AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖರೀದಿಸಿದ 6 ತಿಂಗಳಲ್ಲಿ ಮೂಲೆ ಸೇರಿದ ಜೆಸಿಬಿಗಳು; ತುಮಕೂರಿನಲ್ಲಿ ಕಂಪನಿ ವಿರುದ್ಧ ದೂರು ದಾಖಲು

ರೈತರು ಹೊಸ ಜೆಸಿಬಿ ಖರೀದಿ ಮಾಡಿದ ಖುಷಿಯಲ್ಲಿದ್ದರು. ದಿನಕ್ಕೆ 10 ರಿಂದ 15 ಸಾವಿರ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಹೊಸ ಜೆಸಿಬಿ ಖರೀಸಿದ ಆರೇ ತಿಂಗಳಿಗೆ ಕೆಟ್ಟು ನಿಂತಿವೆ.

ಖರೀದಿಸಿದ 6 ತಿಂಗಳಲ್ಲಿ ಮೂಲೆ ಸೇರಿದ ಜೆಸಿಬಿಗಳು; ತುಮಕೂರಿನಲ್ಲಿ ಕಂಪನಿ ವಿರುದ್ಧ ದೂರು ದಾಖಲು
ಕಂಪನಿಯಿಂದ ರೈತ ಜೆಸಿಬಿ ಖರೀದಿಸಿದ್ದರು.
TV9 Web
| Updated By: sandhya thejappa|

Updated on:May 25, 2022 | 2:40 PM

Share

ತುಮಕೂರು: ಬೆಂಗಳೂರಿನ ಮಾಕಳಿ ಬಳಿಯಿರುವ ಜೆಸಿಬಿ ಕಂಪನಿಯೊಂದು (JCB Company) ಕಳಪೆ ಗುಣಮಟ್ಟದ ಜೆಸಿಬಿ ನೀಡಿದೆ ಎಂದು ಆರೋಪಿಸಿ ರೈತರು (Farmers) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜೆಸಿಬಿಗಳು ಹಾಳಾಗಿರುವ ಬಗ್ಗೆ ಆರೋಪಿಸಿರುವ ರೈತರು, ಜೆಸಿಬಿ ಮೇಲೆ ಸಗಣಿ ಎರಚಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ತುಮಕೂರು ತಾಲೂಕಿನ ಹೆಬ್ಬೂರು ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಜಮೀನುಗಳ ಮೇಲೆ ಸಾಲ ಪಡೆದು ರೈತರು 35 ಲಕ್ಷದ 20 ಕ್ಕೂ ಹೆಚ್ಚು ಜೆಸಿಬಿಗಳನ್ನ ಖರೀದಿ ಮಾಡಿದ್ದರು. ಆದರೆ ಖರೀದಿಸಿದ ಆರು ತಿಂಗಳಲ್ಲಿ ಜೆಸಿಬಿಗಳು ಮೂಲೆ ಸೇರಿವೆ.

ರೈತರು ಹೊಸ ಜೆಸಿಬಿ ಖರೀದಿ ಮಾಡಿದ ಖುಷಿಯಲ್ಲಿದ್ದರು. ದಿನಕ್ಕೆ 10 ರಿಂದ 15 ಸಾವಿರ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಹೊಸ ಜೆಸಿಬಿ ಖರೀಸಿದ ಆರೇ ತಿಂಗಳಿಗೆ ಕೆಟ್ಟು ನಿಂತಿವೆ. ಈ ಬಗ್ಗೆ ಜೆಸಿಬಿ ಕಂಪನಿಗೆ ದೂರು ನೀಡಿದರೆ, ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ರೈತರು ತಿಳಿಸಿದ್ದಾರೆ. ಎರಡು ಮೂರು ಬಾರಿ ಜೆಸಿಬಿ ಕಂಪನಿ ಸಿಬ್ಬಂದಿ ಸರ್ವಿಸ್ ಮಾಡಿಕೊಡುವುದಾಗಿ ಬಂದಿದ್ದರಂತೆ. ಈ ವೇಳೆ ಒಮ್ಮೆ ಜೆಸಿಬಿ ರೆಡಿ ಮಾಡುವುದಕ್ಕೆ 70 ರಿಂದ 80 ಸಾವಿರ ಬಿಲ್ ಹಾಕಿದ್ದರಂತೆ.

ಇದನ್ನೂ ಓದಿ: Bengaluru News: ಶಾಸಕರ ಕಚೇರಿ ಬಳಿ ವೃದ್ಧನ ಹತ್ಯೆ, ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಹಂತಕ!

ಇದನ್ನೂ ಓದಿ
Image
IPL 2022: ಪಂದ್ಯ ಗೆಲ್ಲಿಸಿ ಕ್ಷಮೆಯಾಚಿಸಿದ ಡೇವಿಡ್ ಮಿಲ್ಲರ್
Image
ಕಾಸ್ಟಿಂಗ್​ ಕೌಚ್​ ವಿಚಾರದಲ್ಲಿ ಸ್ಯಾಂಡಲ್​​ವುಡ್​ನ​ ಎಳೆದು ತಂದ ಬಗ್ಗೆ ಸ್ಪಷ್ಟನೆ ನೀಡಿದ ತೆಲುಗು ನಿರ್ದೇಶಕ
Image
Video: ದೇಶ, ರಾಜ್ಯ, ಒಕ್ಕೂಟ; ಇಂಗ್ಲೆಂಡ್​ನಲ್ಲಿ ರಾಹುಲ್ ಗಾಂಧಿಗೆ ಅಧಿಕಾರಿಯ ಪಾಠ
Image
8 Years Of Narendra Modi Government: ನವೀಕೃತ ಇಂಧನದಲ್ಲಿ ನರೇಂದ್ರ ಮೋದಿ ಸರ್ಕಾರದ ಎತ್ತರದ ಸಾಧನೆ

ಸರ್ವಿಸ್ ಮಾಡಿಸಿದರೂ ಜೆಸಿಬಿ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ. ಈ ರೀತಿ ಸುಮಾರು 20 ಕ್ಕೂ ಹೆಚ್ಚು ಜೆಸಿಬಿಗಳು ಹಾಳಾಗಿವೆ. ಹೀಗಾಗಿ ರೈತರು ಜೆಸಿಬಿ ನಂಬಿ ನಮ್ಮ‌ ಬದುಕು ಬೀದಿಗೆ ಬಂತು ಅಂತ ಅಳು ತೋಡಿಕೊಂಡಿದ್ದಾರೆ. ನಿಮ್ಮ‌ ಜೆಸಿಬಿ ಪಡೆದು ನಮ್ಮ‌ ಹಣ ವಾಪಸ್ ಕೊಡಿ ಅಂತ ಪಟ್ಟು ಹಿಡಿದಿರುವ ರೈತರು, ಜೆಸಿಬಿ ಮೇಲೆ‌ ಸಗಣಿ ಎರಚಿ ಜೆಸಿಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Wed, 25 May 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ