ಮೈಸೂರಿನಲ್ಲೊಂದು ಅಮಾನವೀಯ ಘಟನೆ.. ಕೊರೊನಾ ಸಮಯದಲ್ಲಿ ಮನೆಯವರಿಂದ ಬೀದಿಪಾಲಾದ ಅಜ್ಜಿ

ಕೊರೊನಾ ಸಂಕಷ್ಟದ ಕಾಲದಲ್ಲಿ ಮನೆಯವರೇ ಅಜ್ಜಿಯನ್ನು ಬೀದಿಪಾಲು ಮಾಡಿದ್ದು ಅಜ್ಜಿಯ ಮನವೊಲಿಸಿ ಆಕೆಯನ್ನು ಮನೆಗೆ ವಾಪಸ್ ಕಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಗ್ರಾಮದಲ್ಲಿ ಕುಟುಂಬವೊಂದು ಅಜ್ಜಿಯನ್ನು ನಡು ಬೀದಿಯಲ್ಲಿ ಬಿಟ್ಟು ಹೋಗಿದ್ದಾರೆ.

ಮೈಸೂರಿನಲ್ಲೊಂದು ಅಮಾನವೀಯ ಘಟನೆ.. ಕೊರೊನಾ ಸಮಯದಲ್ಲಿ ಮನೆಯವರಿಂದ ಬೀದಿಪಾಲಾದ ಅಜ್ಜಿ
ಅಜ್ಜಿಯನ್ನು ಮನೆಗೆ ವಾಪಸ್ ಕಳಿಸಿದ ಸ್ನೇಹ ಬಳಗ ಸದಸ್ಯರು

Updated on: May 25, 2021 | 8:17 AM

ಮೈಸೂರು: ಮಹಾಮಾರಿ ಕೊರೊನಾಗೆ ಜನ ಬಲಿಯಾಗುತ್ತಿದ್ದಾರೆ. ಕುಟುಂಬ ಸದಸ್ಯರನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇದರ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಕೊರೊನಾ ಸಂಕಷ್ಟದ ಕಾಲದಲ್ಲಿ ಮನೆಯವರೇ ಅಜ್ಜಿಯನ್ನು ಬೀದಿಪಾಲು ಮಾಡಿದ್ದು ಅಜ್ಜಿಯ ಮನವೊಲಿಸಿ ಆಕೆಯನ್ನು ಮನೆಗೆ ವಾಪಸ್ ಕಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಗ್ರಾಮದಲ್ಲಿ ಕುಟುಂಬವೊಂದು ಅಜ್ಜಿಯನ್ನು ನಡು ಬೀದಿಯಲ್ಲಿ ಬಿಟ್ಟು ಹೋಗಿದ್ದಾರೆ. ಕೊರೊನಾದಂತಹ ಸಂಕಷ್ಟವನ್ನು ಎದುರಿಸಲು ರಾಜ್ಯ ಸರ್ಕಾರವೇ ಲಾಕ್ಡೌನ್ ಹೇರಿದೆ. ಇದರ ನಡುವೆ ಕುಟುಂಬವೊಂದು ಇಂತಹ ದುಷ್ಕೃತ್ಯ ಎಸಗಿದೆ.

ಮನೆಯವರೇ ದ್ವಿಚಕ್ರವಾಹನದಲ್ಲಿ ಬಂದು ಅಜ್ಜಿಯನ್ನು ನಡು ಬೀದಿಯಲ್ಲಿ ಬಿಟ್ಟುಹೋಗಿದ್ದಾರೆ. ಹುಣಸೂರಿನ ಅಗ್ರಹಾರದ ನಿವಾಸಿಯಾಗಿರುವ ಅಜ್ಜಿ, ತನಗೆ ಮಕ್ಕಳು ಕಿರುಕುಳ ಕೊಡುತ್ತಾರೆ. ನಾನು ಮನೆಗೆ ವಾಪಸ್ ಹೋಗಲ್ಲವೆಂದು ಪಟ್ಟುಹಿಡಿದಿದ್ದು ಪೊಲೀಸರ ಸಹಾಯದಿಂದ ಅಜ್ಜಿ ಮನವೊಲಿಸಿ ಸ್ನೇಹಜೀವಿ ಬಳಗದ ಸದಸ್ಯರು ಅಜ್ಜಿಯನ್ನು ಅವರ ಮನೆಗೆ ತಲುಪಿಸಿದ್ದಾರೆ. ಹಾಗೂ ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪೊಲೀಸರು ಮಕ್ಕಳಿಗೆ ಬುದ್ದಿ ಹೇಳಿದ್ದಾರೆ. ಪೊಲೀಸರು ಸ್ನೇಹ ಬಳಗ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಂತ-2 ರ ರೀಚ್ – 2 ವಿಸ್ತರಿತ ಮಾರ್ಗದ ಪರಿಶೀಲನೆ ನಡೆಸಲಿರುವ ಸಿಎಂ ಯಡಿಯೂರಪ್ಪ