AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಡಕಟ್ಟು ಜನಾಂಗದವರಲ್ಲಿ ಲಸಿಕೆ ಕುರಿತಾದ ಭಯ ಹೋಗಲಾಡಿಸಲು ‘ಕೊರೊನಾ ಮಾರಿ’ ಬೀದಿ ನಾಟಕ ಪ್ರದರ್ಶನ

ಕಲಾವಿದ ಬಸವರಾಜ್​ ಅವರು ಜುಲೈ 5ನೇ ತಾರೀಕಿನಂದು ಮೊದಲ ಬಾರಿಗೆ ಬೀದಿ ನಾಟಕವನ್ನು ಪ್ರದರ್ಶಿಸಿದರು. ಚಾಮರಾಜ ನಗರದ ಬುಡಕಟ್ಟು ಜನಾಂಗದವರಿಗೆ ಲಸಿಕೆ ಪ್ರಾಮುಖ್ಯತೆ ಕುರಿತಾಗಿ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶಿಸಲಾಗಿದೆ.

ಬುಡಕಟ್ಟು ಜನಾಂಗದವರಲ್ಲಿ ಲಸಿಕೆ ಕುರಿತಾದ ಭಯ ಹೋಗಲಾಡಿಸಲು ‘ಕೊರೊನಾ ಮಾರಿ’ ಬೀದಿ ನಾಟಕ ಪ್ರದರ್ಶನ
‘ಕೊರೊನಾ ಮಾರಿ’ ಬೀದಿ ನಾಟಕ ಪ್ರದರ್ಶನ
TV9 Web
| Edited By: |

Updated on: Jul 08, 2021 | 4:01 PM

Share

ಚಾಮರಾಜನಗರ: ಜನರಲ್ಲಿ ಲಸಿಕೆ ಕುರಿತಾದ ಭಯವನ್ನು ಹೋಗಲಾಡಿಸಲು ಅದೆಷ್ಟೋ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರ ಕೂಡಾ ಜನರು ಲಸಿಕೆ ಪಡೆಯುವಂತೆ ಸೂಚನೆ ನೀಡುತ್ತಿದೆ. ಆದರೆ ಹಳ್ಳಿಗಳಲ್ಲಿರುವ ಬುಡಕಟ್ಟು ಜನಾಂಗದವರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆಯ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿಲು ಚಾಮರಾಜನಗರದ ಕಲಾವಿದರೊಬ್ಬರು ಕೊರೊನಾ ಮಾರಿ ಎಂಬ ಬೀದಿ ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಕಲಾವಿದ ಬಸವರಾಜ್​ ಅವರು ಜುಲೈ 5ನೇ ತಾರೀಕಿನಂದು ಕರಲಕಟ್ಟೆ ಗ್ರಾಮದಲ್ಲಿ ಮೊದಲ ಬಾರಿಗೆ ಬೀದಿ ನಾಟಕವನ್ನು ಪ್ರದರ್ಶಿಸಿದರು. ಚಾಮರಾಜ ನಗರದ ಬುಡಕಟ್ಟು ಜನಾಂಗದವರಿಗೆ ಲಸಿಕೆ ಪ್ರಾಮುಖ್ಯತೆ ಕುರಿತಾಗಿ ಅರಿವು ಮೂಡಿಸಲು ಬೀದಿ ನಾಟಕ ಪ್ರದರ್ಶಿಸಲಾಗಿದೆ.

ನಾಟಕದಲ್ಲಿ ವೈರಸ್​ ವ್ಯಕ್ತಿಯ ಸುತ್ತ ಸುತ್ತುತ್ತದೆ. ಅದು ವ್ಯಕ್ತಿಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ವನುಷ್ಯನು ದೇವರು ಅಥವಾ ದೆವ್ವದ ಪ್ರಭಾವಕ್ಕೆ ಒಳಗಾಗಿಲ್ಲ. ಆತ ವೈರಸ್​ಗೆ ಒಳಗಾಗಿದ್ದಾನೆ. ಹೀಗಿರುವಾಗ ವೈದ್ಯರಿಂದ ಚಿಕಿತ್ಸೆ ಪಡೆಯಲೇ ಬೇಕು ಎಂದು ವೈದ್ಯರು ಹೇಳುತ್ತಾರೆ. ಹೀಗೆ ಕಥೆಯನ್ನಾಧರಿಸಿ ನಾಟಕ ಪ್ರದರ್ಶನ ನೀಡಲಾಗಿದೆ.

ಬುಡಕಟ್ಟು ಜನಾಗಂದವರು ದೇವರನ್ನು ನಂಬುತ್ತಾರೆ. ಯಾವುದೇ ಆರೋಗ್ಯದ ಅಪಾಯಕ್ಕೆ ದೇವರು ಚಿಕಿತ್ಸೆ ನೀಡಬಲ್ಲ ಎಂಬ ನಂಬಿಕೆ ಅವರದ್ದು. ಹೀಗಿರುವಾಗ ಬುಡಕಟ್ಟು ಜನಾಂಗದವರ ಮನವೊಲಿಸಲು ಜತೆಗೆ ಸಂದೇಶವನ್ನು ಸಾರಲು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು ಎಂದು ಬಸವರಾಜ್​ ಹೇಳಿದ್ದಾರೆ.

ಸೊಲಿಗ ಬುಡಕಟ್ಟು ಭಾಷೆಯಲ್ಲಿದ್ದ ನಾಟಕದಲ್ಲಿ ಒಟ್ಟು 10 ಪಾತ್ರಗಳಿವೆ. ಹಾಡುಗಳನ್ನು ಸಹ ಹೊಂದಿವೆ. ಅವರಿಗೆ ಕೇವಲ ವ್ಯಾಕ್ಸಿನೇಶನ್​ ಬಗ್ಗೆ ಭಯವಿಲ್ಲ. ಆರೋಗ್ಯ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದಾಗ ಆಶ್ಚರ್ಯಚಕಿತರಾಗಿ ಅವರನ್ನು ನೋಡುತ್ತಾರೆ. ಆರೋಗ್ಯ ವ್ಯವಸ್ಥೆಯಲ್ಲಿ ಅವರಿಗೆ ಹೆಚ್ಚಿನ ನಂಬಿಕೆ ಇಲ್ಲ ಎಂದು ಡಾ.ಶ್ರೀನಿವಾಸ್​ ಹೇಳಿದ್ದಾರೆ.

ಇದನ್ನೂ ಓದಿ:

ಮದುವೆ ಸಮಾರಂಭಗಳಲ್ಲಿ 40 ಮಂದಿ ಪಾಲ್ಗೊಳ್ಳಲು ಕರ್ನಾಟಕ ಸರ್ಕಾರ ಅನುಮತಿ

NEKRTC ಇನ್ನು ಮುಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆಗೆ ಮರುನಾಮಕರಣ ಮಾಡಿದ ಲಕ್ಷ್ಮಣ ಸವದಿ

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ