ಶಿರೂರು ದುರಂತ: ಒಂದು ವಾರ ಕಳೆದ್ರೂ ಪತ್ತೆಯಾದ ಮೂಳೆಗಳ ಡಿಎನ್​ಎ ವರದಿ ಬಂದಿಲ್ಲ, ವೈದ್ಯ ಸಿಬ್ಬಂದಿ ಎಡವಟ್ಟು

ವೈದ್ಯ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸಂಕಷ್ಟ ಶುರುವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಸೆಪ್ಟೆಂಬರ್ 30 ರಂದು ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದ ಮೂಳೆಗಳ ಡಿಎನ್​ಎ ವರದಿ ಒಂದು ವಾರ ಕಳೆದರೂ ಬಂದಿಲ್ಲ. ಹೆಚ್ಚಿನ ಕೆಮಿಕಲ್ ಬಳಕೆಯಿಂದ ವರದಿ ನೆಗೆಟಿವ್ ಬರುತ್ತಿದೆ.

ಶಿರೂರು ದುರಂತ: ಒಂದು ವಾರ ಕಳೆದ್ರೂ ಪತ್ತೆಯಾದ ಮೂಳೆಗಳ ಡಿಎನ್​ಎ ವರದಿ ಬಂದಿಲ್ಲ, ವೈದ್ಯ ಸಿಬ್ಬಂದಿ ಎಡವಟ್ಟು
ಶಿರೂರು ದುರಂತ: ಒಂದು ವಾರ ಕಳೆದ್ರೂ ಪತ್ತೆಯಾದ ಮೂಳೆಗಳ ಡಿಎನ್​ಎ ವರದಿ ಬಂದಿಲ್ಲ, ವೈದ್ಯ ಸಿಬ್ಬಂದಿ ಎಡವಟ್ಟು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 07, 2024 | 3:11 PM

ಕಾರವಾರ, ಅಕ್ಟೋಬರ್​ 07: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ (Shiruru Hill Collapse) ಸಂಬಂಧಿಸಿದಂತೆ ಇತ್ತೀಚೆಗೆ ಕೇರಳ ಮೂಲಕ ಲಾರಿ ಚಾಲಕ ಅರ್ಜನ್​ ಶವ ಪತ್ತೆ ಆಗಿತ್ತು. ಬಳಿಕ ಮಾನವನ ದೇಹದ 2 ಮೂಳೆಗಳು ಪತ್ತೆ ಆಗಿದ್ದವು. ಬಳಿಕ ಅದನ್ನು ಡಿಎನ್ಎ ಟೆಸ್ಟ್​​ಗೆ ರವಾನೆ ಮಾಡಲಾಗಿತ್ತು. ಆದರೆ ಇದೀಗ ಒಂದು ವಾರ ಕಳೆದರೂ ಡಿಎನ್​ಎ ವರದಿ ಬಂದಿಲ್ಲ. ಹೀಗಾಗಿ ವೈದ್ಯ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ಜಿಲ್ಲಾಡಳಿತಕ್ಕೆ ಸಂಕಷ್ಟ ಎದುರಾಗಿದೆ.

ಸೆಪ್ಟೆಂಬರ್ 30 ರಂದು ಕಾರ್ಯಾಚರಣೆ ವೇಳೆ ಮೂಳೆಗಳು ಪತ್ತೆಯಾಗಿದ್ದವು. ಡಿಎನ್​ಎ ಪರೀಕ್ಷೆಗೆ ಕಳುಹಿಸುವಾಗ ಹೆಚ್ಚಿನ ಕೆಮಿಕಲ್ ಬಳಕೆ ಮಾಡಲಾಗಿದೆ. ಇದರಿಂದ ಡಿಎನ್​ಎ ವರದಿ ನೆಗೆಟಿವ್ ಬರುತ್ತಿದೆ. ಹುಬ್ಬಳ್ಳಿಯ ಎಫ್​ಎಸ್​ಎಲ್​ ಲ್ಯಾಬ್​ನಲ್ಲಿ ಕಳೆದ ಐದು ದಿನದಿಂದ ತಜ್ಞರು ನಿರಂತರ ಟೆಸ್ಟ್ ಮಾಡುತ್ತಿದ್ದಾರೆ. ಮೂಳೆಯ ಡಿಎನ್​ಎ ವರದಿ ಬರುವುದು ಇನ್ನಷ್ಟು ವ್ಯತ್ಯಯ ಆಗುವ ಸಾಧ್ಯತೆ ಇದೆ. ಕೆಮಿಕಲ್ ಹೆಚ್ಚಿಗೆ ಬಳಕೆಯಿಂದ ಡಿಎನ್​ಎ ವರದಿ ಬರುವುದ ಕಷ್ಟ ಎಂದು ಕೆಲವು ತಜ್ಞರು ಹೇಳುತ್ತಿದ್ದಾರೆ. ಕಣ್ಮರೆಯಾದವರ ಕುಟುಂಬಸ್ಥರ ಪ್ರಶ್ನೆಗೆ ಜಿಲ್ಲಾಡಳಿತ ಉತ್ತರಿಸಲಾಗದೆ ಸಂಕಷ್ಟಕ್ಕೆ ಸಿಲುಕೊಂಡಿದೆ.

ಇದನ್ನೂ ಓದಿ: ಶಿರೂರು ಭೂಕುಸಿತ ಪ್ರಕರಣ: ಗಂಗಾವಳಿ ನದಿಯಲ್ಲಿ ಮಾನವ ದೇಹದ 2 ಮೂಳೆ ಪತ್ತೆ

ಕಣ್ಮರೆಯಾದವರ ಶೋಧಕ್ಕಾಗಿ 91 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋವಾ ಮೂಲದ ಡ್ರೆಜರ್ ಹಾಗೂ ಬಾರ್ಜ್ ಮೂಲಕ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಇದೆಲ್ಲದರ ಮಧ್ಯೆ ಕಣ್ಮರೆಯಾದ ಜಗನ್ನಾಥ್ ನಾಯ್ಕ್ ಮತ್ತು ಲೊಕೇಶ್ ನಾಯ್ಕ್ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿದೆ.

ಜಿಲ್ಲಾಡಳಿತ ನಮ್ಮ ತಂದೆಯ ಮರಣ ಪ್ರಮಾಣಪತ್ರ ನೀಡಲಿ: ಜಗನ್ನಾಥ್ ನಾಯ್ಕ್ ಪುತ್ರಿ ಮನಿಷಾ

ಕಣ್ಮರೆಯಾದ ಜಗನ್ನಾಥ್ ನಾಯ್ಕ್ ಪುತ್ರಿ ಮನಿಷಾ ಪ್ರತಿಕ್ರಿಯಿಸಿದ್ದು, ನಮ್ಮ ತಂದೆ ಕಣ್ಮರೆಯಾಗಿ ಎರಡು ತಿಂಗಳು ಕಳೆಯಿತು. ತಂದೆಯ ಶೋಧಕ್ಕಾಗಿ ಜಿಲ್ಲಾಡಳಿತ ಪ್ರಾಮಾಣಿಕವಾಗಿ ಬಹಳಷ್ಟು ಪ್ರಯತ್ನ ಮಾಡಿದೆ. ಆದರೆ ನಮ್ಮ ತಂದೆಯ ಸಾವಿನ ಬಗ್ಗೆ ಅಧಿಕೃತವಾಗಿ ಏನೂ ಸಿಕ್ಕಿಲ್ಲ. ಕಳೆದ ವಾರ ಶೋಧ ಕಾರ್ಯ ವೇಳೆ ಎರಡು ಮೂಳೆ ಪತ್ತೆ ಆಗಿತ್ತು. ಪತ್ತೆಯಾದ ಮೂಳೆಯ ಕುರಿತು ಇದುವರೆಗೂ ಡಿಎನ್​ಎ ವರದಿ ಕೂಡ ಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ನದಿಯಲ್ಲಿ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆ

ಮನೆಯಲ್ಲಿ ನಾವು ಮೂವರು ಹೆಣ್ಣು ಮಕ್ಕಳು ಇದ್ದೇವೆ. ಜಿಲ್ಲಾಡಳಿತಕ್ಕೆ ನಾನು ಕೈ ಮುಗಿದು ಮನವಿ ಮಾಡುತ್ತೇನೆ ತಂದೆಯ ಸಾವು ದೃಢ ಆಗದ ಹಿನ್ನೆಲೆ ಸರಕಾರದ ಯೋಜನೆ ಲಾಭ ನಮಗೆ ಸಿಗುತ್ತಿಲ್ಲ. ಜಿಲ್ಲಾಡಳಿತ ನಮ್ಮ ತಂದೆಯ ಮರಣ ಪ್ರಮಾಣಪತ್ರ ಕೊಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್