ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಳೆ ಅಭಾವ: ಕಣ್ಣೆದುರೇ ಕರುಕಲಾಗುತ್ತಿದೆ ರಾಗಿ ಪೈರು!

ರಾಮನಗರ ಜಿಲ್ಲೆಯಲ್ಲಿ ಭೀಕರ ಮಳೆ ಅಭಾವ ಎದುರಾಗಿದ್ದು, ಬಿತ್ತನೆ ಮಾಡಿದ ರಾಗಿ ಪೈರು ಕಣ್ಣೆದುರೇ ಒಣಗಿ ನಾಶವಾಗುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಶೇ 88 ರಷ್ಟು ಬೃಹತ್ ಮಳೆ ಕೊರತೆ ಉಂಟಾಗಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣವೇ ಸೂಕ್ತ ಬೆಳೆ ನಷ್ಟ ಪರಿಹಾರ ಘೋಷಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಳೆ ಅಭಾವ: ಕಣ್ಣೆದುರೇ ಕರುಕಲಾಗುತ್ತಿದೆ ರಾಗಿ ಪೈರು!
ಕಣ್ಣೆದುರೇ ಕರುಕಲಾಗುತ್ತಿದೆ ರಾಗಿ ಪೈರು
Edited By:

Updated on: Sep 11, 2026 | 3:07 PM

ಮುಖ್ಯಾಂಶಗಳು

  • ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಳೆ ಅಭಾವದಿಂದ ರಾಗಿ ಬೆಳೆ ಸಂಪೂರ್ಣ ನಾಶ.
  • ಕೃಷಿ ಇಲಾಖೆಯ ಬಿತ್ತನೆ ಗುರಿಯಲ್ಲಿ ಶೇಕಡಾ 68ರಷ್ಟು ಮಾತ್ರ ಬಿತ್ತನೆ ಪೂರ್ಣ.
  • ಸೆಪ್ಟೆಂಬರ್‌ನಲ್ಲಿ ಶೇ 88ರಷ್ಟು ಮಳೆ ಕೊರತೆಯಿಂದ ಕಂಗಾಲಾದ ಜಿಲ್ಲೆಯ ರೈತರು.

ರಾಮನಗರ, ಸೆಪ್ಟೆಂಬರ್ 11: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬರಗಾಲದ ಛಾಯೆ ಆವರಿಸುತ್ತಿದ್ದು, ವರುಣದೇವ ಸಂಪೂರ್ಣ ಕೈಕೊಟ್ಟಿದ್ದರಿಂದ ರಾಗಿ ಬೆಳೆಗಾರರು ದಾರಿ ಕಾಣದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ರೇಷ್ಮೆ ಮತ್ತು ತೆಂಗಿನ ನಂತರ ಪ್ರಮುಖ ಆಹಾರ ಬೆಳೆಯಾಗಿರುವ ರಾಗಿಯು ಮಳೆಯ ಅಭಾವದಿಂದಾಗಿ ಬಿತ್ತಿದ ಪೈರು ಕಣ್ಣೆದುರೇ ಒಣಗಿ ಹೋಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ಶೇ 88ರಷ್ಟು ಬೃಹತ್ ಮಳೆ ಕೊರತೆ

ಈ ಬಾರಿ ಕೃಷಿ ಇಲಾಖೆಯು ಜಿಲ್ಲೆಯಾದ್ಯಂತ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡುವ ಗುರಿ ಹೊಂದಿತ್ತು. ಆದರೆ ಸೂಕ್ತ ಮಳೆಯಿಲ್ಲದ ಕಾರಣ ಕೇವಲ 55 ಸಾವಿರ ಹೆಕ್ಟೇರ್ (ಶೇ 68) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಅದರಲ್ಲಿ 47 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ರಾಗಿ ಬೆಳೆ ಬೆಳೆಯಲಾಗಿದೆ.

ವಿಶೇಷವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಶೇಕಡಾ 88 ರಷ್ಟು ಬೃಹತ್ ಮಳೆ ಕೊರತೆ ಎದುರಾಗಿದ್ದು, ಹೊಲದಲ್ಲಿರುವ ಪೈರುಗಳು ಸಂಪೂರ್ಣವಾಗಿ ಒಣಗಿ ಬೂದಿಯಾಗುವ ಹಂತಕ್ಕೆ ತಲುಪಿವೆ. ಮುಂಬರುವ ದಿನಗಳಲ್ಲಿ ತಕ್ಷಣಕ್ಕೆ ಮಳೆ ಬಾರದಿದ್ದರೆ ಇಡೀ ರಾಗಿ ಬೆಳೆ ಸಂಪೂರ್ಣ ನಾಶವಾಗುವುದು ಖಚಿತ ಎಂದು ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ಕಳವಳ ವ್ಯಕ್ತಪಡಿಸಿದ್ದಾರೆ.

ಪರಿಹಾರಕ್ಕೆ ಕಣ್ಣೀರಿಡುತ್ತಾ ಆಗ್ರಹಿಸುತ್ತಿರುವ ರೈತರು

ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು ಈಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ಗಂಗಾನಾಯ್ಕ್ ಸೇರಿದಂತೆ ಹಲವು ಸ್ಥಳೀಯ ರೈತರು, ಮಳೆಯಿಲ್ಲದೆ ಕಂಗಾಲಾಗಿದ್ದು ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Fri, 11 September 26

Loading...
Unable to load recommendations.
Follow Us