ಷರತ್ತು ಹಾಕಿ, ಪೊಲೀಸರನ್ನ ಸಂಪರ್ಕಿಸಿದ ನಿತ್ಯಾನಂದ ಶಿಷ್ಯೆಯರು

ಅಹಮದಾಬಾದ್: ಬಿಡದಿ ನಿತ್ಯಾನಂದ ಸ್ವಾಮಿಯ ಶಿಷ್ಯೆಯರ ನಾಪತ್ತೆ ಪ್ರಕರಣ ಮತ್ತೊಂದು ಹಂತ ತಲುಪಿದೆ. ಫೋನ್ ಮೂಲಕ ಪೊಲೀಸರು ನಿತ್ಯಾನಂದನ ಶಿಷ್ಯೆಯರನ್ನು ಸಂಪರ್ಕಿಸಿದ್ದಾರೆ. ಆ ಶಿಷ್ಯೆಯರಿಬ್ಬರೂ ಕೊರಿಯಾ ಮೂಲದ ನಂಬರ್‌ ಮೂಲಕ ಮಾತಾಡಿದ್ದಾರೆ. ಕೋರಿಯಾದ ಪ್ರಾಕ್ಸಿ ನಂಬರ್ ನಲ್ಲಿ ಮಾತನಾಡಿದಾರೆ ಎಂದು ತಿಳಿದುಬಂದಿದೆ. ಹೀಗೆ ಗುಜರಾತ್ ಪೊಲೀಸರನ್ನ ಸಂಪರ್ಕಿಸಿರುವ ಶಿಷ್ಯೆಯರಿಬ್ಬರೂ ಬಂಧಿಸಿರುವ ಇನ್ನಿಬ್ಬರನ್ನು ಬಿಡುಗಡೆಗೊಳಿಸುವಂತೆ ಷರತ್ತು ವಿಧಿಸಿದ್ದಾರೆ. ಅವರಿಬ್ಬರನ್ನು ಬಿಡುಗಡೆಗೊಳಿಸಿದ್ರೆ ಮಾತ್ರ ತಾವು ಪೊಲೀಸರೆದುರು ಹಾಜರಾಗುವುದಾಗಿ ಫೋನ್​ನಲ್ಲಿ ತಿಳಿಸಿದ್ದಾರೆ. ನಾವಿಬ್ಬರು ಪ್ರಾಪ್ತ ವಯಸ್ಕರು ಎಂದೂ ಆ ಸಹೋದರಿಯರಿಬ್ಬರೂ ಪೊಲೀಸರಿಗೆ […]

ಷರತ್ತು ಹಾಕಿ, ಪೊಲೀಸರನ್ನ ಸಂಪರ್ಕಿಸಿದ ನಿತ್ಯಾನಂದ ಶಿಷ್ಯೆಯರು

Updated on: Dec 03, 2019 | 5:11 PM

ಅಹಮದಾಬಾದ್: ಬಿಡದಿ ನಿತ್ಯಾನಂದ ಸ್ವಾಮಿಯ ಶಿಷ್ಯೆಯರ ನಾಪತ್ತೆ ಪ್ರಕರಣ ಮತ್ತೊಂದು ಹಂತ ತಲುಪಿದೆ. ಫೋನ್ ಮೂಲಕ ಪೊಲೀಸರು ನಿತ್ಯಾನಂದನ ಶಿಷ್ಯೆಯರನ್ನು ಸಂಪರ್ಕಿಸಿದ್ದಾರೆ. ಆ ಶಿಷ್ಯೆಯರಿಬ್ಬರೂ ಕೊರಿಯಾ ಮೂಲದ ನಂಬರ್‌ ಮೂಲಕ ಮಾತಾಡಿದ್ದಾರೆ. ಕೋರಿಯಾದ ಪ್ರಾಕ್ಸಿ ನಂಬರ್ ನಲ್ಲಿ ಮಾತನಾಡಿದಾರೆ ಎಂದು ತಿಳಿದುಬಂದಿದೆ.

ಹೀಗೆ ಗುಜರಾತ್ ಪೊಲೀಸರನ್ನ ಸಂಪರ್ಕಿಸಿರುವ ಶಿಷ್ಯೆಯರಿಬ್ಬರೂ ಬಂಧಿಸಿರುವ ಇನ್ನಿಬ್ಬರನ್ನು ಬಿಡುಗಡೆಗೊಳಿಸುವಂತೆ ಷರತ್ತು ವಿಧಿಸಿದ್ದಾರೆ. ಅವರಿಬ್ಬರನ್ನು ಬಿಡುಗಡೆಗೊಳಿಸಿದ್ರೆ ಮಾತ್ರ ತಾವು ಪೊಲೀಸರೆದುರು ಹಾಜರಾಗುವುದಾಗಿ ಫೋನ್​ನಲ್ಲಿ ತಿಳಿಸಿದ್ದಾರೆ. ನಾವಿಬ್ಬರು ಪ್ರಾಪ್ತ ವಯಸ್ಕರು ಎಂದೂ ಆ ಸಹೋದರಿಯರಿಬ್ಬರೂ ಪೊಲೀಸರಿಗೆ ಖಡಕ್ಕಾಗಿ ಹೇಳಿದ್ದಾರೆ.

Published On - 5:10 pm, Tue, 3 December 19