AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರಿಯಾಯ್ತು ಕೊರೊನಾ ಕರ್ಫ್ಯೂ: ಬೆಂಗಳೂರಿನಿಂದ ಹೊರಟವು 6000ಕ್ಕೂ ಹೆಚ್ಚು ಬಸ್

ಸಂಜೆಯ ನಂತರ ಮೆಜೆಸ್ಟಿಕ್​ನಲ್ಲಿ ಅಕ್ಷರಶಃ ಜನಜಾತ್ರೆಯ ವಾತಾವರಣವಿತ್ತು. ಕೆ.ಆರ್.ಮಾರುಕಟ್ಟೆ ಮತ್ತು ಆನಂದರಾವ್ ಸರ್ಕಲ್​ಗಳಿಂದ ಖಾಸಗಿ ಬಸ್​ಗಳೂ ದೊಡ್ಡ ಸಂಖ್ಯೆಯಲ್ಲಿ ಇತರ ಊರುಗಳಿಗೆ ಹೊರಟವು.

ಜಾರಿಯಾಯ್ತು ಕೊರೊನಾ ಕರ್ಫ್ಯೂ: ಬೆಂಗಳೂರಿನಿಂದ ಹೊರಟವು 6000ಕ್ಕೂ ಹೆಚ್ಚು ಬಸ್
ಸ್ವಗ್ರಾಮಕ್ಕೆ ಹಿಂತಿರುಗುತ್ತಿರುವ ಜನ
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 27, 2021 | 10:45 PM

Share

ಬೆಂಗಳೂರು: ಕರ್ನಾಟಕ ಸರ್ಕಾರವು ಸೋಮವಾರ ಘೋಷಿಸಿದ್ದಂತೆ ಇಂದು (ಏಪ್ರಿಲ್ 27) ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಕೊವಿಡ್ ಕರ್ಫ್ಯೂ ಹೆಸರಿನ ಲಾಕ್​ಡೌನ್ ಜಾರಿಯಾಗಿದೆ. ನಗರ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಡೀದಿನ ಬಸ್​ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿಯೇ ಇತ್ತು. ಒಂದರ ಹಿಂದೆ ಒಂದರಂತೆ ಬಸ್​ಗಳು ಹೊರಟವು. ರಾತ್ರಿ 9 ಗಂಟೆಯ ನಂತರ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸಾರಿಗೆ ನಿಗಮದ ಬಸ್​ ಸಂಚಾರ ಇರುವುದಿಲ್ಲ ಎಂದು ಮಧ್ಯಾಹ್ನವೇ ಕೆಎಸ್​ಆರ್​ಟಿಸಿ ಘೋಷಿಸಿತ್ತು. ಹೀಗಾಗಿ ಸಂಜೆಯ ನಂತರ ಅಕ್ಷರಶಃ ಜನಜಾತ್ರೆಯ ವಾತಾವರಣವಿತ್ತು. ಕೆ.ಆರ್.ಮಾರುಕಟ್ಟೆ ಮತ್ತು ಆನಂದರಾವ್ ಸರ್ಕಲ್​ಗಳಿಂದ ಖಾಸಗಿ ಬಸ್​ಗಳೂ ದೊಡ್ಡ ಸಂಖ್ಯೆಯಲ್ಲಿ ಇತರ ಊರುಗಳಿಗೆ ಹೊರಟವು.

ರಾತ್ರಿ 9 ಗಂಟೆ ಸುಮಾರಿಗೆ ಬಸ್ ನಿಲ್ದಾಣದಿಂದ ಕೊನೆಯ ಸರ್ಕಾರಿ ಬಸ್ ಹೊರಟಿತು. ಕೊನೇ ಬಸ್ ಹೊರಟ ನಂತರ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಕಾರ್ಯಾಚರಣೆಯನ್ನು ಸಿಬ್ಬಂದಿ ಬಂದ್ ಮಾಡಿದರು. ನಿಲ್ದಾಣದ ಪ್ರವೇಶ, ನಿರ್ಗಮನ ದ್ವಾರಗಳ ಬಳಿ ಬ್ಯಾರಿಕೇಡ್ ಅಳವಡಿಸಲಾಯಿತು.

ಇದರ ಹೊರತಾಗಿ ದೊಡ್ಡ ಸಂಖ್ಯೆಯಲ್ಲಿ ಖಾಸಗಿ ವಾಹನಗಳಲ್ಲಿಯೂ ಜನರು ಬೆಂಗಳೂರಿನಿಂದ ಹೊರಟರು. ನೆಲಮಂಗಲದ ನವಯುಗ ಟೋಲ್​ನಲ್ಲಿ ಕಿಲೋಮೀಟರ್​ಗಟ್ಟಲೆ ವಾಹನಗಳು ಸಾಲುಗಟ್ಟಿದ್ದವು. ಮನೆಗಳನ್ನು ಖಾಲಿ ಮಾಡಿಕೊಂಡು ಸಾವಿರಾರು ಮಂದಿ ಬೆಂಗಳೂರು ತೊರೆದ ದೃಶ್ಯಗಳೂ ಕಣ್ಣಿಗೆ ಬಿದ್ದವು. ಲಾಕ್​ಡೌನ್​ಗೆ ವಿಧಿಸಿರುವ 14 ದಿನಗಳ ಗಡುವು ಮುಗಿದ ನಂತರವೂ ಪರಿಸ್ಥಿತಿ ಸುಧಾರಿಸುತ್ತೋ? ಇಲ್ಲವೋ ಎಂಬ ಆತಂಕ ಹಲವರನ್ನು ಬಾಧಿಸುತ್ತಿತ್ತು.

ಬೆಂಗಳೂರು ನಗರದಲ್ಲಿ ನೈಟ್​ ಹಾಲ್ಟ್​ ಆಗುತ್ತಿದ್ದ ಬಹುತೇಕ ಬಸ್ಸುಗಳನ್ನು ಖಾಸಗಿ ಬಸ್ ಕಂಪನಿಗಳು ವಾಪಸ್ ಕಳಿಸಿವೆ. ನಾಳೆ ಬೆಳಿಗ್ಗೆ ಜಿಲ್ಲಾ ಕೇಂದ್ರಗಳಿಂದಲೂ ಬಸ್​ಗಳು ಇರುವುದಿಲ್ಲ. ಹೀಗಾಗಿ ಹಳ್ಳಿಗಳಿಗೆ ತಲುಪುವವರು ಸ್ವಂತ ವಾಹನಗಳನ್ನೇ ಅವಲಂಬಿಸಬೇಕಾಗುತ್ತದೆ. ಸರಿಸುಮಾರು 6000 ಬಸ್​ಗಳು ಇಂದು ಸಂಜೆಯಿಂದ ಬೆಂಗಳೂರು ತೊರೆದಿವೆ ಎಂದು ಖಾಸಗಿ ಬಸ್ ಏಜೆಂಟರೊಬ್ಬರು ಮಾಹಿತಿ ನೀಡಿದರು.

ನಾಯಂಡಹಳ್ಳಿಯ ಸ್ಯಾಟಲೈಟ್ ಬಸ್​ ನಿಲ್ದಾಣದಲ್ಲಿ ಕಾಸರಗೋಡು ನಗರಕ್ಕೆ ಹೋಗುವ ಬಸ್​ ಇನ್ನೂ ಬಂದಿರದ ಕಾರಣ ಪ್ರಯಾಣಿಕರು ಆತಂಕದಲ್ಲಿದ್ದರು. ಈ ಬಸ್ 8 ಗಂಟೆಗೆ ಬರಬೇಕಿತ್ತು. ಲಾಕ್​ಡೌನ್​ಗೆ 10 ನಿಮಿಷ ಬಾಕಿಯಿರುವಂತೆಯೇ ಮೆಜೆಸ್ಟಿಕ್ ಬಸ್​ ನಿಲ್ದಾಣದಿಂದ ಕೆಎಸ್​ಆರ್​ಟಿಸಿಯ ಬಹುತೇಕ ಬಸ್​ಗಳು ಹೊರಟವು. ನಿಲ್ದಾಣದಲ್ಲಿ ಜನದಟ್ಟಣೆ ಒಮ್ಮೆಲೆ ಕಡಿಮೆಯಾದಂತೆ ಭಾಸವಾಯಿತು.

ಬಸ್​ ಟಿಕೆಟ್ ಸಿಗದ ಕೆಲವರು ರೈಲು ಹಿಡಿದು ಊರಿಗೆ ಹೋಗಲು ಧಾವಿಸಿದರು. ಆದರೆ ಅಲ್ಲಿಯೂ ಅವಕಾಶ ಸಿಗಲಿಲ್ಲ. ಹೀಗಾಗಿ ರೈಲು ನಿಲ್ದಾಣದಲ್ಲಿಯೇ ಮಲಗಿದ್ದು, ಬೆಳಿಗ್ಗೆ ಟಿಕೆಟ್ ಪಡೆದು ಊರುಗಳಿಗೆ ತೆರಳು ನಿರ್ಧರಿಸಿ ಅಲ್ಲಿಯೇ ಮಲಗಿದ್ದಾರೆ. ಏನಾದರೂ ಆಗಲಿ, ಲಾಕ್​ಡೌನ್ ವೇಳೆ ಬೆಂಗಳೂರಿನಲ್ಲಿ ಇರುವುದು ಬೇಡ. ನಮ್ಮ ಊರುಗಳಿಗೆ ಹೋಗುವುದು ಒಳ್ಳೆಯದು ಎಂಬ ನಿರ್ಧಾರಕ್ಕೆ ವಲಸಿಗರು ಬಂದಂತೆ ಇದೆ.

(Thousands of KSRTC Private bus left Bengaluru lockdown began state)

ಇದನ್ನೂ ಓದಿ: 14 ದಿನಗಳ ಕೊರೊನಾ ಕರ್ಫ್ಯೂ; ಬೆಂಗಳೂರಿಗೆ ವಿದಾಯ ಹೇಳಿ ತಮ್ಮ ಗೂಡು ಸೇರುತ್ತಿರುವ ಜನ

ಇದನ್ನೂ ಓದಿ: ಬಸ್​ನಲ್ಲಿ ನನಗಾದರೆ ಸೀಟ್ ಕೊಟ್ಟಿದ್ದೀರಿ, ಆದರೆ ನಾನು ಸಾಕಿದ ನಾಯಿಗೆ ಏಕೆ ಸೀಟ್ ಕೊಡುವುದಿಲ್ಲ? ಮಹಿಳೆಯ ಪ್ರಶ್ನೆಗೆ ಕರಗಿತು ಬಸ್ ಸಿಬ್ಬಂದಿ ಕರುಳು

Published On - 9:39 pm, Tue, 27 April 21

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು