ಮೈಸೂರು, (ಆಗಸ್ಟ್ 10): ಕಾಂಗ್ರೆಸ್ (Congress) ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ 200 ಯುನಿಟ್ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಸಂಬಂಧ ಇನ್ನೂ ಅನೇಕ ಜನರಲ್ಲಿ ಗೊಂದಲಗಳು ಇವೆ. 200 ಯುನಿಟ್ಗಿಂತ ಕಡಿಮೆ ಉಪಯೋಗಿಸಿದ್ದರೂ ಬಿಲ್ ಕೊಟ್ಟಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ನಮಗೆ ಝೀರೋ ವಿದ್ಯುತ್ ಬಿಲ್ (electricity bill) ಬಂದಿದೆ ಎಂದು ಫುಲ್ ಖುಷಿಯಾಗಿದ್ದಾರೆ. ಇನ್ನು ಗ್ಯಾರಂಟಿಗಳಿಗೆ ಅರ್ಜಿಗಾಗಿ ನಕಲಿ ಆ್ಯಪ್ಗಳು ಸಹ ತಲೆ ಎತ್ತಿದ್ದು, ಸೈಬರ್ ವಂಚಕರು ಸಾರ್ವಜನಿಕರ ಹಣ ಪೀಕಲು ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಅದರಂತೆ ಮೈಸೂರಿನಲ್ಲಿ ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ ವ್ಯಕ್ತಿಯೊಬ್ಬರ ಖಾತೆತಿಂದ ಬರೋಬ್ಬರಿ 5.48 ಲಕ್ಷ ರೂ. ದೋಚಿರು ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಫೋನ್ಪೇ ಮಾಡುವುದಾಗಿ ನಂಬಿಸಿ ಅಂಗವಿಕಲ ಆಟೋ ಚಾಲಕನಿಗೆ ವಂಚಿಸಿದ ಯುವತಿ
ಮೈಸೂರಿನ ಯಾದವಗಿರಿ ಬಡಾವಣೆ ನಿವಾಸಿ ಕಣ್ಣನ್ ಎಂಬುವರಿಗೆ ವಂಚಕರು ದೂರವಾಣಿ ಕರೆ ವಿದ್ಯುತ್ ಬಿಲ್ ಬಾಕಿ ಇದ್ದು, ಲಿಂಕ್ ಮೂಲಕ ಪಾವತಿಸುವಂತೆ ಸೂಚಿಸಿದ್ದಾರೆ. ಕರೆ ಕಡಿತಗೊಳಿಸಿದ ನಂತರ ಖದೀಮರು, ಕಣ್ಣನ್ ಅವರ ಫೋನ್ಗೆ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಹೇಳಿದ್ದಾರೆ. ಅದಂತೆ ಕಣ್ಣನ್ ಅವರು ಸಹ ವಂಚಕರು ಕಳುಹಿಸಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಬಳಿಕ ವಂಚಕರು ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಖಾತೆಯಿಂದ 5,48,149 ರೂ. ಡ್ರಾ ಮಾಡಿಕೊಂಡಿದ್ದಾರೆ. ಹಣ ಡ್ರಾ ಆಗಿರುವ ಮೆಸೇಜ್ ನೋಡಿ ಶಾಕ್ ಆದ ಕಣ್ಣನ್ ಅವರು ಕೂಡಲೇ ಮೈಸೂರು ಸೈಬರ್ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.
ಹೀಗೆ ನಿಮ್ಮ ಮೊಬೈಲ್ಗೆ ನಾನಾ ಬಗೆಯ ಸಂದೇಶಗಳು ಬರುತ್ತಿರುತ್ತವೆ. ನಿಮಗೆ ಲಾಟರಿ ಹೊಡೆದಿದೆ. ನಿಮಗೆ ಕೊಡುಗೆ ನೀಡುತ್ತಿದ್ದೇವೆ ಅಂತೆಲ್ಲಾ ನಾನಾ ಮೆಸೇಜ್ಗಳು ಬರುತ್ತವೆ. ಆದ್ರೆ, ಈ ಬಗ್ಗೆ ನೀವು ಎಚ್ಚರದಿಂದ ಇರುವುದು ಒಳಿತು. ಒಂದು ವಂಚಕರು ಹೇಳಿದ ಹಾಗೇ ಕೇಳಿದ್ರೆ ನಿಮ್ಮ ಖಾತೆಯಲ್ಲಿರುವ ಹಣ ಕೆಲವೇ ಸೆಕೆಂಡ್ಗಳಲ್ಲಿ ಮಾಯವಾಗುವುದು ಗ್ಯಾರಂಟಿ. ಯಾರು ಬಲೆ ಬೀಳುತ್ತಾರೆ ಯಾರಿಲ್ಲ ಎಂದು ಸೈಬರ್ ವಂಚಕರು ಬಕಪಕ್ಷಿಗಳಂತೆ ಕಾದು ಕುಳಿತಕೊಂಡಿರುತ್ತಾರೆ. ಈ ಬಗ್ಗೆ ಎಚ್ಚರದಿಂದ ಇರಿ.
ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:06 pm, Thu, 10 August 23