AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

60 ವರ್ಷದ ಅಂಕಲ್​ಗೆ ಹುಟ್ತು ಮದುವೆ ಆಸೆ; ಮದುವೆಯಾಗಲು ಬಂದಿದ್ದ ಆಂಟಿ ತಾಳಿ, ಆಭರಣ ಸಮೇತ ಎಸ್ಕೇಪ್‌

ಒಂಟಿತನದಿಂದ ಹೊರಬರಲು ಮದುವೆಯಾಗೋಕೆ ಹೊರಟಿದ್ದ ನಂಜುಂಡಪ್ಪ, ಆಂಟಿಯಿಂದ ಮೋಸ ಹೋಗಿದ್ರೆ, ಮದುವೆಯಾಗ್ತೀನಿ ಅಂತಾ ಬಂದಿದ್ದ ಚಂದ್ರಿಕಾ ಆಭರಣ ಬಟ್ಟೆಯೊಂದಿಗೆ ಜೂಟ್‌ ಆಗಿದ್ದಾರೆ.

60 ವರ್ಷದ ಅಂಕಲ್​ಗೆ ಹುಟ್ತು ಮದುವೆ ಆಸೆ; ಮದುವೆಯಾಗಲು ಬಂದಿದ್ದ ಆಂಟಿ ತಾಳಿ, ಆಭರಣ ಸಮೇತ ಎಸ್ಕೇಪ್‌
ನಂಜುಂಡಪ್ಪ
TV9 Web
| Updated By: ಆಯೇಷಾ ಬಾನು

Updated on: Dec 09, 2021 | 9:21 AM

Share

ಶಿವಮೊಗ್ಗ: ಆತನಿಗೆ 60 ವರ್ಷ ವಯಸ್ಸು. 7 ತಿಂಗಳ ಹಿಂದೆ ಪತ್ನಿಯನ್ನ ಕಳೆದುಕೊಂಡಿದ್ದ ಆತನಿಗೆ ಒಂಟಿತನ ಕಾಡ್ತಿತ್ತು. ಹೀಗಾಗಿ ಎರಡನೇ ಮದುವೆಯ ಆಸೆ ಕಂಡಿದ್ದ. ಕನ್ನಡ ಮ್ಯಾಟ್ರಿಮೊನಿಯಲ್ಲಿ ಆಂಟಿಯನ್ನೂ ನೋಡಿಕೊಡಿದ್ದ. ತಾಳಿ ಕಟ್ಟಿಸಿಕೊಳ್ಳಬೇಕಿದ್ದ ಆಂಟಿ ಅದೇ ತಾಳಿಯೊಂದಿಗೆ ಎಸ್ಕೇಪ್ ಆಗಿದ್ದಾಳೆ.

60 ವರ್ಷದ ಅಂಕಲ್‌ಗೆ ಮದುವೆಯ ಆಸೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದ 60 ವರ್ಷದ ನಂಜುಂಡಪ್ಪ ಕೃಷಿಕರಾಗಿದ್ದು, ಮದುವೆಯಾಗಿ 30 ವರ್ಷವಾಗಿದೆ. ಒಂದು ಗಂಡು ಎರಡು ಹೆಣ್ಣು ಮಕ್ಕಳಿದ್ದೂ ಎಲ್ರಿಗೂ ಮದುವೆಯಾಗಿ ಮಕ್ಕಳಿವೆ. ಈ ನಡುವೆ 7 ತಿಂಗಳ ಹಿಂದೆ ನಂಜುಂಡಪ್ಪನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ರು. ಆ ಬಳಿಕ ನಂಜುಂಡಪ್ಪನಿಗೆ ಒಂಟಿತನ ಕಾಡೋಕೆ ಶುರುವಾಗಿತ್ತು. ಹೀಗಾಗಿ ಮತ್ತೊಂದು ಮದುವೆಯಾಗಲು ನಿರ್ಧರಿಸಿದ ನಂಜುಂಡಪ್ಪ, ಈ ಇಳಿವಯಸ್ಸಿನಲ್ಲೂ ಕನ್ನಡ ಮ್ಯಾಟ್ರಿಮೊನಿ ಮೊರೆ ಹೋಗಿದ್ದ.

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರೋ ಕನ್ನಡ ಮ್ಯಾಟ್ರಿಮೊನಿಯಲ್ಲಿ ಮೂರುವರೆ ಸಾವಿರ ಹಣ ಕೊಟ್ಟು ನೋಂದಣಿ ಮಾಡಿಕೊಂಡಿದ್ದ. ಆ ಬಳಿಕ ಬೆಂಗಳೂರಿನ ಯಲಹಂಕದ ಚಂದ್ರಿಕಾ ಅನ್ನೋ ಮಹಿಳೆ ನಂಜುಂಡಪ್ಪನನ್ನ ಒಪ್ಪಿಕೊಂಡು ಮದುವೆಗೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ಲು. ಹೀಗೆ ಮದುವೆಯಾಗ್ತೀನಿ ಅಂತಾ ಬಂದಿದ್ದ ಚಂದ್ರಿಕಾ ಆಕಾಶದಲ್ಲಿನ ಚಂದ್ರನನ್ನ ತೋರಿಸಿ ಎಸ್ಕೇಪ್‌ ಆಗಿದ್ದಾಳೆ.

ಅಷ್ಟಕ್ಕೂ ಚಂದ್ರಿಕಾ ಗ್ರೀನ್‌ಸಿಗ್ನಲ್‌ ಕೊಡ್ತಿದ್ದಂತೆ ಮದುವೆಗೆ ದಿನಾಂಕ ಕೂಡಾ ಫಿಕ್ಸ್‌ ಆಗಿತ್ತು. ಅದ್ರಂತೆ ನವೆಂಬರ್‌ 15 ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ಸಿದ್ದತೆ ನಡೆದಿತ್ತು. ಸ್ನೇಹಿತರನ್ನ ಕರೆದುಕೊಂಡು ಹೋಗಿದ್ದ ನಂಜುಂಡಪ್ಪ, ಹಸೆಮಣೆ ಏರೋಕೆ ಸಿದ್ದವಾಗಿದ್ದ. ಆದ್ರೆ ಅಲ್ಲಿ ಮದುವೆಗೆ ಅವಕಾಶ ಇಲ್ಲ ಅಂತಾ ಹೇಳಿದ್ರಂತೆ. ಹೀಗಾಗಿ ವಾಪಸ್ ಶಿವಮೊಗ್ಗಕ್ಕೆ ಬಂದಿದ್ರು . ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಬೈಕ್‌ ತರ್ತೀನಿ ಅಂತಾ ನಂಜುಂಡಪ್ಪ ಹೋದ್ರೆ, ಊಟ ಮಾಡಿ ಬರ್ತೀನಿ ಅಂತಾ ಚಂದ್ರಿಕಾ ಹೋಗಿದ್ಲು. ಆದ್ರೆ ವಾಪಸ್‌ ಮಾತ್ರ ಬಂದಿಲ್ಲ. ಮದುವೆಗೆ ತಂದಿದ್ದ ಚಿನ್ನದ ತಾಳಿ, 4 ಬೆಳ್ಳಿ ಕಾಲುಂಗುರು, 2 ಬೆಳ್ಳಿ ಕಾಲು ಚೈನು, ಎರಡು ಬೆಳ್ಳಿ ಕೈ ಬಳೆ, ರೇಷ್ಮೆ ಸೀರೆಯೊಂದಿಗೆ ಜೂಟ್‌ ಆಗಿದ್ದಾಳೆ.

ಒಟ್ನಲ್ಲಿ ಒಂಟಿತನದಿಂದ ಹೊರಬರಲು ಮದುವೆಯಾಗೋಕೆ ಹೊರಟಿದ್ದ ನಂಜುಂಡಪ್ಪ, ಆಂಟಿಯಿಂದ ಮೋಸ ಹೋಗಿದ್ರೆ, ಮದುವೆಯಾಗ್ತೀನಿ ಅಂತಾ ಬಂದಿದ್ದ ಚಂದ್ರಿಕಾ ಆಭರಣ ಬಟ್ಟೆಯೊಂದಿಗೆ ಜೂಟ್‌ ಆಗಿದ್ದಾರೆ. ಇಂಥಾ ಕಿಲಾಡಿಗಳಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸಬೇಕಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ

ಇದನ್ನೂ ಓದಿ: S R Morey death: 4 ಬಾರಿ ಶಾಸಕ, ಮಾಜಿ ಸಚಿವ ಎಸ್. ಆರ್‌. ಮೋರೆ‌ ಜನ್ಮದಿನದಂದೇ ವಿಧಿವಶ

ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!