AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖರೀದಿಸಿದ 6 ತಿಂಗಳಲ್ಲಿ ಮೂಲೆ ಸೇರಿದ ಜೆಸಿಬಿಗಳು; ತುಮಕೂರಿನಲ್ಲಿ ಕಂಪನಿ ವಿರುದ್ಧ ದೂರು ದಾಖಲು

ರೈತರು ಹೊಸ ಜೆಸಿಬಿ ಖರೀದಿ ಮಾಡಿದ ಖುಷಿಯಲ್ಲಿದ್ದರು. ದಿನಕ್ಕೆ 10 ರಿಂದ 15 ಸಾವಿರ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಹೊಸ ಜೆಸಿಬಿ ಖರೀಸಿದ ಆರೇ ತಿಂಗಳಿಗೆ ಕೆಟ್ಟು ನಿಂತಿವೆ.

ಖರೀದಿಸಿದ 6 ತಿಂಗಳಲ್ಲಿ ಮೂಲೆ ಸೇರಿದ ಜೆಸಿಬಿಗಳು; ತುಮಕೂರಿನಲ್ಲಿ ಕಂಪನಿ ವಿರುದ್ಧ ದೂರು ದಾಖಲು
ಕಂಪನಿಯಿಂದ ರೈತ ಜೆಸಿಬಿ ಖರೀದಿಸಿದ್ದರು.
TV9 Web
| Edited By: sandhya thejappa|

Updated on:May 25, 2022 | 2:40 PM

Share

ತುಮಕೂರು: ಬೆಂಗಳೂರಿನ ಮಾಕಳಿ ಬಳಿಯಿರುವ ಜೆಸಿಬಿ ಕಂಪನಿಯೊಂದು (JCB Company) ಕಳಪೆ ಗುಣಮಟ್ಟದ ಜೆಸಿಬಿ ನೀಡಿದೆ ಎಂದು ಆರೋಪಿಸಿ ರೈತರು (Farmers) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜೆಸಿಬಿಗಳು ಹಾಳಾಗಿರುವ ಬಗ್ಗೆ ಆರೋಪಿಸಿರುವ ರೈತರು, ಜೆಸಿಬಿ ಮೇಲೆ ಸಗಣಿ ಎರಚಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ತುಮಕೂರು ತಾಲೂಕಿನ ಹೆಬ್ಬೂರು ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಜಮೀನುಗಳ ಮೇಲೆ ಸಾಲ ಪಡೆದು ರೈತರು 35 ಲಕ್ಷದ 20 ಕ್ಕೂ ಹೆಚ್ಚು ಜೆಸಿಬಿಗಳನ್ನ ಖರೀದಿ ಮಾಡಿದ್ದರು. ಆದರೆ ಖರೀದಿಸಿದ ಆರು ತಿಂಗಳಲ್ಲಿ ಜೆಸಿಬಿಗಳು ಮೂಲೆ ಸೇರಿವೆ.

ರೈತರು ಹೊಸ ಜೆಸಿಬಿ ಖರೀದಿ ಮಾಡಿದ ಖುಷಿಯಲ್ಲಿದ್ದರು. ದಿನಕ್ಕೆ 10 ರಿಂದ 15 ಸಾವಿರ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಹೊಸ ಜೆಸಿಬಿ ಖರೀಸಿದ ಆರೇ ತಿಂಗಳಿಗೆ ಕೆಟ್ಟು ನಿಂತಿವೆ. ಈ ಬಗ್ಗೆ ಜೆಸಿಬಿ ಕಂಪನಿಗೆ ದೂರು ನೀಡಿದರೆ, ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ರೈತರು ತಿಳಿಸಿದ್ದಾರೆ. ಎರಡು ಮೂರು ಬಾರಿ ಜೆಸಿಬಿ ಕಂಪನಿ ಸಿಬ್ಬಂದಿ ಸರ್ವಿಸ್ ಮಾಡಿಕೊಡುವುದಾಗಿ ಬಂದಿದ್ದರಂತೆ. ಈ ವೇಳೆ ಒಮ್ಮೆ ಜೆಸಿಬಿ ರೆಡಿ ಮಾಡುವುದಕ್ಕೆ 70 ರಿಂದ 80 ಸಾವಿರ ಬಿಲ್ ಹಾಕಿದ್ದರಂತೆ.

ಇದನ್ನೂ ಓದಿ: Bengaluru News: ಶಾಸಕರ ಕಚೇರಿ ಬಳಿ ವೃದ್ಧನ ಹತ್ಯೆ, ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಹಂತಕ!

ಇದನ್ನೂ ಓದಿ
Image
IPL 2022: ಪಂದ್ಯ ಗೆಲ್ಲಿಸಿ ಕ್ಷಮೆಯಾಚಿಸಿದ ಡೇವಿಡ್ ಮಿಲ್ಲರ್
Image
ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ
Image
Video: ದೇಶ, ರಾಜ್ಯ, ಒಕ್ಕೂಟ; ಇಂಗ್ಲೆಂಡ್​ನಲ್ಲಿ ರಾಹುಲ್ ಗಾಂಧಿಗೆ ಅಧಿಕಾರಿಯ ಪಾಠ
Image
8 Years Of Narendra Modi Government: ನವೀಕೃತ ಇಂಧನದಲ್ಲಿ ನರೇಂದ್ರ ಮೋದಿ ಸರ್ಕಾರದ ಎತ್ತರದ ಸಾಧನೆ

ಸರ್ವಿಸ್ ಮಾಡಿಸಿದರೂ ಜೆಸಿಬಿ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ. ಈ ರೀತಿ ಸುಮಾರು 20 ಕ್ಕೂ ಹೆಚ್ಚು ಜೆಸಿಬಿಗಳು ಹಾಳಾಗಿವೆ. ಹೀಗಾಗಿ ರೈತರು ಜೆಸಿಬಿ ನಂಬಿ ನಮ್ಮ‌ ಬದುಕು ಬೀದಿಗೆ ಬಂತು ಅಂತ ಅಳು ತೋಡಿಕೊಂಡಿದ್ದಾರೆ. ನಿಮ್ಮ‌ ಜೆಸಿಬಿ ಪಡೆದು ನಮ್ಮ‌ ಹಣ ವಾಪಸ್ ಕೊಡಿ ಅಂತ ಪಟ್ಟು ಹಿಡಿದಿರುವ ರೈತರು, ಜೆಸಿಬಿ ಮೇಲೆ‌ ಸಗಣಿ ಎರಚಿ ಜೆಸಿಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Wed, 25 May 22

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು