AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ ವಕೀಲರ ಪ್ರತಿಭಟನೆ; ಜಿಲ್ಲಾಧಿಕಾರಿ, ಎಸ್​ಪಿ, ಪಿಎಸ್​ಐ ವರ್ಗಾವಣೆ ಕೋರಿ ರಾಜ್ಯಪಾಲರಿಗೆ ಪತ್ರ

ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು ಎಂಬುವವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ. ರಾಮನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಗೆ ಕಾರಣರಾದವರ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದಾರೆ. ಹಾಗೂ ಜಿಲ್ಲಾಧಿಕಾರಿ, ಎಸ್​ಪಿ, ಪಿಎಸ್​ಐ ವರ್ಗಾವಣೆ ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ.

ರಾಮನಗರ ವಕೀಲರ ಪ್ರತಿಭಟನೆ; ಜಿಲ್ಲಾಧಿಕಾರಿ, ಎಸ್​ಪಿ, ಪಿಎಸ್​ಐ ವರ್ಗಾವಣೆ ಕೋರಿ ರಾಜ್ಯಪಾಲರಿಗೆ ಪತ್ರ
ರಾಮನಗರ ವಕೀಲರ ಪ್ರತಿಭಟನೆ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on:Feb 20, 2024 | 12:34 PM

Share

ರಾಮನಗರ, ಫೆ.20: ರಾಮನಗರದಲ್ಲಿ (Ramanagar) ಪೊಲೀಸರು (Police) ಮತ್ತು ವಕೀಲರ (Lawyers) ಜಟಾಪಟಿ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ, ಎಸ್​ಪಿ, ಪಿಎಸ್​ಐ ವರ್ಗಾವಣೆ ಮಾಡುವಂತೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೆ ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು ಪತ್ರ ಬರೆದಿದ್ದಾರೆ. ಪ್ರಕ್ಷುಬ್ಧ ವಾತಾವರಣ ಸೃಷ್ಟಿಗೆ ಕಾರಣರಾದವರ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಲಾಗಿದ್ದು ರಾಮನಗರದಲ್ಲಿ ಅಶಾಂತಿ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಕೂಡಲೇ ಜಿಲ್ಲೆಯಿಂದ ಮೂವರನ್ನೂ ವರ್ಗಾವಣೆ ಮಾಡುವಂತೆ‌ ಪತ್ರ ಬರೆಯಲಾಗಿದೆ.

ಮಾತುಕತೆಯಲ್ಲಿ ಬಗೆಹರಿಸಬಹುದಾದ ವಿಷಯ ದೊಡ್ಡದಾಗಿ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ಮಾಡದೇ FIR ಹಾಕಿ ದೊಂಬಿ ಎಬ್ಬಿಸಿದ್ದಾರೆ. ಇಷ್ಟಕ್ಕೆಲ್ಲಾ ಜಿಲ್ಲಾಡಳಿತದ ನಿರ್ಲಕ್ಷ್ಯತನವೇ ಕಾರಣ ಎಂದು ಪತ್ರದಲ್ಲಿ ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು ಆರೋಪ ಮಾಡಿದ್ದಾರೆ.

ಇದನ್ನೂ ಓದಿ:  ರಾಮನಗರ ವಕೀಲರ ಪ್ರತಿಭಟನೆ: ವಿವಾದದ ಕಿಡಿ ಹೊತ್ತಿಕೊಂಡಿದ್ದೆಲ್ಲಿಂದ? ಇಲ್ಲಿದೆ ಪೂರ್ಣ ವಿವರ

ಏನಿದು ಘಟನೆ?

ರಾಮನಗರದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ಜಟಾಪಟಿ ಉಂಟಾಗಿದ್ದು ಪ್ರಕರಣದಲ್ಲಿ 40 ವಕೀಲರ ಮೇಲೆ ಎಫ್ಐಆರ್ ದಾಖಲಾಗಿದೆ. ಎಫ್​ಐಆರ್ ದಾಖಲಾಗಿದ್ದನ್ನು ಖಂಡಿಸಿ ವಕೀಲ ಸಂಘ ಬೃಹತ್ ಪ್ರತಿಭಟನೆ ನಡೆಸಿದೆ. ವಿವಿಧ ಜಿಲ್ಲೆಗಳಿಂದ ರಾಮನಗರಕ್ಕೆ ಆಗಮಿಸಿ ವಕೀಲರು ಪ್ರತಿಭಟಿಸಿದ್ದಾರೆ. ಸತತ 1 ವಾರದಿಂದ ನ್ಯಾಯಾಲಯದ ಕಾರ್ಯ ಕಲಾಪ ಬಹಿಷ್ಕರಿಸಿ ವಕೀಲರು ಧರಣಿಗಿಳಿದಿದ್ದಾರೆ. ಸೋಮವಾರ ತೀವ್ರ ಹೋರಾಟಕ್ಕಿಳಿದ ವಕೀಲರು, ರಾಮನಗರ ಡಿಸಿ ಕಚೇರಿಗೆ ದಿಗ್ಭಂದನ ಹಾಕಿದ್ರು. ಎರಡೂ ಗೇಟ್ ಮುಂಭಾಗದಲ್ಲಿ ಧರಣಿ ಕುಳಿತ ವಕೀಲರು, ಡಿಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಮನೆಗೆ ಹೋಗದಂತೆ ತಡೆದ್ರು. ಇಡೀ ರಾತ್ರಿ‌ ಧರಣಿ ನಡೆಸಿದ್ರು.

ವಕೀಲರ ಪ್ರತಿಭಟನೆ ಹಿನ್ನಲೆ, ರಾಮನಗರ ಟೌನ್ ನಲ್ಲಿ 700ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜಿಸಲಾಗಿದೆ. 100 ಬಾಡಿ ಕ್ಯಾಮೆರಾ, ಸಿಸಿಟಿವಿ, 40 ಹ್ಯಾಂಡಿ ಕ್ಯಾಮೆರಾ, 2 ಡ್ರೋನ್ ಕ್ಯಾಮೆರಾದಿಂದ ನಿಗಾ ಇಡಲಾಗಿದೆ. ಪ್ರತಿಭಟನಾನಿರತರು, ಪಿಎಸ್ ಐ ತನ್ವೀರ್ ಹುಸೇನ್ ನ ಅಮಾನತ್ತು ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಗಲಾಟೆ ಪ್ರಕರಣವೊಂದರಲ್ಲಿ ವಕೀಲರ ಮೇಲೆ ಸುಳ್ಳು ಎಫ್ಐಆರ್ ದಾಖಲಿಸಿದ ಆರೋಪ ಕೇಳಿಬಂದಿದೆ. FIR ದಾಖಲಿಸಿದರ ವಿರುದ್ಧ ನ್ಯಾಯಾಲಯ ಆವರಣದಿಂದ ಜಿಲ್ಲಾಧಿಕಾರಿ ಕಛೇರಿವರೆಗೂ ಮೆರವಣಿಗೆ ನಡೆಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:19 pm, Tue, 20 February 24