AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗೆ ಕೈ ಬೀಸಿ ಕರೆಯುತ್ತಿರೋ ಪ್ರಕೃತಿ ಸೊಬಗು; ನೋಡುಗರ ಮನ ಸೆಳೆಯುತ್ತಿದೆ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆ

ಇತ್ತಿಚೆಗೆ ಮಳೆ ಎಲ್ಲೆಡೆ ದುಮ್ಮಿಕ್ಕಿ ಸುರಿಯುತ್ತಿದೆ. ಈ ಮಳೆಗೆ ಎಲ್ಲಾದರೂ ಪ್ರಯಾಣ ಬೆಳಸಬೇಕು ಅಂದುಕೊಂಡಿದ್ದೀರಾ?. ಹಾಗಾದರೆ ನೀವು ತುಮಕೂರು ತಾಲೂಕಿನ ಪ್ರಸಿದ್ಧ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆಗೆ ಭೇಟಿ ನೀಡಬೇಕು. ಈ ಕುರಿತು ಒಂದು ವರದಿ ಇಲ್ಲಿದೆ.

ಮಳೆಗೆ ಕೈ ಬೀಸಿ ಕರೆಯುತ್ತಿರೋ ಪ್ರಕೃತಿ ಸೊಬಗು; ನೋಡುಗರ ಮನ ಸೆಳೆಯುತ್ತಿದೆ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆ
ದೇವರಾಯನದುರ್ಗ ಬೆಟ್ಟ, ನಾಮದಚಿಲುಮೆ
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ | Edited By: ಕಿರಣ್ ಹನುಮಂತ್​ ಮಾದಾರ್|

Updated on: Jun 23, 2024 | 4:34 PM

Share

ತುಮಕೂರು, ಜೂ.23: ಇತ್ತೀಚೆಗೆ ಕೆಲವೆಡೆ ಭರ್ಜರಿ ಮಳೆ ಆಗಿದ್ದು, ಹಚ್ಚ ಹಸಿರಿನಿಂದ ಪ್ರಕೃತಿ ಕಂಗೊಳಿಸುತ್ತಿದೆ. ಅದರಂತೆ  ತುಮಕೂರು(Tumakur) ತಾಲೂಕಿನ ಪ್ರಸಿದ್ಧ ದೇವರಾಯನದುರ್ಗ ಬೆಟ್ಟ ಹಾಗೂ ನಾಮದಚಿಲುಮೆಯ ಪ್ರಕೃತಿ ಸೊಬಗು ಕೈ ಬೀಸಿ ಕರೆಯುತ್ತಿದೆ. ಮಳೆ ಸುರಿದಿದ್ದರಿಂದ ಪ್ರವಾಸಿ ತಾಣ(Tourist spot)ಗಳ ಅಂದ ಮತ್ತಷ್ಟು ಹೆಚ್ಚಾಗಿದ್ದು, ನೋಡುಗರ ಮನಸೆಳೆಯುತ್ತಿವೆ. ಇನ್ನು ಬೆಂಗಳೂರುನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿರುವ ತುಮಕೂರಿನ ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯಂತೂ ಮಳೆಗೆ ಹಸಿರುನಿಂದ‌ ಕಂಗೋಳಿಸುತ್ತಿದ್ದು, ಪ್ರವಾಸಿಗರ ಮನ ಸೆಳೆಯುತ್ತಿದೆ.

ಇನ್ನು ನಾಮದಚಿಲುಮೆಯಲ್ಲಿ ಜಿಂಕೆವನ ಇದ್ದು, ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಇಲ್ಲಿಗೆ ಬಂದು ಆರಾಮವಾಗಿ ವಿಹಾರ ಮಾಡಬಹುದು. ಬೆಳ್ಳಂಬೆಳಿಗ್ಗೆ ಅಂತೂ ಬಂದರೆ ಕಣ್ ಮುಂದೆಯೆ ಮೋಡಗಳು ಪಾಸ್ ಆಗುತ್ತವೆ. ಕಾಡು ಪ್ರಾಣಿಗಳ ದರ್ಶನ, ಚಿಕ್ಕ ಮಕ್ಕಳಿಗೆ ಹೊರಸಂಚಾರ ಆಟವಾಡಲು ಕೂಡ ಯೋಗ್ಯವಾದ ಸ್ಥಳವಿದ್ದು, ವಿಕೇಂಡ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲಾಯಾದ್ಯಂತ ಭಾರಿ ಮಳೆ; ಜಲಪಾತಗಳಿಗೆ ಜೀವ ಕಳೆ, ಜನರ ಸೆಳೆಯುತ್ತಿರುವ ಪ್ರವಾಸಿ ತಾಣಗಳು

ಬೆಂಗಳೂರು, ತುಮಕೂರು ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಂದ ಕಾಲೇಜು ವಿದ್ಯಾರ್ಥಿಗಳು, ಜೋಡಿಗಳು ಒಮ್ಮೆ ಕಣ್ ಹಾಯಿಸುತ್ತಿದ್ದಾರೆ. ಇನ್ನು ದೇವರಾಯನದುರ್ಗ ಬೆಟ್ಟ ಕೂಡ ಚಿಕ್ಕಮಗಳೂರು,‌ ಮಲೆನಾಡಿನಂತೆ ಭಾಸವಾಗುತ್ತಿದ್ದು, ಆಯಾಸ ಕಳೆಯಲು ಉತ್ತಮ ಸ್ಥಳವಾಗಿದೆ. ಒಟ್ಟಾರೆ ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರವಿದ್ದು, ವಿಕೇಂಡ್ ನಲ್ಲಿ ಬರುವವರಿಗೆ ತೀರಾ ಹತ್ತಿರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Mahesha E
Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?