Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೋನಾ ಸೋಂಕಿಗೆ ಸ್ಯಾಂಡಲ್​ವುಡ್​ ನಿರ್ದೇಶಕ ಭರತ್ ಬಲಿ

ಇಂದು ಬೆಳಗ್ಗೆ ಬಂದ ಭರತ್ ಇನ್ನಿಲ್ಲ ಎಂಬ ಸುದ್ದಿ ತೀರಾ ವಿಷಾದ ಹುಟ್ಟಿಸಿತು. ಕೋವಿಡ್ ಜೊತೆಗೆ ಇತರೇ ಆರೋಗ್ಯ ಸಮಸ್ಯೆಗಳು ಸೇರಿ ಅವರ ಬಲಿಪಡೆದಿವೆ ಎಂದು ಭರತ್​ ಸಾವಿನ ಬಗ್ಗೆ ಗೀತರಚನಕಾರ ಕವಿರಾಜ್ ದುಃಖ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸೋಂಕಿಗೆ ಸ್ಯಾಂಡಲ್​ವುಡ್​ ನಿರ್ದೇಶಕ ಭರತ್ ಬಲಿ
ನಿರ್ದೇಶಕ ಭರತ್
Follow us
ಶ್ರೀದೇವಿ ಕಳಸದ
| Updated By: Lakshmi Hegde

Updated on: Dec 25, 2020 | 2:54 PM

ಬೆಂಗಳೂರು: ‘ಸಾಹೇಬ’ ಮತ್ತು ‘ಕಂಠಿ’ ಸಿನೆಮಾ ಖ್ಯಾತಿಯ ನಿರ್ದೇಶಕ ಭರತ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ನಿನ್ನೆ ಸಾವಿಗೀಡಾಗಿದ್ದಾರೆ. ಇವರು ಪತ್ನಿ-ಪುತ್ರಿಯನ್ನು ಅಗಲಿದ್ದು, ಅಂತ್ಯಸಂಸ್ಕಾರ ನಿನ್ನೆ ಕೆಂಗೇರಿಯಲ್ಲಿ ನಡೆದಿದೆ.

45 ವರ್ಷದ ಭರತ್ ಚಾಮರಾಜನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀಮುರಳಿ, ರಮ್ಯಾ ಅಭಿನಯದ ಕಂಠಿ ಸಿನೆಮಾ ಮತ್ತು ಮನೋರಂಜನ್ ರವಿಚಂದ್ರನ್ ನಟನೆಯ  ಸಾಹೇಬ  ಸಿನೆಮಾ ನಿರ್ದೇಶನದ ಮಾಡುವುದರ ಮೂಲಕ ಜನಮನ್ನಣೆ ಗಳಿಸಿದ್ದರು.

ಗೀತರಚನಕಾರ ಕವಿರಾಜ್ ಫೇಸ್​ಬುಕ್​ ಪೋಸ್ಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.  ‘ಸಿನೆಮಾ ಪಯಣದ ಆರಂಭದ ದಿನಗಳಲ್ಲಿ ಗೀತರಚನೆಕಾರನಾಗಿ ಮನ್ನಣೆ ಗಳಿಸಲು ‘ಕಂಠಿ’ ಸಿನೆಮಾಕ್ಕೆ ಬರೆದ ‘ಜಿನುಜಿನುಗೋ ಜೇನಹನಿ’ ಮತ್ತು ‘ಬಾನಿನಿಂದ ಬಾ ಚಂದಿರ ಹಾಡುಗಳು ನೆರವಾಗಿದ್ದವು. ‘ಸಾಹೇಬ್’ ಸಿನೆಮಾಕ್ಕೂ ಶೀರ್ಷಿಕೆ ಗೀತೆ ಬರೆಯುವ ಅವಕಾಶ ಸಿಕ್ಕಿತ್ತು. ಸುಮಾರು ಹದಿನಾರು ವರ್ಷಗಳ ಹಿಂದೆ ಆ ಕಾಲಕ್ಕೆ ಕಂಠಿ ನಿಜವಾದ ವಿಭಿನ್ನ ಸಿನಿಮಾ ಅಗಿ ಗೆದ್ದಿತ್ತು.’

‘ಬೆಳಗಾವಿಯ ಕನ್ನಡ ಮರಾಠಿ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ಲವ್ ಸ್ಟೋರಿಯೊಂದನ್ನು ಸೊಗಸಾಗಿ ಹೆಣೆದು ‘ಭರತ್’ ಎಲ್ಲರ ಗಮನ ಸೆಳೆದಿದ್ದರು. ಇಂತಹ ಅದ್ಭುತ ಸಿನಿಮಾವನ್ನು ಮೊದಲ ಯತ್ನದಲ್ಲೇ ಕೊಟ್ಟ ಭರತ್ ಅವರಿಗೆ ಮುಂದೆ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಲು ಆಗಲೇ ಇಲ್ಲ. ಎಷ್ಟೇ ಪ್ರತಿಭಾವಂತನಾದರೂ ತೀರಾ ನೇರ ನಡೆವಳಿಕೆ, ಹೊಂದಾಣಿಕೆ ಮಾಡಿಕೊಳ್ಳದ ಸ್ವಭಾವವೇ ಅವರಿಗೆ ಮುಳುವಾಯಿತೇನೋ.’

‘ಇಂದು ಬೆಳಗ್ಗೆ ಬಂದ ಭರತ್ ಇನ್ನಿಲ್ಲ ಎಂಬ ಸುದ್ದಿ ತೀರಾ ವಿಷಾದ ಹುಟ್ಟಿಸಿತು. ಕೋವಿಡ್ ಜೊತೆಗೆ ಇತರೇ ಆರೋಗ್ಯ ಸಮಸ್ಯೆಗಳು ಸೇರಿ ಅವರ ಬಲಿಪಡೆದಿವೆ. ಇತ್ತೀಚೆಗೆ ಸಾವಿನ ಸುದ್ದಿ ಕೇಳಿ ಕೇಳಿ ಒಂದು ರೀತಿ ಬದುಕಿನ ಬಗ್ಗೆ ವೈರಾಗ್ಯ ಮೂಡುವಂತಾಗಿದೆ. ಕೊರೊನಾ ಸಂಕಷ್ಟದ ಬೇಸರದ ನಡುವೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಿನಿಮಾ ರಂಗದ ಹಲವರು ಕೊನೆಯುಸಿರೆಳೆದರು. 2020 ಅದೇಕೆ ಇಷ್ಟು ಅಹಿತಕರ ವರ್ಷವಾಗುತ್ತಿದೇಯೋ?’ ಎಂದು ಭರತ್​ ಸಾವಿನ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ.

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ