AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಗಾರಿಗೆ ತುರ್ತು, ಹಿಂಗಾರಿಗೆ ಮುತ್ತು: ಸಿರವಾರ ಬೀರಲಿಂಗೇಶ್ವರ ಕಾರಣಿಕ

‘ಮುಂಗಾರಿಗೆ ತುರ್ತು ಹುಡಿ ಕಟ್ಯಾನು ಹಿಂಗಾರಿಗೆ ಮುತ್ತು ಹೊಳೆದಿತು ಪಕ್ಷಿ ಕಲಕಲ ಮಾಡಿತು’ ಎಂದು ಅರ್ಚಕರು ಕಾರಣಿಕ ನುಡಿದರು.

ಮುಂಗಾರಿಗೆ ತುರ್ತು, ಹಿಂಗಾರಿಗೆ ಮುತ್ತು: ಸಿರವಾರ ಬೀರಲಿಂಗೇಶ್ವರ ಕಾರಣಿಕ
ರಾಯಚೂರು ಜಿಲ್ಲೆ ಹಳ್ಳಿಹೊಸೂರು ಗ್ರಾಮದಲ್ಲಿ ಉತ್ತಮ ಮಳೆಬೆಳೆಯ ಕಾರಣಿಕ ನುಡಿದ ಬೀರಪ್ಪ ಪೂಜಾರಿ (ಎಡಚಿತ್ರ).
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 07, 2022 | 8:25 AM

Share

ರಾಯಚೂರು: ಮುಂದಿನ ಮಳೆ, ಬೆಳೆ ಬಗ್ಗೆ ಕಾರಣಿಕ ಹೇಳುವ ಮೂಲಕ ಐತಿಹಾಸಿಕ ಪ್ರಾಮುಖ್ಯತೆ ಪಡೆದಿರುವ ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕು ಹಳ್ಳಿಹೊಸೂರು ಗ್ರಾಮದ ಘನ ಗುರು ಬೀರಲಿಂಗೇಶ್ವರ ಜಾತ್ರೆಯು ಗುರುವಾರ ವಿಜೃಂಭಣೆಯಿಂದ ನಡೆಯಿತು. ಅರ್ಚಕರಾದ ಬೀರಪ್ಪ ಪೂಜಾರಿ ‘ಮುಂಗಾರಿಗೆ ತುರ್ತು ಹುಡಿ ಕಟ್ಯಾನು ಹಿಂಗಾರಿಗೆ ಮುತ್ತು ಹೊಳೆದಿತು ಪಕ್ಷಿ ಕಲಕಲ ಮಾಡಿತು’ ಎಂದು ಕಾರಣಿಕ ನುಡಿದರು. ಜಾತ್ರೆಗೆ ಸೇರಿದ್ದ ಸಾವಿರಾರು ಭಕ್ತರು ‘ಹೋ’ ಎಂದು ದೊಡ್ಡ ಧ್ವನಿ ಮಾಡುತ್ತಾ ಕಾರಣಿಕವನ್ನು ಸ್ವಾಗತಿಸಿದರು.

ಮೈಲಾರಲಿಂಗೇಶ್ವರ ಕಾರಣಿಕ

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಬೀರೂರು ಮೈಲಾರಲಿಂಗ ಸ್ವಾಮಿಯ ಕಾರಣಿಕ ಗುರುವಾರ (ಅ 6) ನಡೆಯಿತು. ವಿಜಯದಶಮಿ ಮಾರನೇ ದಿನ ನುಡಿಯುವ ಕಾರಣಿಕವನ್ನು ಜನರು ಆಸ್ಥೆಯಿಂದ ನಂಬುತ್ತಾರೆ. ನಸುಕಿನಲ್ಲಿ ಬೆಣ್ಣೆ ಮೆತ್ತಿದ್ದ ಬಿಲ್ಲನ್ನು ಏರಿದ ಪೂಜಾರಿ ‘ಭೂಮಿಗೆ ವರುಣ ಸಿಂಚನವಾಯಿತು, ಕುರುಪಾಂಡವರ ಕಾದಾಡಿದರು, ಧರ್ಮದ ಜ್ಯೋತಿ ಬೆಳಗಿದರು’ ಎಂದು ಕಾರಣಿಕ ನುಡಿದರು.

ಮುಂದಿನ ವರ್ಷವೂ ಅತಿಯಾದ ಮಳೆಯಾಗಬಹುದು ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳ ಮಧ್ಯೆ ಸ್ಪರ್ಧೆ ಹೆಚ್ಚಾಗಬಹುದು ಎಂಬ ಸುಳಿವನ್ನು ಈ ಕಾರಣಿಕ ವಾಣಿ ನೀಡಿದೆ. ಆದರೆ ಅಂತ್ಯುವು ಮಂಗಳವಾಗಿರುತ್ತದೆ ಎನ್ನುವ ಮೂಲಕ ಹೊಸ ಭರವಸೆಯನ್ನೂ ಈ ಕಾರಣಿಕ ನುಡಿ ಮೂಡಿಸಿದೆ.

ಮಲತೇಶ ದೇವರ ಕಾರಣಿಕ

ಹಾವೇರಿ: ರಾಣೆಬೆನ್ನೂರು ತಾಲ್ಲೂಕು ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರಣಿಕೋತ್ಸವದಲ್ಲಿ ಗೊರವಪ್ಪ ನಾಗಪ್ಪ ಉರ್ಮಿ ಕಾರಣಿಕ ನುಡಿದರು. ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’ ಎಂಬ ಅವರ ಕಾರಣಿಕವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಯಿತು. ಕಾರಣಿಕವನ್ನು ವಿವರಿಸಿದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್, ‘ಮುಂದಿನ ವರ್ಷಗಳಲ್ಲಿ ಸಣ್ಣ ರೈತರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನೊಬ್ಬನಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ’ ಎಂದು ಹೇಳಿದರು.

Published On - 8:25 am, Fri, 7 October 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?