ರಾಯಚೂರಿನಲ್ಲಿ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ

ಸಫಾಯಿ ಕರ್ಮಚಾರಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಸತೀಶ್, ಸಫಾಯಿ ಕರ್ಮಚಾರಿಗಳ ತುರ್ತು ಸಭೆ ಕರೆದಿದ್ದಾರೆ. 80 ಜನರಿಗೆ ಗುರುತಿನ ಚೀಟಿ ನೀಡುವ ಕುರಿತು ವಿಶೇಷ ವರದಿ ನೀಡಲು ಖಡಕ್ ಸೂಚನೆ ನೀಡಿದ್ದಾರೆ.

ರಾಯಚೂರಿನಲ್ಲಿ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ
ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ
Updated By: sandhya thejappa

Updated on: Sep 21, 2021 | 2:51 PM

ರಾಯಚೂರು: ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಸಫಾಯಿ ಕರ್ಮಚಾರಿಗಳ ಗುರುತಿನ ಚೀಟಿಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ತಡೆದರೂ ಚರಂಡಿ ನೀರಿನಲ್ಲಿ ಕುಳಿತು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸಫಾಯಿ ಕರ್ಮಾಚಾರಿ ಗೀತಾಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪೊಲೀಸರ ಎದುರೇ ಮೈ ಮೇಲೆ ನೀರು ಸುರಿದುಕೊಂಡಿದ್ದಾರೆ.

ಸಫಾಯಿ ಕರ್ಮಚಾರಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಸತೀಶ್, ಸಫಾಯಿ ಕರ್ಮಚಾರಿಗಳ ತುರ್ತು ಸಭೆ ಕರೆದಿದ್ದಾರೆ. 80 ಜನರಿಗೆ ಗುರುತಿನ ಚೀಟಿ ನೀಡುವ ಕುರಿತು ವಿಶೇಷ ವರದಿ ನೀಡಲು ಖಡಕ್ ಸೂಚನೆ ನೀಡಿದ್ದಾರೆ. ಜೊತಗೆ ತಕ್ಷಣ ಗುರುತಿನ ಚೀಟಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸತೀಶ್, ಜಿಲ್ಲೆಯ ಸಫಾಯಿ‌ ಕರ್ಮಚಾರಿಗಳು ತಮಗೆ ಐಡಿ ಕಾರ್ಡ್​ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಆಯೋಗದಿಂದ ಕೊಡುವ ಗುರುತಿನ ಚೀಟಿ ಅವರಿಗೆ ಕೊಟ್ಟರೆ ಅದರಿಂದ ಬಹಳಷ್ಟು ಲಾಭವಿದೆ. ಈಗಾಗಲೇ ಆರು ಜನರಿಗೆ ಸಿಕ್ಕಿದೆ. 80 ಜನರಿಗೆ ಮರುಪರಿಶೀಲನೆ ಆಗಿದೆ. ಸರ್ಕಾರದಿಂದ ಅನುಮೋದನೆ ಬಂದರೆ ಕಾರ್ಡ್​ನ ಕೊಡುತ್ತೇವೆ. ಇದರ ಜೊತೆಗ ಕಾರ್ಡ್​ನಿಂದ ಸಿಗುವ ಸೌಲಭ್ಯಗಳನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ವಿವಾಹಿತ ಗ್ರಾಮ ಲೆಕ್ಕಿಗನೊಂದಿಗೆ ತಹಶೀಲ್ದಾರ್ ಮದುವೆ; ಚಿಕ್ಕಮಗಳೂರು ಡಿಸಿಯಿಂದ ಗೀತಾಗೆ ನೋಟಿಸ್

ಬೆಚ್ಚಿಬೀಳಿಸುವ ಸುದ್ದಿ: ನಾಯಿಕೊಡೆಗಳಂತೆ ಹುಟ್ಕೊಂಡಿದ್ದ ಕಾಂಡೋಮ್ ಕತೆಗೆ ಬಿಗ್ ಟ್ವಿಸ್ಟ್! ಸುರಂಗಮಾರ್ಗದಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ

(different protest front of dc office in raichur)

Published On - 2:47 pm, Tue, 21 September 21