AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಆದರ್ಶ ವ್ಯಕ್ತಿ; ಆದರೆ, ಪ್ರಧಾನಿ ಮೋದಿ ರಾಮನಲ್ಲ.. ಕೃಷ್ಣ -S.L.ಭೈರಪ್ಪ

ಆತ ಹಿಂಸೆಯ ಮಾರ್ಗವನ್ನು ಅನುಸರಿಸಿ ಕೆಟ್ಟದಾಗಿ ಮಾತನಾಡುವವರನ್ನ ಕೊಲ್ಲಬಹುದಿತ್ತು. ಆದರೆ, ರಾಮ ಆ ರೀತಿ‌ ಮಾಡದೆ ಆದರ್ಶವಾಗಿ ನಡೆದುಕೊಂಡ‌. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಲು ಇದೇ ರೀತಿ ಜನಾಭಿಪ್ರಾಯ ರೂಪಗೊಳಿಸಿದ್ರು. ಆದರೆ‌, ಪ್ರಧಾನಿ ಮೋದಿ ರಾಮನಲ್ಲ, ಕೃಷ್ಣ ಎಂದು ಕಾರ್ಯಕ್ರಮದಲ್ಲಿ ಸಾಹಿತಿ S.L.ಭೈರಪ್ಪ ಹೇಳಿದರು.

ರಾಮ ಆದರ್ಶ ವ್ಯಕ್ತಿ; ಆದರೆ, ಪ್ರಧಾನಿ ಮೋದಿ ರಾಮನಲ್ಲ.. ಕೃಷ್ಣ -S.L.ಭೈರಪ್ಪ
ಹಿರಿಯ ಸಾಹಿತಿ S.L.ಭೈರಪ್ಪ (ಎಡ); ಪ್ರಧಾನಿ ಮೋದಿ(ಬಲ)
KUSHAL V
|

Updated on:Jan 03, 2021 | 8:10 PM

Share

ಮೈಸೂರು: ರಾಮಮಂದಿರ ನಿರ್ಮಾಣಕ್ಕೆ‌ ನಿಧಿ ಸಮರ್ಪಣಾ ಅಭಿಯಾನವೊಂದನ್ನು ನಗರದಲ್ಲಿ ಇಂದು ಆಯೋಜಿಸಲಾಗಿತ್ತು. RSS ಕಚೇರಿ ಮಾಧವ ಕೃಪದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ S.L.ಭೈರಪ್ಪ ಅಧ್ಯಕ್ಷತೆ ವಹಿಸಿದರು.

ಈ ವೇಳೆ, ಮಾತನಾಡಿದ ಹಿರಿಯ ಸಾಹಿತಿ ನಿಧಿ ಸಂಗ್ರಹ ಸಭೆಗೆ ಯಾಕೆ ಹೋಗ್ತಿರಾ ಅಂತಾ ಕೆಲವರು ನನ್ನನ್ನು ಕೇಳಿದ್ರು. ಉತ್ತರಕಾಂಡ ಬರೆದವರು ನೀವು. ಇದರಿಂದ ಯಾಕೆ ಹೋಗ್ತಿರಿ ಅಂತಾ ಕೇಳಿದ್ರು. ಆದರೆ, ರಾಮ ಆದರ್ಶ ವ್ಯಕ್ತಿ. ಈ ಕಾರಣಕ್ಕೆ ನಾನು ಬಂದೆ ಎಂದು ಕಾರ್ಯಕ್ರಮದಲ್ಲಿ ಸಾಹಿತಿ ಎಸ್ ಎಲ್.ಬೈರಪ್ಪ ಹೇಳಿದರು.

ರಾಮನ ಬಗ್ಗೆ ಆಗಲೇ ಜನಾಭಿಪ್ರಾಯ ಸಂಗ್ರಹ ಮಾಡಲು ಶುರು ಮಾಡಿದ್ದರು. ರಾಮ ವನವಾಸ ಮುಗಿಸಿ ಬರುವಷ್ಟರಲ್ಲಿ ಆತನ ರಾಜ್ಯದ ಪರಿಸ್ಥಿತಿ ಹದಗೆಟ್ಟಿತ್ತು. ಹಾಗಾಗಿ, ತೆರಿಗೆ ಸಂಗ್ರಹ ಮಾಡಿ ತನ್ನ ರಾಜ್ಯ ಕಟ್ಟಲು ರಾಮ ಮುಂದಾದ. ಇದಕ್ಕೆ ಒಪ್ಪದ ಕೆಲವರು ಅವನ ವಿರುದ್ಧ ಅಪಪ್ರಚಾರ ಮಾಡಲು ಮುಂದಾದರು. ಆದರೆ ರಾಮನ ವಿರುದ್ಧ ಮಾತನಾಡಲು ಏನೂ ಇಲ್ಲದ ಕಾರಣ ಸೀತೆಯ ವಿಚಾರವನ್ನು ಮಧ್ಯಕ್ಕೆ ತಂದರು ಎಂದು ಭೈರಪ್ಪ ಹೇಳಿದರು.

ಸೀತೆ ಸಿಂಹಾಸನದ ಮೇಲೆ ಕೂರಲು ಅರ್ಹಳಲ್ಲ. ಅವಳು ರಾವಣನ ವಶದಲ್ಲಿದ್ದಳು ಎಂದು ಮಾತನಾಡಿದರು. ಇದರಿಂದ ರಾಮ ತನ್ನ ಪ್ರಜೆಗಳಿಗೆ ಅರ್ಥಮಾಡಿಸಲು ಅಹಿಂಸೆಯ ಮಾರ್ಗದ ಅನುಗುಣವಾಗಿ ಸೀತೆಯನ್ನು ತ್ಯಜಿಸಿದ ಎಂದು ಹೇಳಿದರು.

ಆತ ಹಿಂಸೆಯ ಮಾರ್ಗವನ್ನು ಅನುಸರಿಸಿ ಕೆಟ್ಟದಾಗಿ ಮಾತನಾಡುವವರನ್ನ ಕೊಲ್ಲಬಹುದಿತ್ತು. ಆದರೆ, ರಾಮ ಆ ರೀತಿ‌ ಮಾಡದೆ ಆದರ್ಶವಾಗಿ ನಡೆದುಕೊಂಡ‌. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಲು ಇದೇ ರೀತಿ ಜನಾಭಿಪ್ರಾಯ ರೂಪಗೊಳಿಸಿದ್ರು. ಆದರೆ‌, ಪ್ರಧಾನಿ ಮೋದಿ ರಾಮನಲ್ಲ, ಕೃಷ್ಣ ಎಂದು ಕಾರ್ಯಕ್ರಮದಲ್ಲಿ ಸಾಹಿತಿ S.L.ಭೈರಪ್ಪ ಹೇಳಿದರು.

ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಧರಣಿ ಬಗ್ಗೆ ಮಾತನಾಡಿದ ಸಾಹಿತಿ ದೆಹಲಿಯಲ್ಲಿ ಧರಣಿ ಮಾಡ್ತಿರುವವರು ಪಂಜಾಬಿಗಳು ಮಾತ್ರ. ಅವರು ಇಡೀ ದೇಶದ ರೈತರನ್ನು ಪ್ರತಿನಿಧಿಸಿದಂತೆ ಆಗಲ್ಲ. ಅಷ್ಟಕ್ಕೂ ಕೃಷಿ ಮಸೂದೆಯಲ್ಲಿ ಅನುಕೂಲಕರ‌ ಅಂಶಗಳಿವೆ. ಈ ಹೋರಾಟದ ಹಿಂದೆ ಕಾಂಗ್ರೆಸ್, ಕಮ್ಯೂನಿಸ್ಟರ‌ ಕೈವಾಡವಿದೆ. ಪ್ರಧಾನಿ‌ ಮೋದಿ ಜನಪ್ರಿಯತೆ ಅವರಿಗೆ ಸಹಿಸಲು ಆಗುತ್ತಿಲ್ಲ. ಹೊಸ ಕೃಷಿ ಮಸೂದೆ ರೈತರಿಗೆ ಮಾರಕವಲ್ಲ ಎಂದು S.L.ಭೈರಪ್ಪ ಹೇಳಿದರು.

ಇತರೆ ಧರ್ಮದ ದೇವರುಗಳು ಕೋಪಿಷ್ಟರು.. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ -S.L.ಭೈರಪ್ಪ

Published On - 7:36 pm, Sun, 3 January 21

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು