AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು ಹೆದ್ದಾರಿ 48 ರಲ್ಲಿ ತಡರಾತ್ರಿ ಆರ್​​ಟಿಒ ಕಾರ್ಯಚರಣೆ: ಗುಳೆ ಬರುತ್ತಿದ್ದ ಪ್ರಯಾಣಿಕರು ಕಣ್ಣೀರು

ಆರ್ ಟಿಓ ಇನ್ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ತುಮಕೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಉತ್ತರ ಕರ್ನಾಟಕ, ರಾಯಚೂರು, ಸಿಂಧನೂರು ಭಾಗದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ರೂಸರ್ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಒಂದು ಕ್ರೂಸರ್ ನಲ್ಲಿ 11 ಜನ ಪ್ರಯಾಣಿಸುವ ಜಾಗದಲ್ಲಿ 20 ರಿಂದ 25 ಜನ ಪ್ರಯಾಣ ಮಾಡುತ್ತಿದ್ದರು.

ತುಮಕೂರು ಹೆದ್ದಾರಿ 48 ರಲ್ಲಿ ತಡರಾತ್ರಿ ಆರ್​​ಟಿಒ ಕಾರ್ಯಚರಣೆ: ಗುಳೆ ಬರುತ್ತಿದ್ದ ಪ್ರಯಾಣಿಕರು ಕಣ್ಣೀರು
ತುಮಕೂರು ಹೆದ್ದಾರಿ 48 ರಲ್ಲಿ ತಡರಾತ್ರಿ ಆರ್​​ಟಿಒ ಕಾರ್ಯಚರಣೆ: ಗುಳೆ ಬರುತ್ತಿದ್ದ ಪ್ರಯಾಣಿಕರು ಕಣ್ಣೀರು
TV9 Web
| Updated By: ಸಾಧು ಶ್ರೀನಾಥ್​|

Updated on: Nov 10, 2022 | 3:53 PM

Share

ತುಮಕೂರು: ರಾಷ್ಟ್ರೀಯ ಹೆದ್ದಾರಿ 48 ರಲ್ಲಿ (NH 48) ಕ್ರೂಸರ್ ವಾಹನಗಳ ಕಾರುಬಾರು ಇನ್ನೂ ನಿಂತಿಲ್ಲ. ಆದರೆ ಆರ್ ಟಿಓ ಅಧಿಕಾರಿಗಳು (RTO Raid) ತಡರಾತ್ರಿ ಕ್ರೂಸರ್ ವಾಹನದ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಅನಧಿಕೃತವಾಗಿ ಹೆಚ್ಚು ಪ್ರಯಾಣಿಕರನ್ನ ಸಾಗಿಸುತ್ತಿದ್ದ ಕ್ರೂಸರ್ ವಾಹನಗಳ ವಿರುದ್ಧ ತಡರಾತ್ರಿ RTO ಅಧಿಕಾರಿಗಳಿಂದ ತುಮಕೂರು (Tumkur) ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭರ್ಜರಿ ಕಾರ್ಯಚರಣೆ ನಡೆದಿದೆ. ಕಾರ್ಯಾಚರಣೆ ನಡೆಸಿ ಮೂರು ಕ್ರೂಸರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್ ಟಿಓ ಇನ್ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ತುಮಕೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಉತ್ತರ ಕರ್ನಾಟಕ, ರಾಯಚೂರು, ಸಿಂಧನೂರು ಭಾಗದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ರೂಸರ್ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಒಂದು ಕ್ರೂಸರ್ ನಲ್ಲಿ 11 ಜನ ಪ್ರಯಾಣಿಸುವ ಜಾಗದಲ್ಲಿ 20 ರಿಂದ 25 ಜನ ಪ್ರಯಾಣ ಮಾಡುತ್ತಿದ್ದರು.

ಜೀವನ ಮಾಡೋನಾ ಅಂತ… ಗುಳೆ ಬರುತ್ತಿದ್ದ ಪ್ರಯಾಣಿಕರು ಕಣ್ಣೀರು:

ಪ್ರಯಾಣಿಕರಲ್ಲದೇ ಅನಧಿಕೃತವಾಗಿ ಲಗೇಜ್ ಗಳ ಸಾಗಾಟವೂ ನಡೆದಿತ್ತು. ವಾಹನಗಳ ಮೇಲೆ ದಾಳಿ ನಡೆಸಿ ಮೂರು ಕ್ರೂಸರ್ ವಾಹನಗಳನ್ನ ಆರ್ ಟಿಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರ್ ಟಿಓ ಅಧಿಕಾರಿಗಳ ಕಾರ್ಯಾಚರಣೆ ವೇಳೆ ತೊಂದರೆಗೊಳಗಾದ ಕ್ರೂಸರ್ ನಲ್ಲಿದ್ದ ಪ್ರಯಾಣಿಕರು ತಮ್ಮ ಅಳಲು ತೊಡಿಕೊಂಡರು.

 Also Read: 3 ವರ್ಷ ಕಳೆಯುತ್ತ ಬಂದರೂ ಪೂರ್ಣಗೊಳ್ಳದ ರಾಮನಗರ ಹೈಟಕ್ ಜಿಲ್ಲಾಸ್ಪತ್ರೆ ಕಾಮಗಾರಿ; ರೋಗಿಗಳ ಪರದಾಟ

ನಾವು ಕೂಲಿ ಮಾಡಿ ಬದುಕುವ ಜನ. ನಮ್ಮ ಕೈಯಲ್ಲಿ ದುಪ್ಪಟ್ಟು ಹಣ ಕೊಡೋಕೆ ಆಗಲ್ಲ‌. ಬಸ್ ನವರು ಲಗೇಜ್ ಗೂ ಜಾರ್ಜ್ ಕೇಳ್ತಾರೆ. ನಾವು ಎಲ್ಲಿಂದ ತರೋದು? ನಮಗೆ ಇರೋಕೆ ಮನೆಯಿಲ್ಲ, ಕೂಲಿ ಮಾಡ್ಕೊಂಡು ಜೀವನ ಮಾಡೋನಾ ಅಂತ ಬೆಂಗಳೂರು ಕಡೆಗೆ ಹೋಗ್ತಿದೀವಿ. ಸರ್ಕಾರ ನಮಗೆ ಸರಿಯಾಗಿ ಸವಲತ್ತು ಕೊಟ್ಟಿದ್ದರೆ… ನಮ್ಮ ಊರು ಬಿಟ್ಟು ಬೆಂಗಳೂರು ಕಡೆಗೆ ಯಾಕೆ ಹೋಗ್ತಿದ್ದಿವಿ, ನೀವೇ ಹೇಳಿ ಸರ್‌ ಎಂದು ನೂರಾರು ಪ್ರಯಾಣಿಕರು ಅಳಲು ತೋಡಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ