AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಸಚಿವರ ತವರಿನಲ್ಲೇ ಹೆಲ್ತ್ ವರ್ಕರ್ಸ್​ಗಿಲ್ಲ ಸಂಬಳ, ವೇತನ ಲೆಕ್ಕಿಸದೆ ನಿರಂತರ ಶ್ರಮ!

ಬಳ್ಳಾರಿ: ಕೆಲಸಕ್ಕೆ ಹೋಗೋದು ಅತ್ತ ಇರ್ಲಿ. ಮನೆಯಿಂದ ಹೊರಗೆ ಕಾಲು ಇಡೋಕೂ ಭಯ. ಎಲ್ಲಿ ನಮ್ಮ ಮೇಲೂ ಕೊರೊನಾ ಕೆಂಗಣ್ಣು ಬೀರುತ್ತೋ ಅನ್ನೋ ಆತಂಕ ಎಲ್ಲರನ್ನೂ ಕಾಡ್ತಿದೆ. ಹೀಗಾಗಿಯೇ ಪ್ರತಿಯೊಬ್ಬರು ತಮ್ಮ ರಕ್ಷಣೆ ಬಗ್ಗೆ ಮತ್ತು ಕುಟುಂಬದವರ ಸೇಫ್ಟಿ ಬಗ್ಗೆ ಚಿಂತಿಸುತ್ತಿದ್ದಾರೆ. ಆದ್ರೆ ಇದ್ಯಾವುದನ್ನೂ ಲೆಕ್ಕಿಸದೆ ಕೊರೊನಾ ವಿರುದ್ಧದ ಈ ಮಹಾಯುದ್ಧದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಿರುವವರು ಆರೋಗ್ಯ ಕಾರ್ಯಕರ್ತರು. ನೂರಾರು ಸಮಸ್ಯೆ ಬದಿಗಿಟ್ಟು, ನಮ್ಮ, ನಿಮ್ಮೆಲ್ಲರ ಆರೋಗ್ಯ ರಕ್ಷಣೆಗೆ ಇವರೆಲ್ಲರೂ ಶ್ರಮಿಸುತ್ತಿದ್ದಾರೆ. ಆದ್ರೂ ಆರೋಗ್ಯ ಕಾರ್ಯಕರ್ತರಿಗೆ […]

ಆರೋಗ್ಯ ಸಚಿವರ ತವರಿನಲ್ಲೇ ಹೆಲ್ತ್ ವರ್ಕರ್ಸ್​ಗಿಲ್ಲ ಸಂಬಳ, ವೇತನ ಲೆಕ್ಕಿಸದೆ ನಿರಂತರ ಶ್ರಮ!
ಸಾಧು ಶ್ರೀನಾಥ್​
|

Updated on: May 01, 2020 | 7:11 AM

Share

ಬಳ್ಳಾರಿ: ಕೆಲಸಕ್ಕೆ ಹೋಗೋದು ಅತ್ತ ಇರ್ಲಿ. ಮನೆಯಿಂದ ಹೊರಗೆ ಕಾಲು ಇಡೋಕೂ ಭಯ. ಎಲ್ಲಿ ನಮ್ಮ ಮೇಲೂ ಕೊರೊನಾ ಕೆಂಗಣ್ಣು ಬೀರುತ್ತೋ ಅನ್ನೋ ಆತಂಕ ಎಲ್ಲರನ್ನೂ ಕಾಡ್ತಿದೆ. ಹೀಗಾಗಿಯೇ ಪ್ರತಿಯೊಬ್ಬರು ತಮ್ಮ ರಕ್ಷಣೆ ಬಗ್ಗೆ ಮತ್ತು ಕುಟುಂಬದವರ ಸೇಫ್ಟಿ ಬಗ್ಗೆ ಚಿಂತಿಸುತ್ತಿದ್ದಾರೆ.

ಆದ್ರೆ ಇದ್ಯಾವುದನ್ನೂ ಲೆಕ್ಕಿಸದೆ ಕೊರೊನಾ ವಿರುದ್ಧದ ಈ ಮಹಾಯುದ್ಧದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಿರುವವರು ಆರೋಗ್ಯ ಕಾರ್ಯಕರ್ತರು. ನೂರಾರು ಸಮಸ್ಯೆ ಬದಿಗಿಟ್ಟು, ನಮ್ಮ, ನಿಮ್ಮೆಲ್ಲರ ಆರೋಗ್ಯ ರಕ್ಷಣೆಗೆ ಇವರೆಲ್ಲರೂ ಶ್ರಮಿಸುತ್ತಿದ್ದಾರೆ. ಆದ್ರೂ ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ಸಮಯಕ್ಕೆ ಸಂಬಳವೇ ಸಿಗುತ್ತಿಲ್ಲ ಅನ್ನೋದು ಎಂಥವರಲ್ಲೂ ಬೇಸರ ಮೂಡಿಸುವಂತಿದೆ.

3 ತಿಂಗಳಿಂದ ಸಂಬಳ ಸಿಗದೆ ಸಿಬ್ಬಂದಿಗೆ ತೀವ್ರ ಸಂಕಷ್ಟ: ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಆರೋಗ್ಯ ಸಹಾಯಕರು, ನರ್ಸ್​ಗಳು ಸೇರಿದಂತೆ ಒಟ್ಟು 1822 ಸಿಬ್ಬಂದಿಗೆ 3 ತಿಂಗಳಿಂದ ವೇತನವನ್ನೇ ಬಿಡುಗಡೆ ಮಾಡಿಲ್ಲವಂತೆ. ಇನ್ನು ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನ ಕೇಳಿದ್ರೆ, ವೇತನ ಬಿಡುಗಡೆ ಸಂಬಂಧ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಜೊತೆ ಮಾತನಾಡಿದ್ದೇವೆ ಅಂತಿದ್ದಾರೆ. ಅಲ್ಲದೆ ವೇತನ ಬಿಡುಗಡೆ ಆಗುತ್ತೆ ಅಂತಾ ಭರವಸೆ ಕೊಡ್ತಾರೆ.

ವೇತನ ಲೆಕ್ಕಿಸದೆ ಕೊರೊನಾ ಹೀರೋಗಳ ನಿರಂತರ ಶ್ರಮ: ಇನ್ನು ಕಳೆದ 3 ತಿಂಗಳಿಂದ ಇಂಥ ಸಮಸ್ಯೆಯಾಗಿದ್ದು, ಕೊರೊನಾ ದಾಳಿಯಿಟ್ಟ ಸಂದರ್ಭದಲ್ಲೂ ಇದೇ ರೀತಿ ಸಂಕಷ್ಟ ಎದುರಿಸುವಂತಾಗಿದೆ. ಆದ್ರೂ ಧೃತಿಗೆಡದ ಆರೋಗ್ಯ ಕಾರ್ಯಕರ್ತರು ಸಂಬಳ ಲೆಕ್ಕಿಸದೆ ದೇಶಸೇವೆ ಹಾಗೂ ನಾಡಿನ ಜನರ ಸೇವೆ ಮಾಡುತ್ತಿದ್ದಾರೆ. ಇದನ್ನಾದ್ರೂ ಸರ್ಕಾರ ಇವರ ಕಷ್ಟ ಗಮನಿಸಬೇಕಿದೆ.

ಒಟ್ನಲ್ಲಿ ಜೀವನ ಮತ್ತು ಜೀವ ಎರಡನ್ನೂ ಪಣಕ್ಕಿಟ್ಟು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ನೆರವಿಗೆ ಸರ್ಕಾರ ಧಾವಿಸಬೇಕಿದೆ. ಆರೋಗ್ಯ ಸಚಿವರು ಈಗಲಾದರೂ ತಮ್ಮ ತವರು ಜಿಲ್ಲೆಯಲ್ಲೇ ಆಗುತ್ತಿರುವ ಈ ಅನ್ಯಾಯ ಸರಿಪಡಿಸಲು ಖಡಕ್ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಸಮಸ್ಯೆ ಸುಳಿಗೆ ಸಿಲುಕಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಇದು ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವಿರುತ್ತದೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ