Sign In

By signing in or creating an account, you agree with Associated Broadcasting Company's Terms & Conditions and Privacy Policy.

18ನೇ ವಯಸ್ಸಿನಲ್ಲಿ ಬರಸಿಡಿಲಂತೆ ಬಂದ ಕಾಯಿಲೆ: ಎದೆಗುಂದದೆ ಎಲ್ಲರಿಗೂ ಸ್ಪೂರ್ತಿಯಾಗುವ ಪುಸ್ತಕ ಬರೆದ ವಿಶೇಷ ಚೇತನ..!

ಆದಿತ್ಯ ವಿಶೇಷ ಚೇತನ. 18 ವರ್ಷದವರಾಗಿದ್ದಾಗ ಅವರಿಗೆ ಬಂದ ಅಪರೂಪದ ಕಾಯಿಲೆ ಅವರ ಕಾಲು,ಕೈ, ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿತು. ಇದರಿಂದ ಆದಿತ್ಯ ಸಾಕಷ್ಟು ಕುಗ್ಗಿ ಹೋದರು. ಆದ್ರೆ ಎದೆಗುಂದಲಿಲ್ಲ. ಎಲ್ಲರಿಗೂ ಸ್ಪೂರ್ತಿಯಾಗಿ ಬದುಕಬೇಕೆಂದು ನಿರ್ಣಯಿಸಿದರು. ಅದರ ಫಲವೇ ಅವರ ಯೂ ಆಲ್ ಸೀ ಪುಸ್ತಕ.

18ನೇ ವಯಸ್ಸಿನಲ್ಲಿ ಬರಸಿಡಿಲಂತೆ ಬಂದ ಕಾಯಿಲೆ: ಎದೆಗುಂದದೆ ಎಲ್ಲರಿಗೂ ಸ್ಪೂರ್ತಿಯಾಗುವ ಪುಸ್ತಕ ಬರೆದ ವಿಶೇಷ ಚೇತನ..!
ವಿಶೇಷ ಚೇತನ ಆದಿತ್ಯ ಆರ್. ಬೇಲೂರು
Follow us
ಪೃಥ್ವಿಶಂಕರ
|

Updated on:Feb 13, 2021 | 8:29 AM

ಮೈಸೂರು:ಆತ 17 ವರ್ಷ ವಯಸ್ಸಿನವರೆಗೂ ಎಲ್ಲರಂತೆಯೇ ಇದ್ದ. 18ನೇ ವಯಸ್ಸಿನಲ್ಲಿ ಬರಸಿಡಿಲಂತೆ ಬಂದ ಕಾಯಿಲೆ ಆತನನ್ನು ವಿಶೇಷ ಚೇತನನನ್ನಾಗಿಸಿತು. ಯುವಕ ವಿಚಲಿತನಾದರೂ ಎದೆಗುಂದಲಿಲ್ಲ. ಇದೀಗ ನೂರಾರು ಜನರಿಗೆ ಸ್ಫೂರ್ತಿಯಾಗುವಂತಹ ಸಾಧನೆ ಮಾಡಿದ್ದಾನೆ. ಹೌದು ಮೈಸೂರಿನ ಜಯಲಕ್ಷ್ಮಿಪುರಂ ನಿವಾಸಿ ಕಿಶನ್ ಬೇಲೂರು ಹಾಗೂ ಸಂಗೀತಾ ಬೇಲೂರು ಅವರ ಪುತ್ರ ಆದಿತ್ಯ ಆರ್. ಬೇಲೂರು ಬರೆದಿರುವ ‘ಯೂ ಆಲ್ ಸೀ’ ಹೆಸರಿನ ಪುಸ್ತಕ ಬಿಡುಗಡೆ ಸಮಾರಂಭ ಮೈಸೂರಿನ ರೇಸ್ ಕ್ಲಬ್ ಹೌಸ್‌ನಲ್ಲಿ ಸಂತಸ ಸಡಗರದಿಂದ ನೆರವೇರಿತು.

ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿತು.. ಅಂದ್ಹಾಗೆ ಆದಿತ್ಯ ವಿಶೇಷ ಚೇತನ. 18 ವರ್ಷದವರಾಗಿದ್ದಾಗ ಅವರಿಗೆ ಬಂದ ಅಪರೂಪದ ಕಾಯಿಲೆ ಅವರ ಕಾಲು,ಕೈ, ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿತು. ಇದರಿಂದ ಆದಿತ್ಯ ಸಾಕಷ್ಟು ಕುಗ್ಗಿ ಹೋದರು. ಆದ್ರೆ ಎದೆಗುಂದಲಿಲ್ಲ. ಎಲ್ಲರಿಗೂ ಸ್ಪೂರ್ತಿಯಾಗಿ ಬದುಕಬೇಕೆಂದು ನಿರ್ಣಯಿಸಿದರು. ಅದರ ಫಲವೇ ಅವರ ಯೂ ಆಲ್ ಸೀ ಪುಸ್ತಕ.

ಡಿಪ್ಲೋಮೋ ಮ್ಯಾನೆಂಜ್‌ಮೆಂಟ್ ಕೋರ್ಸ್ ಮಾಡಿರುವ ಆದಿತ್ಯ ಕಳೆದ 7 ವರ್ಷದಿಂದ ತಾವೇ ಕುಳಿತು ಈ ಪುಸ್ತಕ ಬರೆದಿದ್ದಾರೆ. 264 ಪುಟಗಳ ಈ ಪುಸ್ತಕ ವಾಸ್ತವ ಬದುಕು ಹಾಗೂ ಕಾಲ್ಪನಿಕ ವಿಚಾರವನ್ನು ಒಳಗೊಂಡಿದೆ. ಈ ಪುಸ್ತಕ ಬರೆಯಲು ಆದಿತ್ಯ ಅವರ ತಂದೆ ತಾಯಿ ಸಹಕರಿಸಿದ್ದಾರೆ. ಜೊತೆಗೆ ಮೈಸೂರಿನ ನಿರಂಜನ್ ನಿಕ್ಕಂ, ಡಾ ಪ್ಯಾಮಿಲಾ ಸನತ್ ದಂಪತಿ ಕೈ ಜೋಡಿಸಿದ್ದಾರೆ. ಇದರ ಫಲವಾಗಿ ಅದ್ಬುತ ಪುಸ್ತಕವೊಂದು ಲೋಕಾರ್ಪಣೆಗೊಂಡಿದೆ.

ಈ ಪುಸ್ತಕ ಎಲ್ಲರಿಗೂ ಸ್ಪೂರ್ತಿಯಾಗಲಿದೆ.. ಈ ಪುಸ್ತಕ ಎಲ್ಲರ ಬದುಕಿನಲ್ಲೂ ಸಮಸ್ಯೆಗಳಿವೆ ಅದಕ್ಕೆ ಪರಿಹಾರವೂ ಇದೆ ಅನ್ನೋ ಪಾಸಿಟಿವ್ ಅಂಶವನ್ನು ಒಳಗೊಂಡಿದೆ. ಆದ್ದರಿಂದ ಈ ಪುಸ್ತಕ ಎಲ್ಲರಿಗೂ ಸ್ಪೂರ್ತಿಯಾಗಲಿದೆ. ಒಟ್ಟಾರೆ ತಮ್ಮ ನೋವನ್ನು ಮರೆ ಮಾಚಿ ಎಲ್ಲರಿಗೂ ಸ್ಪೂರ್ತಿಯಾಗಬೇಕೆಂಬ ಅವರ ಚಿಂತನೆ ನಿಜಕ್ಕೂ ಶ್ಲಾಘನೀಯ.

Published On - 8:22 am, Sat, 13 February 21

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ