Mysore News: ವೀಲಿಂಗ್ ಶೋಕಿಗಾಗಿ ಬೈಕ್​ ಕಳ್ಳತನ; ಇಬ್ಬರ ಬಂಧನ

ವೀಲಿಂಗ್ ಶೋಕಿಗಾಗಿ ಬೈಕ್​ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರ ಬಂಧಿಸಿದ್ದಾರೆ. ಧನುಷ್(19), ನಿತಿನ್(19)ಬಂಧಿತ ಆರೋಪಿಗಳು.

Mysore News: ವೀಲಿಂಗ್ ಶೋಕಿಗಾಗಿ ಬೈಕ್​ ಕಳ್ಳತನ; ಇಬ್ಬರ ಬಂಧನ
ಮೈಸೂರಿನಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದವರ ಬಂಧನ
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 04, 2023 | 7:42 AM

ಮೈಸೂರು, ಆ.4: ವೀಲಿಂಗ್(Wheeling) ಶೋಕಿಗಾಗಿ ಬೈಕ್​ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರ ಬಂಧಿಸಿದ್ದಾರೆ. ಧನುಷ್(19), ನಿತಿನ್(19)ಬಂಧಿತ ಆರೋಪಿಗಳು. ಇವರಿಂದ 2.5ಲಕ್ಷ ಮೌಲ್ಯದ 4 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇವರು ಮೈಸೂರಿನ ಶ್ರೀರಾಂಪುರದಲ್ಲಿ ಬೈಕ್ ಕಳ್ಳತನ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಒಂದು ಬೈಕ್ ಕದ್ದು ಅದೇ ಬೈಕ್​ನಲ್ಲಿ ಮತ್ತೊಂದು ಬೈಕ್ ಕದಿಯಲು ಸಂಚು ಹಾಕುತ್ತಿದ್ದರು. ಅರೆಸ್ಟ್​ ಮಾಡಿ ವಿಚಾರಣೆ ವೇಳೆ ಬೈಕ್ ವೀಲಿಂಗ್ ಮಾಡುವ ಸಲುವಾಗಿ ಕಳ್ಳತನ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿಧಿಗಾಗಿ ಜಮೀನೊಂದರಲ್ಲಿ ಭೂಮಿ ಅಗೆದು ಶೋಧ; ಸ್ಥಳದಲ್ಲಿ ಮಂತ್ರದ ದಾರ ಕಟ್ಟಿ, ಅರಿಶಿನ ಕುಂಕುಮದಿಂದ ಪೂಜೆ

ಮೈಸೂರು, ಆ.4: ನಿಧಿಗಾಗಿ ಜಮೀನೊಂದರ ದೇವರ ಕಲ್ಲಿನ‌ ಬಳಿ ಭೂಮಿ ತೋಡಿ ಶೋಧ ನಡೆಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಹೌದು ಗ್ರಾಮದ ಲೋಕೇಶ್ ಎಂಬುವರ ಜಮೀನಲ್ಲಿ ನಿಧಿಗಳ್ಳರು ಮಂತ್ರದ ದಾರ ಕಟ್ಟಿ, ನಿಂಬೆಹಣ್ಣು ಇಟ್ಟು ಅರಿಶಿನ ಕುಂಕುಮದಿಂದ ಪೂಜೆ ಮಾಡಿ‌ ನಿಧಿಗಾಗಿ ಶೋಧ ನಡೆಸಿದ್ದಾರೆ. ಇನ್ನು ಲೊಕೇಶ್​ ಕುಟುಂಬದವರು ಹಾಗೂ ಗ್ರಾಮಸ್ಥರು ಆ ಸ್ಥಳದಲ್ಲಿ ಒಂದು ಹಂಡೆಯಷ್ಟು ಚಿನ್ನದ ನಿಧಿಯಿದೆಯೆಂದು ಹಲವು ವರ್ಷಗಳಿಂದ ನಂಬಿಕೊಂಡಿದ್ದರು.

ನಿಧಿ ಬಗ್ಗೆ ಲೋಕೇಶ್ ಬಳಿ ಮಾತನಾಡಿದ್ದ ಇಬ್ಬರು ಮುಸ್ಲಿಂ ವ್ಯಕ್ತಿಗಳು

ನಿಧಿ ಬಗ್ಗೆ ಒಂದು‌ ತಿಂಗಳ ಹಿಂದೆ ಲೋಕೇಶ್ ಬಳಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಮಾತನಾಡಿದ್ದರು. ಜೊತೆಗೆ ನಿಧಿ ಶೋಧಿಸಿ ಕೊಡುತ್ತೇವೆ ಎಂದು ಭರವಸೆ ಕೂಡ ಕೊಟ್ಟಿದ್ದರು. ಆದರೆ, ಲೋಕೇಶ್ ಕುಟುಂಬದವರಿಗೆ ದೇವರ ಬಗ್ಗೆಯಿದ್ದ ಭಯದಿಂದ ನಿರಾಕರಿಸಿದ್ದರು. ಆದರೂ, ದುಷ್ಕರ್ಮಿಗಳು ಹುಣ್ಣಿಮೆಯ ದಿನ ಬಂದು ಜಾಗ ಶೋಧಿಸಿದ್ದಾರೆ. ಇದೀಗ ಘಟನೆ ಸಂಬಂಧ ಲೋಕೇಶ್ ಕುಟುಂಬ ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:Mysore: ಮೈಸೂರಿನಲ್ಲಿ ಹೆಚ್ಚಿದ ಐಶಾರಾಮಿ ಕಾರು ಕಳ್ಳತನ; ಉದ್ಯಮಿಗಳು, ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳ ಕಾರುಗಳೇ ಟಾರ್ಗೆಟ್

ಮೈಸೂರಿನಲ್ಲಿ ಸರಕಳ್ಳತನಕ್ಕೆ ವಿಫಲ ಯತ್ನ; ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಮೈಸೂರು: ಮಹಿಳೆಯರು ವಾಕಿಂಗ್ ಮಾಡುವಾಗ ಸರಕಳ್ಳತನಕ್ಕೆ ಯತ್ನಿಸಿದ ಘಟನೆ ಮೈಸೂರಿನ ಕೆ.ಆರ್ ಮೊಹಲ್ಲಾದಲ್ಲಿ ನಡೆದಿದೆ. ಕಳ್ಳನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಮಹಿಳೆಯರು ನಡೆದುಕೊಂಡು ಹೋಗುವಾಗ ಅವರನ್ನು ಫಾಲೋ ಮಾಡಿದ ಅಪರಿಚಿತ ಯುವಕ, ಸಮಯ ನೋಡಿ ಸರ ಕಸಿಯಲು ಯುವಕನಿಂದ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಿಕೊಂಡಿದ್ದು, ತಕ್ಷಣ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:41 am, Fri, 4 August 23

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us