ಮೈಸೂರು: ಕೇಂದ್ರದ ಪ್ರಶಸ್ತಿ ಪಡೆದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು; ಕೊರೊನಾ ನಡುವೆಯೂ ಮಹತ್ವದ ಸಾಧನೆ

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಈ ಹಿಂದೆ ಸಹ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಸದ್ಯ ಕೊರೊನಾ ಮಹಾಮಾರಿಯ ಆತಂಕದ ನಡುವೆಯೂ ಇಂತಹದೊಂದು ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮೈಸೂರು: ಕೇಂದ್ರದ ಪ್ರಶಸ್ತಿ ಪಡೆದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು; ಕೊರೊನಾ ನಡುವೆಯೂ ಮಹತ್ವದ ಸಾಧನೆ
ಅಟಲ್ ರಾಂಕಿಂಗ್ ಆಫ್ ಇನ್ಸ್‌ಟಿಟ್ಯೂಸನ್ ಆನ್ ಇನ್ನೋವೇಷನ್ ಪ್ರಶಸ್ತಿ
Edited By:

Updated on: Jan 14, 2022 | 4:29 PM

ಮೈಸೂರು: ದಿನೇ ದಿನೇ ಕೊರೊನಾ (coronavirus) ಮಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದೆ. ಶಾಲೆಗಳು ಕಾಲೇಜುಗಳು (College) ಬಂದ್ ಆಗುತ್ತಿವೆ. ಪೋಷಕರು, ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಇದರ ನಡುವೆ ಮೈಸೂರಿ‌ನ ಕಾಲೇಜೊಂದು ಅಪರೂಪದ ಸಾಧನೆ ಮಾಡಿದ್ದು, ಕೇಂದ್ರದ ಗೌರವಕ್ಕೆ ಪಾತ್ರವಾಗಿದೆ. ಮೈಸೂರಿನ ವಿಜಯನಗರದಲ್ಲಿರುವ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಕೇಂದ್ರದ ಪ್ರತಿಷ್ಠಿತ ಪ್ರಶಸ್ತಿಯ‌ನ್ನು ತನ್ನದಾಗಿಸಿಕೊಂಡಿದೆ. ಕೇಂದ್ರ ಸಚಿವಾಲಯಸ ಪ್ರತಿಷ್ಠಿತ ಅಟಲ್ ರಾಂಕಿಂಗ್ ಆಫ್ ಇನ್ಸ್‌ಟಿಟ್ಯೂಸನ್ ಆನ್ ಇನ್ನೋವೇಷನ್ ಪ್ರಶಸ್ತಿಯನ್ನು(Atal Ranking of Institutions on Innovation Award) ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿಗೆ ಲಭಿಸಿದೆ.

ದೇಶದ ವಿವಿಧ ರಾಜ್ಯಗಳಿಂದ ಮೂರು ಸಾವಿರ ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಹೊಸ ಆವಿಷ್ಕಾರಗಳಿಗಾಗಿ ನೀಡುವ ಕೇಂದ್ರದ ಪ್ರಶಸ್ತಿ ಇದಾಗಿದ್ದು, ಕೊರೊನಾದ ನಡುವೆಯೂ ಉತ್ತಮ ನಿರ್ವಹಣೆ, ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ, ಕಾಲೇಜಿನ ಚಟುವಟಿಕೆ ಸೇರಿ‌ ಹಲವು ಮಾನದಂಡಗಳ ಆಧಾರದ ಮೇಲೆ ಈ ಪ್ರಶಸ್ತಿಯನ್ನು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿಗೆ ನೀಡಲಾಗಿದೆ.

ಇನ್ನು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಈ ಹಿಂದೆ ಸಹ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಸದ್ಯ ಕೊರೊನಾ ಮಹಾಮಾರಿಯ ಆತಂಕದ ನಡುವೆಯೂ ಇಂತಹದೊಂದು ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ವಿಶ್ವನಾಥ್ ಈ ಬಗ್ಗೆ ಮಾತನಾಡಿದ್ದು, ಕೊರೊನಾ ಸಂದರ್ಭದ ನಡುವೆಯೂ ಈ ಮಟ್ಟದ ಸಾಧನೆ ನಿಜಕ್ಕೂ ಖುಷಿಕೊಟ್ಟಿದೆ. ಇದರ ಜೊತೆಗೆ ಕಾಲೇಜುಗಳನ್ನು ಬಂದ್ ಮಾಡಬಾರದು ಎಂದು ಮನವಿ ಮಾಡಿದೆ.

ವರದಿ: ರಾಮ್

ಇದನ್ನೂ ಓದಿ:
ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸ್ಫೋಟ; ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆ

ತುಮಕೂರು: ಎಲೆರಾಂಪುರ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ ಉತ್ತಮ ಪಂಚಾಯಿತಿ ಪುರಸ್ಕಾರ