
ಬೆಂಗಳೂರು: ಕರ್ನಾಟಕದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲಿ ಬಹುಪಾಲು ಹೊರರಾಜ್ಯದಿಂದ ಬಂದವರೇ ಆಗಿದ್ದಾರೆ. ಹಾಗಾಗಿ ಇದೀಗ ರಾಜ್ಯ ಸರ್ಕಾರ ತನ್ನ ಕ್ವಾರಂಟೈನ್ ನಿಯಮಾವಳಿವನ್ನು ಬದಲಾವಣೆ ಮಾಡಿದೆ. ಇದೀಗ ಹೊರ ರಾಜ್ಯದಿಂದ ಬರುವ ಎಲ್ಲರಿಗೂ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ನಲ್ಲಿ ಇರಿಸಲಾಗುವುದು.
ಈ ಹಿಂದೆ, ಕೇವಲ ಮಹಾರಾಷ್ಟ್ರದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಉಳಿದ 7 ದಿನ ಹೋಂ ಕ್ವಾರಂಟೈನ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಆದರೆ, ಈಗ ಸರ್ಕಾರ ತನ್ಮ ನಿರ್ಧಾರವನ್ನು ಇತರೆ ಹೊರರಾಜ್ಯಗಳಿಂದ ಬಂದವರಿಗೂ ಅನ್ವಯಿಸುವಂತೆ ನಿಯಮವನ್ನು ಬದಲಾಯಿಸಿದೆ. ಇದರ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
Karnataka is steadily maintaining a healthy recovery rate of 61.39% and mortality rate remains low at 1.49%. We are continuing to effectively trace all contacts of positive case within 24 hours and every inter-state arrival is being quarantined for 14 days.@CMofKarnataka pic.twitter.com/jjrueGg0EH
— Dr Sudhakar K (@mla_sudhakar) June 22, 2020
Published On - 12:57 pm, Mon, 22 June 20