AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನಲ್ಲಿ ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಜಿಂಕೆ; ಸವಾರ ಸ್ಥಳದಲ್ಲೇ ಸಾವು

ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರಿನಲ್ಲಿ ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಜಿಂಕೆ; ಸವಾರ ಸ್ಥಳದಲ್ಲೇ ಸಾವು
ಭಯಗೊಂಡಿರುವ ಜಿಂಕೆ
TV9 Web
| Updated By: sandhya thejappa|

Updated on: Aug 16, 2021 | 8:56 AM

Share

ತುಮಕೂರು: ಜಿಂಕೆಯೊಂದು ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಅಡ್ಡ ಬಂದ ಪರಿಣಾಮ ವಾಹನ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪುರವರ ಹೋಬಳಿಯ ಸಿಂಗರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. 52 ವರ್ಷದ ಗಿರಿಯಪ್ಪ ಎಂಬುವವರು ತನ್ನ ಸ್ವಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಜಿಂಕೆ ಅಡ್ಡ ಬಂದಿದೆ. ಪರಿಣಾಮ ಬೈಕ್ ಸವಾರ ಆಯತಪ್ಪ ಬಿದ್ದು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದು, ಜಿಂಕೆ ಪ್ರಾಣಾಪಯದಿಂದ ಪಾರಾಗಿದೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಸಿದ ಸೇತುವೆ ಮೇಲೆ ಜನರ ಓಡಾಟ ಮಡಿಕೇರಿ: ಮುಕ್ಕೋಡ್ಲು-ಹೆಮ್ನತ್ತಾಳು ಗ್ರಾಮದ ಸಂಪರ್ಕ ಸೇತುವೆ ಕುಸಿದಿದೆ. ಕುಸಿದ ಸೇತುವೆ ಮೇಲೆಯೇ ಜನರು ಜೀವ ಭಯ ಬಿಟ್ಟು ಓಡಾಡುತ್ತಿದ್ದಾರೆ. ಭಾರೀ ಮಳೆಗೆ ಮರದಿ ಧಿಮ್ಮಿ ಅಪ್ಪಳಿಸಿ ಸೇತುವೆ ಕುಸಿದಿತ್ತು. ಸೇತುವೆಗೆ ಎರಡು ಬದಿ ತಡೆಗೋಡೆಗಳು ಇಲ್ಲ. ಸೇತುವೆ ಯಾವುದೇ ಕ್ಷಣದಲ್ಲೂ ಕುಸಿಯುವ ಆತಂಕವಿದೆ. ಮೂರು ವರ್ಷವಾದ್ರೂ ಜಿಲ್ಲಾಡಳಿತ ದುರಸ್ಥಿಗೆ ಮುಂದಾಗಿಲ್ಲ. ಶಾಸಕಿ ವೀಣಾ ಅಚ್ಚಯ್ಯ ಗ್ರಾಮದಲ್ಲೇ ಸೇತುವೆ ಕುಸಿದಿರುವುದು. ಆದರೆ ಜನರ ಸಮಸ್ಯೆ ಪರಿಹಾರಕ್ಕೆ ಜನ ಪ್ರತಿನಿಧಿಗಳು ಮುಂದಾಗಿಲ್ಲ. ಹೀಗಾಗಿ ಜನರು ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ

ಬಾಗಲಕೋಟೆ: ರೈತರಲ್ಲಿ ಆತಂಕ ಸೃಷ್ಟಿಸಿದ ಮೋಡ ಕವಿದ ವಾತಾವರಣ; ಈರುಳ್ಳಿ ಬೆಳೆಗೆ ಕೊಳೆ ರೋಗದ ಭೀತಿ

Health Tips: ಮೂಳೆಗಳು ಸದಾ ಗಟ್ಟಿಯಾಗಿರಲು ಈ ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ

(bike rider has died on the spot in a deer disturbance to two wheeler at Tumkur)