AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ ಜೊತೆ ಹೋಗುವಾಗ ಉಸಿರುಗಟ್ಟಿ ಮಗು ಸಾವನ್ನಪ್ಪಿದ್ದ ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ (Lingsugur taluk in Raichur) ಕನಸಾವಿ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿತ್ತು. ಮುದಗಲ್ ಪೊಲೀಸರಿಂದ ವಿಚಾರಣೆ ವೇಳೆ ಅಸಲಿ ತಂದೆ ಮಹಾಂತೇಶ್ ತನ್ನ ಕುಕೃತ್ಯದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾನೆ. ಇದೇ ಸೆಪ್ಟೆಂಬರ್ 3 ರಾತ್ರಿ ಪತ್ನಿ ಭೀಮಮ್ಮಳ ಊರು ಕನಸಾವಿಗೆ ಆರೋಪಿ ತಂದೆ ಮಹಾಂತೇಶ್ ಬಾಗಲಕೋಟೆಯಿಂದ ಬಂದಿದ್ದ.

ತಂದೆ ಜೊತೆ ಹೋಗುವಾಗ ಉಸಿರುಗಟ್ಟಿ ಮಗು ಸಾವನ್ನಪ್ಪಿದ್ದ ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು
ಮಗು ಸಾವನ್ನಪ್ಪಿದ್ದ ಪ್ರಕರಣ: ತನಿಖೆ ವೇಳೆ ಭಯಾನಕ ಸತ್ಯ ಬಯಲು
ಭೀಮೇಶ್​​ ಪೂಜಾರ್
| Edited By: |

Updated on: Sep 07, 2023 | 1:49 PM

Share

ರಾಯಚೂರು: ಜನ್ಮ ನೀಡಿದ ತಂದೆಯ ಜೊತೆ ಹೋಗುವಾಗ ಉಸಿರುಗಟ್ಟಿ (suffocation) ಮಗು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಪೊಲೀಸರ ತನಿಖೆಯ ವೇಳೆ ಭಯಾನಕ ಸತ್ಯ ಬಯಲಾಗಿದೆ. ಮಗುವಿನ ತಂದೆ ತನ್ನ ಪತ್ನಿಯನ್ನು ಕೊಲೆಗೈಯುವ ಸ್ಕೆಚ್ ಗೆ ಹಸುಗೂಸು ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ 14 ತಿಂಗಳ ತನ್ನದೇ ಮಗುವನ್ನು (Son) ತಂದೆ (father) ಕೊಲೆಗೈದು (Murder), ಕಲ್ಲುಗಳ ಸಂದಿಯಲ್ಲಿ ಹೂತಿಟ್ಟಿದ್ದ ವಿಷಯ ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ (Lingsugur taluk in Raichur) ಕನಸಾವಿ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿತ್ತು. ಮುದಗಲ್ ಪೊಲೀಸರಿಂದ ವಿಚಾರಣೆ ವೇಳೆ ಅಸಲಿ ತಂದೆ ಮಹಾಂತೇಶ್ ತನ್ನ ಕುಕೃತ್ಯದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾನೆ. ಇದೇ ಸೆಪ್ಟೆಂಬರ್ 3 ರಾತ್ರಿ ಪತ್ನಿ ಭೀಮಮ್ಮಳ ಊರು ಕನಸಾವಿಗೆ ಆರೋಪಿ ತಂದೆ ಮಹಾಂತೇಶ್ ಬಾಗಲಕೋಟೆಯಿಂದ ಬಂದಿದ್ದ.

Also Read: Viral Video: ಈ ಕೊಕ್ಕರೆಯಮ್ಮ ಯಾಕೆ ತನ್ನ ಮಗುವನ್ನು ಕುಕ್ಕಿ ಕುಕ್ಕಿ ಕೆಳಗೆಸೆದಳೋ?

ಈ ವೇಳೆ ಪತ್ನಿ ಜೊತೆ ಜಗಳವಾಡಿ 14 ತಿಂಗಳ ಹಸುಗೂಸು ಅಭಿನವನನ್ನು ಆರೋಪಿ ಮಹಾಂತೇಶ್ ತನ್ನ ಜೊತೆರ ಕರೆದೊಯ್ದಿದ್ದ. ಮಾರನೇ ದಿನ ಮಗುವಿನ ಸುಳಿವು ಸಿಗದೇ ಇದ್ದಾಗ ಮುದಗಲ್ ಪೊಲೀಸರಿಗೆ ದೂರು ನಿಡಲಾಗಿತ್ತು. ಬಳಿಕ ಮುದಗಲ್ ಪೊಲೀಸರು ಆರೋಪಿ ತಂದೆ ಮಹಾಂತೇಶನ ವಿಚಾರಣೆ ನಡೆಸಿದ್ದರು. ಈ ವೇಳೆ ಪತ್ನಿ ಹತ್ಯೆಗೆ ಎರಡು ಮೂರು ಬಾರಿ ಪ್ರಯತ್ನಿಸಿದ್ದೆ. ಆಗ ಆಕೆಯ ಪಕ್ಕದಲ್ಲಿ ಮಲಗಿದ್ದ 14 ತಿಂಗಳ ಮಗ ಅಡ್ಡಿಪಡಿಸುತ್ತಿದ್ದ ಎಂದು ಪತ್ನಿಯ ಕೊಲೆ ಮಾಡಲಾಗದ ಹಿನ್ನೆಲೆ ಮೊದಲು ಮಗನನ್ನು ಕೊಂದು, ನಂತರ ಪತ್ನಿಯನ್ನೂ ಕೊಲ್ಲಲು ಮುಂದಾಗಿದ್ದೆ. ಮಗುವನ್ನು ಕೊಂದು ಕನಸಾವಿ ಗ್ರಾಮದ ಹೊರಭಾಗದಲ್ಲಿ ಹೂತಿಟ್ಟಿದ್ದೆ ಎಂದು ಆರೋಪಿ ತಂದೆ ಮಹಾಂತೇಶ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ