AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ ಶಾಸಕ ಶಾಮನೂರು ಶಿವಶಂಕರಪ್ಪ: ದಾವಣಗೆರೆ ಸೋಂಕಿತರಿಗೆ ಬೆಡ್ ಕೊರತೆ

ದಾವಣಗೆರೆಯಲ್ಲಿ ಮಾತ್ರ ಹೀಗೆ ಆಗಿದೆ. ಮೇಲಾಗಿ ರಾಜಕೀಯ ಹಿನ್ನೆಲೆ ಇರುವ ಶಾಮನೂರು ಶಿವಶಂಕರಪ್ಪ ಈ ರೀತಿ ಮಾತಾಡಬಾರದು. ಕಡ್ಡಾಯವಾಗಿ ಶೇಖಡಾ 75ರಷ್ಚು ಬೆಡ್ ಬಿಟ್ಟು ಕೊಡಿ. ಇಲ್ಲಾ ಎಂದರೆ ಸರ್ಕಾರ ತನ್ನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಂಕಷ್ಟದ ಕಾಲದಲ್ಲಿ ಸಂಘರ್ಷ ಬೇಡ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ ಶಾಸಕ ಶಾಮನೂರು ಶಿವಶಂಕರಪ್ಪ: ದಾವಣಗೆರೆ ಸೋಂಕಿತರಿಗೆ ಬೆಡ್ ಕೊರತೆ
ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ
preethi shettigar
|

Updated on:May 22, 2021 | 5:13 PM

Share

ದಾವಣಗೆರೆ: ರಾಜ್ಯ ಸರ್ಕಾರ ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಆದೇಶವೊಂದನ್ನ ಜಾರಿಗೆ ತಂದಿದೆ. ಆ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಶೇಖಡಾ 50 ಬೆಡ್ ಹಾಗೂ ಖಾಸಗಿ ಮೆಡಿಕಲ್ ಕಾಲೇಜು​ಗಳ ಆಸ್ಪತ್ರೆಗಳಲ್ಲಿ ಶೇಕಡಾ 75 ರಷ್ಟು ಬೆಡ್ ಸರ್ಕಾರಕ್ಕೆ ಬಿಟ್ಟು ಕೊಡಬೇಕು. ಆದರೆ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಒಡೆತನದ ಜೆಜೆಎಂ ಮೆಡಿಕಲ್ ಕಾಲೇಜು ಹಾಗೂ ಎಸ್. ಎಸ್ ಮೆಡಿಕಲ್ ಕಾಲೇಜುಗಳ ಬೆಡ್​ಗಳನ್ನು ಸರ್ಕಾರದ ಆದೇಶದಂತೆ ನೀಡಲು ಹಿಂದೇಟು ಹಾಕಲಾಗುತ್ತಿದೆ. ಈ ಸಂಕಷ್ಟದ ಸಮಯದಲ್ಲೂ ಕೂಡ ನೆರವಿಗೆ ದಾವಿಸದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸದ್ಯ ಆರೋಪ ಕೇಳಿ ಬಂದಿದೆ.

ಜೆಜೆಎಂ ಮೆಡಿಕಲ್ ಕಾಲೇಜು ಹಾಗೂ ಎಸ್ ಎಸ್ ಮೆಡಿಕಲ್ ಕಾಲೇಜುಗಳ ಬೆಡ್​ಗಳಲ್ಲಿ ತಲಾ 850 ಬೆಡ್​ಗಳಿವೆ. ಸರ್ಕಾರದ ಆದೇಶದ ಅನ್ವಯ ಎರಡು ಮೆಡಿಕಲ್ ಕಾಲೇಜುಗಳಿಂದ ತಲಾ 650 ಬೆಡ್ ಅಂದರೆ ಒಟ್ಟು 1300 ಬೆಡ್​ಗಳನ್ನ ಜಿಲ್ಲಾಡಳಿತಕ್ಕೆ ಬಿಟ್ಟು ಕೊಡಬೇಕು ಮತ್ತು ಈ ಬೆಡ್​ಗಳಿಗೆ ಜಿಲ್ಲಾಡಳಿತ ಕಳುಹಿಸಿದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಇದಕ್ಕೆ ರಾಜ್ಯ ಸರ್ಕಾರ ಆಯಾ ಮೆಡಿಕಲ್ ಕಾಲೇಜ್​ಗೆ ಹಣ ನೀಡುತ್ತದೆ. ಆದರೆ ಶಾಮನೂರು ಶಿವಶಂಕರಪ್ಪ ಅವರು ಜಿಲ್ಲಾಡಳಿತಕ್ಕೆ ಕೊಟ್ಟ ಬೆಡ್ ಕೇವಲ 91 ಮಾತ್ರ. ಉಳಿದಂತೆ ತಮಗೆ ಬೇಕಾದವರಿಗೆ ಬೆಡ್ ಕೊಟ್ಟು ಬೇಕಾದಷ್ಟು ಬಿಲ್ ಮಾಡಿ ಹಣ ಗಳಿಕೆಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರೇ ಈ ಬಗ್ಗೆ ಆಕ್ರೋಶ ಮತ್ತು ಅಸಹಾಯಕತೆ ವ್ಯಕ್ತ ಪಡಿಸಿದರು.

ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇತ್ರತ್ವದಲ್ಲಿ ನಿನ್ನೆ (ಮೇ 21) ಸಭೆ ನಡೆಯಿತು. ಇಲ್ಲಿ ಮೆಡಿಕಲ್ ಕಾಲೇಜ್​ಗಳ ಬಗ್ಗೆ ವಿವರಣ ಪಡೆದ ಸಚಿವರು ಪ್ರಖ್ಯಾತ ಮಠಾಧೀಶರುಗಳು ನಡೆಸುತ್ತಿರುವ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಶೇಖಡಾ 75ರಷ್ಟು ಬೆಡ್ ಬಿಟ್ಟುಕೊಟ್ಟಿದ್ದಾರೆ. ಸ್ವತಃ ಸ್ವಾಮೀಜಿಗಳ ಜೊತೆ ಸಿಎಂ ಯಡಿಯೂರಪ್ಪ ಮಾತಾಡಿದ್ದಾರೆ. ಆದರೆ ದಾವಣಗೆರೆಯಲ್ಲಿ ಮಾತ್ರ ಹೀಗೆ ಆಗಿದೆ. ಮೇಲಾಗಿ ರಾಜಕೀಯ ಹಿನ್ನೆಲೆ ಇರುವ ಶಾಮನೂರು ಶಿವಶಂಕರಪ್ಪ ಈ ರೀತಿ ಮಾತಾಡಬಾರದು. ಕಡ್ಡಾಯವಾಗಿ ಶೇಖಡಾ 75ರಷ್ಚು ಬೆಡ್ ಬಿಟ್ಟು ಕೊಡಿ. ಇಲ್ಲಾ ಎಂದರೆ ಸರ್ಕಾರ ತನ್ನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಂಕಷ್ಟದ ಕಾಲದಲ್ಲಿ ಸಂಘರ್ಷ ಬೇಡ ಎಂದು ತಿಳಿಸಿದ್ದಾರೆ.

ಸರ್ಕಾರದ ಆದೇಶವನ್ನ ಜಿಲ್ಲಾ ಮಟ್ಟದಲ್ಲಿ ಜಾರಿಗೆ ತರಬೇಕಾದವರು ಜಿಲ್ಲಾಧಿಕಾರಿಗಳು. ಆದರೆ ಅವರು ದಿಟ್ಟತನ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತದೆ. ಶಾಮನೂರು ಸಂಸ್ಥೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಸುಮ್ಮನಾಗುತ್ತಿದ್ದಾರೆ. ಇತ್ತ ಬಡವರು ಸಾವನ್ನಪ್ಪುತ್ತಿದ್ದಾರೆ. ಇನ್ನಾದರೂ ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.

ಇದನ್ನೂ ಓದಿ:

ದಾವಣಗೆರೆಯಲ್ಲಿ ಕೊರೊನಾ ಸೋಂಕಿತೆಯರಿಬ್ಬರು ಕೊವಿಡ್ ಕೇಂದ್ರದಿಂದ ಪರಾರಿ; ಪ್ರೀತಿಸಿದವರ ಜೊತೆ ಓಡಿ ಹೋಗಿರುವ ಶಂಕೆ

ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ

Published On - 5:12 pm, Sat, 22 May 21