ಕೊರೆಯುವ ಚಳಿಯಲ್ಲಿ ಹೆತ್ತ ತಾಯಿಯನ್ನ ಮನೆಯಿಂದ ಹೊರ ಹಾಕಿದ ಪಾಪಿ

ಯಾದಗಿರಿ: ತಾಯಿಯನ್ನ ದೇವರಿಗೆ ಹೋಲಿಸುತ್ತಾರೆ. ಮಗು ಏನೇ ತಪ್ಪು ಮಾಡಲಿ ಎಲ್ಲವನ್ನು ಸಯಿಸುವವಳೇ ತಾಯಿ. ಒಬ್ಬಳೇ ತಾಯಿ ಹತ್ತಾರೂ ಮಕ್ಕಳನ್ನ ಸಾಕಬಳ್ಳಲು. ಆದರೆ ಅದೇ ಮಗ ತಾಯಿಯನ್ನು ಬೀದಿ ಪಾಲು ಮಾಡ್ತಾನೆ. ಇದೇ ರೀತಿ ಕೊರೆಯುವ ಚಳಿಯಲ್ಲಿ ಹೆತ್ತ ತಾಯಿಯನ್ನ ಪಾಪಿ ಪುತ್ರನೊಬ್ಬ ಮನೆಯಿಂದ ಹೊರ ದಬ್ಬಿದ್ದಾನೆ. ಕಳೆದ 4 ತಿಂಗಳಿಂದ ಸುರಪುರ ತಾಲೂಕಿನ ಕೆಂಭಾವಿ ಎಪಿಎಂಸಿ ಆವರಣದಲ್ಲೇ ವೃದ್ಧೆ ಆಶ್ರಯ ಪಡೆದಿದ್ದಾರೆ. ಕೆಂಭಾವಿಯ ಶಿವಾಜಿ ನಗರದ ನಿವಾಸಿ 80 ವರ್ಷದ ಹೊನ್ನಮ್ಮರನ್ನ ಪುತ್ರ ಸಿದ್ದಪ್ಪ ಮನೆಯಿಂದ […]

ಕೊರೆಯುವ ಚಳಿಯಲ್ಲಿ ಹೆತ್ತ ತಾಯಿಯನ್ನ ಮನೆಯಿಂದ ಹೊರ ಹಾಕಿದ ಪಾಪಿ
ಸಾಧು ಶ್ರೀನಾಥ್​

Updated on: Dec 12, 2019 | 3:10 PM

ಯಾದಗಿರಿ: ತಾಯಿಯನ್ನ ದೇವರಿಗೆ ಹೋಲಿಸುತ್ತಾರೆ. ಮಗು ಏನೇ ತಪ್ಪು ಮಾಡಲಿ ಎಲ್ಲವನ್ನು ಸಯಿಸುವವಳೇ ತಾಯಿ. ಒಬ್ಬಳೇ ತಾಯಿ ಹತ್ತಾರೂ ಮಕ್ಕಳನ್ನ ಸಾಕಬಳ್ಳಲು. ಆದರೆ ಅದೇ ಮಗ ತಾಯಿಯನ್ನು ಬೀದಿ ಪಾಲು ಮಾಡ್ತಾನೆ. ಇದೇ ರೀತಿ ಕೊರೆಯುವ ಚಳಿಯಲ್ಲಿ ಹೆತ್ತ ತಾಯಿಯನ್ನ ಪಾಪಿ ಪುತ್ರನೊಬ್ಬ ಮನೆಯಿಂದ ಹೊರ ದಬ್ಬಿದ್ದಾನೆ.

ಕಳೆದ 4 ತಿಂಗಳಿಂದ ಸುರಪುರ ತಾಲೂಕಿನ ಕೆಂಭಾವಿ ಎಪಿಎಂಸಿ ಆವರಣದಲ್ಲೇ ವೃದ್ಧೆ ಆಶ್ರಯ ಪಡೆದಿದ್ದಾರೆ. ಕೆಂಭಾವಿಯ ಶಿವಾಜಿ ನಗರದ ನಿವಾಸಿ 80 ವರ್ಷದ ಹೊನ್ನಮ್ಮರನ್ನ ಪುತ್ರ ಸಿದ್ದಪ್ಪ ಮನೆಯಿಂದ ಹೊರಹಾಕಿದ್ದಾನೆ. ಅನ್ನ, ನೀರು ಇಲ್ಲದೆ ವಯಸ್ಸಾದ ಸಮಯದಲ್ಲಿ ಜೊತೆಗಿರದೆ ಪಾಪಿ ಮಗ ತಾಯಿಯನ್ನ ಬಿಟ್ಟು ಹೋಗಿದ್ದಾನೆ. ಸದ್ಯ ಸ್ಥಳೀಯ ರೈತರು ವೃದ್ಧೆ ಹೊನ್ನಮ್ಮಗೆ ಉಪಚಾರ ಮಾಡುತ್ತಿದ್ದಾರೆ. ರೈತರು ನೀಡಿದ ಬಿಸ್ಕೆಟ್, ಟೀ ಕುಡಿದೇ ವೃದ್ಧೆ ಜೀವನ ಸಾಗಿಸುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us