AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಸಚಿವರ ತವರಿನಲ್ಲೇ ಹೆಲ್ತ್ ವರ್ಕರ್ಸ್​ಗಿಲ್ಲ ಸಂಬಳ, ವೇತನ ಲೆಕ್ಕಿಸದೆ ನಿರಂತರ ಶ್ರಮ!

ಬಳ್ಳಾರಿ: ಕೆಲಸಕ್ಕೆ ಹೋಗೋದು ಅತ್ತ ಇರ್ಲಿ. ಮನೆಯಿಂದ ಹೊರಗೆ ಕಾಲು ಇಡೋಕೂ ಭಯ. ಎಲ್ಲಿ ನಮ್ಮ ಮೇಲೂ ಕೊರೊನಾ ಕೆಂಗಣ್ಣು ಬೀರುತ್ತೋ ಅನ್ನೋ ಆತಂಕ ಎಲ್ಲರನ್ನೂ ಕಾಡ್ತಿದೆ. ಹೀಗಾಗಿಯೇ ಪ್ರತಿಯೊಬ್ಬರು ತಮ್ಮ ರಕ್ಷಣೆ ಬಗ್ಗೆ ಮತ್ತು ಕುಟುಂಬದವರ ಸೇಫ್ಟಿ ಬಗ್ಗೆ ಚಿಂತಿಸುತ್ತಿದ್ದಾರೆ. ಆದ್ರೆ ಇದ್ಯಾವುದನ್ನೂ ಲೆಕ್ಕಿಸದೆ ಕೊರೊನಾ ವಿರುದ್ಧದ ಈ ಮಹಾಯುದ್ಧದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಿರುವವರು ಆರೋಗ್ಯ ಕಾರ್ಯಕರ್ತರು. ನೂರಾರು ಸಮಸ್ಯೆ ಬದಿಗಿಟ್ಟು, ನಮ್ಮ, ನಿಮ್ಮೆಲ್ಲರ ಆರೋಗ್ಯ ರಕ್ಷಣೆಗೆ ಇವರೆಲ್ಲರೂ ಶ್ರಮಿಸುತ್ತಿದ್ದಾರೆ. ಆದ್ರೂ ಆರೋಗ್ಯ ಕಾರ್ಯಕರ್ತರಿಗೆ […]

ಆರೋಗ್ಯ ಸಚಿವರ ತವರಿನಲ್ಲೇ ಹೆಲ್ತ್ ವರ್ಕರ್ಸ್​ಗಿಲ್ಲ ಸಂಬಳ, ವೇತನ ಲೆಕ್ಕಿಸದೆ ನಿರಂತರ ಶ್ರಮ!
ಸಾಧು ಶ್ರೀನಾಥ್​
|

Updated on: May 01, 2020 | 7:11 AM

Share

ಬಳ್ಳಾರಿ: ಕೆಲಸಕ್ಕೆ ಹೋಗೋದು ಅತ್ತ ಇರ್ಲಿ. ಮನೆಯಿಂದ ಹೊರಗೆ ಕಾಲು ಇಡೋಕೂ ಭಯ. ಎಲ್ಲಿ ನಮ್ಮ ಮೇಲೂ ಕೊರೊನಾ ಕೆಂಗಣ್ಣು ಬೀರುತ್ತೋ ಅನ್ನೋ ಆತಂಕ ಎಲ್ಲರನ್ನೂ ಕಾಡ್ತಿದೆ. ಹೀಗಾಗಿಯೇ ಪ್ರತಿಯೊಬ್ಬರು ತಮ್ಮ ರಕ್ಷಣೆ ಬಗ್ಗೆ ಮತ್ತು ಕುಟುಂಬದವರ ಸೇಫ್ಟಿ ಬಗ್ಗೆ ಚಿಂತಿಸುತ್ತಿದ್ದಾರೆ.

ಆದ್ರೆ ಇದ್ಯಾವುದನ್ನೂ ಲೆಕ್ಕಿಸದೆ ಕೊರೊನಾ ವಿರುದ್ಧದ ಈ ಮಹಾಯುದ್ಧದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಿರುವವರು ಆರೋಗ್ಯ ಕಾರ್ಯಕರ್ತರು. ನೂರಾರು ಸಮಸ್ಯೆ ಬದಿಗಿಟ್ಟು, ನಮ್ಮ, ನಿಮ್ಮೆಲ್ಲರ ಆರೋಗ್ಯ ರಕ್ಷಣೆಗೆ ಇವರೆಲ್ಲರೂ ಶ್ರಮಿಸುತ್ತಿದ್ದಾರೆ. ಆದ್ರೂ ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ಸಮಯಕ್ಕೆ ಸಂಬಳವೇ ಸಿಗುತ್ತಿಲ್ಲ ಅನ್ನೋದು ಎಂಥವರಲ್ಲೂ ಬೇಸರ ಮೂಡಿಸುವಂತಿದೆ.

3 ತಿಂಗಳಿಂದ ಸಂಬಳ ಸಿಗದೆ ಸಿಬ್ಬಂದಿಗೆ ತೀವ್ರ ಸಂಕಷ್ಟ: ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಆರೋಗ್ಯ ಸಹಾಯಕರು, ನರ್ಸ್​ಗಳು ಸೇರಿದಂತೆ ಒಟ್ಟು 1822 ಸಿಬ್ಬಂದಿಗೆ 3 ತಿಂಗಳಿಂದ ವೇತನವನ್ನೇ ಬಿಡುಗಡೆ ಮಾಡಿಲ್ಲವಂತೆ. ಇನ್ನು ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನ ಕೇಳಿದ್ರೆ, ವೇತನ ಬಿಡುಗಡೆ ಸಂಬಂಧ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಜೊತೆ ಮಾತನಾಡಿದ್ದೇವೆ ಅಂತಿದ್ದಾರೆ. ಅಲ್ಲದೆ ವೇತನ ಬಿಡುಗಡೆ ಆಗುತ್ತೆ ಅಂತಾ ಭರವಸೆ ಕೊಡ್ತಾರೆ.

ವೇತನ ಲೆಕ್ಕಿಸದೆ ಕೊರೊನಾ ಹೀರೋಗಳ ನಿರಂತರ ಶ್ರಮ: ಇನ್ನು ಕಳೆದ 3 ತಿಂಗಳಿಂದ ಇಂಥ ಸಮಸ್ಯೆಯಾಗಿದ್ದು, ಕೊರೊನಾ ದಾಳಿಯಿಟ್ಟ ಸಂದರ್ಭದಲ್ಲೂ ಇದೇ ರೀತಿ ಸಂಕಷ್ಟ ಎದುರಿಸುವಂತಾಗಿದೆ. ಆದ್ರೂ ಧೃತಿಗೆಡದ ಆರೋಗ್ಯ ಕಾರ್ಯಕರ್ತರು ಸಂಬಳ ಲೆಕ್ಕಿಸದೆ ದೇಶಸೇವೆ ಹಾಗೂ ನಾಡಿನ ಜನರ ಸೇವೆ ಮಾಡುತ್ತಿದ್ದಾರೆ. ಇದನ್ನಾದ್ರೂ ಸರ್ಕಾರ ಇವರ ಕಷ್ಟ ಗಮನಿಸಬೇಕಿದೆ.

ಒಟ್ನಲ್ಲಿ ಜೀವನ ಮತ್ತು ಜೀವ ಎರಡನ್ನೂ ಪಣಕ್ಕಿಟ್ಟು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ನೆರವಿಗೆ ಸರ್ಕಾರ ಧಾವಿಸಬೇಕಿದೆ. ಆರೋಗ್ಯ ಸಚಿವರು ಈಗಲಾದರೂ ತಮ್ಮ ತವರು ಜಿಲ್ಲೆಯಲ್ಲೇ ಆಗುತ್ತಿರುವ ಈ ಅನ್ಯಾಯ ಸರಿಪಡಿಸಲು ಖಡಕ್ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಸಮಸ್ಯೆ ಸುಳಿಗೆ ಸಿಲುಕಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಇದು ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವಿರುತ್ತದೆ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ