ರಾಮನಗರ; ಮೊಬೈಲ್​ ಕದ್ದಿದ್ದಕ್ಕೆ ಬಾಲಕನನ್ನ ಕೂಡಿ ಹಾಕಿ ಶಿಕ್ಷೆ ನೀಡಿದ ಮಾಲೀಕ

ರಾಮನಗರದಲ್ಲಿ ದರ್ಗಾ ಉರುಸು ಪ್ರಯುಕ್ತ ಮಕ್ಕಳಿಗೆ ಆಟವಾಡಲು ಜೋಕಾಲಿ ಹಾಕಲಾಗಿತ್ತು. ಅಲ್ಲಿಗೆ ಆಟ ಆಡಲು ಬಂದಿದ್ದ ಬಾಲಕ ಮಾಲೀಕನ ಮೊಬೈಲ್ ಕದ್ದು ಪಾರಾರಿಯಾಗಲು ಯತ್ನಿಸಿದ್ದ. ಸದ್ಯ ಬಾಲಕನ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದ್ದು ಮಾಲೀಕ ಬಾಲಕನನ್ನು ಕೂಡಿ ಹಾಕಿ ಅನ್ನ ನೀರು ಕೊಡದೆ ಹಿಂಸೆ ನೀಡಿದ್ದಾನೆ.

ರಾಮನಗರ; ಮೊಬೈಲ್​ ಕದ್ದಿದ್ದಕ್ಕೆ ಬಾಲಕನನ್ನ ಕೂಡಿ ಹಾಕಿ ಶಿಕ್ಷೆ ನೀಡಿದ ಮಾಲೀಕ
ಕೊಠಡಿಯಲ್ಲಿ ಲಾಕ್ ಆದ ಬಾಲಕ
Edited By: ಆಯೇಷಾ ಬಾನು

Updated on: Nov 25, 2023 | 12:34 PM

ರಾಮನಗರ, ನ.25: ಮೊಬೈಲ್​ ಕದ್ದಿದ್ದಕ್ಕೆ ಬಾಲಕನನ್ನ ಕೂಡಿ ಹಾಕಿ, ಅನ್ನ ನೀರು ಕೊಡದೆ ಶಿಕ್ಷೆ ನೀಡಿರುವ ಘಟನೆ ರಾಮನಗರದ (Ramanagara) ಯಾರಬ್ ನಗರದಲ್ಲಿ ನಡೆದಿದೆ. ದರ್ಗಾ ಉರುಸು ಪ್ರಯುಕ್ತ ಮಕ್ಕಳಿಗೆ ಆಟವಾಡಲು ಜೋಕಾಲಿ ಹಾಕಲಾಗಿತ್ತು. ಆಟ ಆಡಲು ಬಂದ ಬಾಲಕ ಜೋಕಾಲಿ ಆಡುತ್ತಲೇ ಮಾಲೀಕನ ಮೊಬೈಲ್​ ಕದ್ದು (Mobile Theft) ಪರಾರಿಯಾಗಲು ಯತ್ನಿಸಿದ್ದ. ಆಗ ಮೊಬೈಲ್ ಎಲ್ಲಿ ಅಂತ ಹುಡುಕಾಡುತ್ತಿರುವಾಗ ಬಾಲಕನ ಜೇಬಿನಲ್ಲಿ ಮೊಬೈಲ್ ರಿಂಗ್ ಆಗಿದೆ. ಇದರಿಂದ ತನ್ನದೆ ಮೊಬೈಲ್ ಎಂದು ಗುರುತು ಹಿಡಿದ ಜೋಕಾಲಿ ಮಾಲೀಕ ಬಾಲಕನನ್ನು ಕೂಡಿ ಹಾಕಿದ್ದಾನೆ.

ಮುಬೈಲ್ ಕದ್ದ ಬಾಲಕನನ್ನು ಬಿಲ್​​ ಕೊಡುವ ಕೊಠಡಿಯಲ್ಲಿ ಕೂಡಿಹಾಕಿ ಸರಪಳಿಯಿಂದ ಲಾಕ್​ಮಾಡಿ, ಅನ್ನ, ನೀರು ಕೊಡದೆ ಶಿಕ್ಷೆ ನೀಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಬಾಲಕನ ತಪ್ಪಿಗೆ ಕ್ಷಮಿಸುವಂತೆ ಕೋರಿ ಬಿಟ್ಟು ಕಳುಹಿಸಲು ಮನವಿ ಮಾಡಿದ್ದಾರೆ. ಕೊನೆಗೆ ಸ್ಥಳೀಯರ ಮನವಿಯಂತೆ ಮಾಲೀಕ ಬಾಲಕನನ್ನ ಬಿಟ್ಟು ಕಳುಹಿಸಿದ್ದಾನೆ. ಬಾಲಕನಿಗೆ ಬುದ್ಧಿವಾದ ಹೇಳೋದು ಬಿಟ್ಟು ಕೂಡಿ ಹಾಕಿದ್ದು ಎಷ್ಟು ಸರಿ ಎಂಬ ಚರ್ಚೆ ಹುಟ್ಟುಕೊಂಡಿದೆ. ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಪುಣೆ: ಹುಟ್ಟುಹಬ್ಬಕ್ಕೆ ದುಬೈಗೆ ಕರೆದೊಯ್ಯಲಿಲ್ಲವೆಂದು ಪತಿಯನ್ನು ಗುದ್ದಿ ಕೊಂದ ಮಹಿಳೆ!

ಹುಚ್ಚು ನಾಯಿ ಕಡಿದು 12ಕ್ಕೂ ಹೆಚ್ಚು ಜನರಿಗೆ ಗಾಯ

ರಕ್ಕಸ ಹುಚ್ಚು ನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದೆ. ಮಹಿಳೆಯರು ವೃದ್ಧರು ಸೇರಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೆಲಮಂಗಲ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹುಚ್ಚು ನಾಯಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದೆ. ಹುಚ್ಚು ನಾಯಿ ದಾಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ.

ಹುಚ್ಚು ನಾಯಿ ದಾಳಿಯಿಂದ ಪರಮೇಶ್, ಚೌಡಪ್ಪ, ಕೃಷ್ಣ, ಚೌಡರೆಡ್ಡಿ, ಮೊಹಮ್ಮದ್‌, ಕಿಶೋರ್‌, ರಾಧಾ, ತನ್ವೀರ್‌ ಸೇರಿ 12ಕ್ಕೂ ಹೆಚ್ಚು ಜನರ ಗಾಯಗೊಂಡಿದ್ದಾರೆ. ಎಲ್ಲರಿಗೂ ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಶಶಿಧರ್ ಹುಚ್ಚು ನಾಯಿಯನ್ನ ಹಿಡಿಯಲು ಕಾರ್ಯಾಚರಣೆ ನಡೆಸಿದ್ರು. ನೆಲಮಂಗಲ ಟಿ.ಬಿ ಬಸ್ ನಿಲ್ದಾಣದ ಬಳಿ ಹುಚ್ಚು ನಾಯಿ ಪತ್ತೆಯಾಯ್ತು. ಈ ವೇಳೆ ರೊಚ್ಚಿಗೆದ್ದ ಸಾರ್ವಜನಿಕರ ದೊಣ್ಣೆಯಿಂದ ಹೊಡೆದು ಹುಚ್ಚು ನಾಯಿಯನ್ನ ಕೊಂದಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More
Follow Us