಟ್ರಂಪ್, ಬೈಡೆನ್ ಅವರನ್ನೂ ಬಿಟ್ಟಿಲ್ಲ, ಗ್ಯಾಪ್​ನಲ್ಲಿ ನನ್ನ ಟೀಕೆ ಮಾಡಿದ್ದಾರೆ: ಸಂಸದ ಪ್ರತಾಪ್ ಸಿಂಹ

ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ವಿಚಾರ; ಸಂಸದ ಪ್ರತಾಪ್ ಸಿಂಹಗೆ ಹೆಚ್.ವಿಶ್ವನಾಥ್ ಟಾಂಗ್

(Mysuru Kodagu MP Pratap Simha qrote letter to former minister Dr Mahadevappa)