AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಸಾಮಾನ್ಯವಾಗಿರಲಿದೆ ನೈಋತ್ಯ ಮಾನ್ಸೂನ್; ಹವಾಮಾನ ಇಲಾಖೆ ವರದಿಯಿಂದ ಆರ್ಥಿಕ ತಜ್ಞರು ಫುಲ್​ ಖುಷ್​

ದೀರ್ಘಾವಧಿ ಸರಾಸರಿ ಶೇ.96 ರಿಂದ ಶೇ.104ರವರೆಗೆ ಮಳೆಯಾದರೆ ಅದನ್ನು ಸಾಮಾನ್ಯ ಮಾನ್ಸೂನ್​ ಎಂದೇ ಪರಿಗಣಿಸಲಾಗುತ್ತದೆ. ಜೂನ್​ನಿಂದ ಪ್ರಾರಂಭವಾಗುವ ನೈಋತ್ಯ ಮಾನ್ಸೂನ್​ ಮುನ್ಸೂಚನಾ ವರದಿಯನ್ನು ಮೇ ತಿಂಗಳ ಕೊನೇ ವಾರದಲ್ಲಿ ಹವಾಮಾನ ಇಲಾಖೆ ನೀಡಲಿದೆ.

ಈ ಬಾರಿ ಸಾಮಾನ್ಯವಾಗಿರಲಿದೆ ನೈಋತ್ಯ ಮಾನ್ಸೂನ್; ಹವಾಮಾನ ಇಲಾಖೆ ವರದಿಯಿಂದ ಆರ್ಥಿಕ ತಜ್ಞರು ಫುಲ್​ ಖುಷ್​
ಮಳೆ (ಪ್ರಾತಿನಿಧಿಕ ಚಿತ್ರ)
Lakshmi Hegde
| Edited By: |

Updated on:Apr 17, 2021 | 2:56 PM

Share

ದೆಹಲಿ: ಈ ಬಾರಿ ದೇಶದಲ್ಲಿ ನೈಋತ್ಯ ಮಾನ್ಸೂನ್​ ಸಾಮಾನ್ಯವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂನ್​​ನಲ್ಲಿ ಶುರುವಾಗುವ ಈ ನೈಋತ್ಯ ಮಾನ್ಸೂನ್​ ಮಳೆ ಸೆಪ್ಟೆಂಬರ್​ವರೆಗೆ ಬೀಳಲಿದ್ದು, ಕಳೆದ ಮೂರುವರ್ಷಗಳಿಂದ ನೈಋತ್ಯ ಮಾನ್ಸೂನ್​ ಎಫೆಕ್ಟ್​ ಸರಾಸರಿಗಿಂತ ಜಾಸ್ತಿಯೇ ಇರುತ್ತಿತ್ತು. ಈ ಬಾರಿ ನಾಲ್ಕು ತಿಂಗಳ ದೀರ್ಘಾವಧಿ ಸರಾಸರಿ (ಎಲ್​​ಪಿಎ) ಶೇ.98ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಇದು ಸಾಮಾನ್ಯ ಮಾನ್ಸೂನ್​ ಎನ್ನಿಸಿಕೊಳ್ಳಲಿದೆ ಎಂದು ಐಎಂಡಿ ಹೇಳಿದೆ.

ದೀರ್ಘಾವಧಿ ಸರಾಸರಿ ಶೇ.96 ರಿಂದ ಶೇ.104ರವರೆಗೆ ಮಳೆಯಾದರೆ ಅದನ್ನು ಸಾಮಾನ್ಯ ಮಾನ್ಸೂನ್​ ಎಂದೇ ಪರಿಗಣಿಸಲಾಗುತ್ತದೆ. ಜೂನ್​ನಿಂದ ಪ್ರಾರಂಭವಾಗುವ ನೈಋತ್ಯ ಮಾನ್ಸೂನ್​ ಮುನ್ಸೂಚನಾ ವರದಿಯನ್ನು ಮೇ ತಿಂಗಳ ಕೊನೇ ವಾರದಲ್ಲಿ ಹವಾಮಾನ ಇಲಾಖೆ ನೀಡಲಿದೆ. ಹಾಗೇ, ಜೂನ್​ನಿಂದ ಸೆಪ್ಟೆಂಬರ್​ವರೆಗೆ ಪ್ರತಿತಿಂಗಳ ಮುನ್ಸೂಚನೆಯನ್ನೂ ಅಪ್​ಡೇಟ್ ಮಾಡಲಾಗುವುದು ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್​ ರಾಜೀವನ್ ತಿಳಿಸಿದ್ದಾರೆ.

ಕೃಷಿಗೆ ತೊಡಕಿಲ್ಲ ಇನ್ನು ಈ ಬಾರಿ ನೈಋತ್ಯ ಮಾನ್ಸೂನ್​ ಸಾಮಾನ್ಯವಾಗಿರಲಿದೆ ಎಂಬ ಹವಾಮಾನ ಇಲಾಖೆ ವರದಿಯ ಬಗ್ಗೆ ಆರ್ಥಿಕ ತಜ್ಞರು ಖುಷಿ ವ್ಯಕ್ತಪಡಿಸಿದ್ದಾರೆ. ಕೃಷಿವಲಯಕ್ಕೆ ನಿಜಕ್ಕೂ ಇದು ಗುಡ್​ನ್ಯೂಸ್ ಎಂದು ಹೇಳಿದ್ದಾರೆ. ಮಾನ್ಸೂನ್​ ಸಾಮಾನ್ಯವಾಗಿರಲಿದೆ ಎಂಬ ಹವಾಮಾನ ಇಲಾಖೆಯ ವರದಿ ನಿಜಕ್ಕೂ ಸಮಾಧಾನ ತಂದಿದೆ ಎಂದು ಐಸಿಆರ್​ಎ ಮುಖ್ಯ ಆರ್ಥಿಕ ತಜ್ಞರಾದ ಅದಿತಿ ನಾಯರ್​ ತಿಳಿಸಿದ್ದಾರೆ.

ಇದನ್ನೂ ಓದಿ:  ನನ್ನ ಸಂಪರ್ಕದಲ್ಲಿದ್ದವರೆಲ್ಲಾ ಕ್ವಾರಂಟೈನ್ ಆಗಿ, ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ: ಬಿ.ಎಸ್.ಯಡಿಯೂರಪ್ಪ ಮನವಿ

ರಾತ್ರೋರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ-ರಣವೀರ್​ ಸಿಂಗ್​! ಕೊರೊನಾ ಕಾರಣ

Published On - 5:45 pm, Fri, 16 April 21

Follow Us
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು