AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Impact: ವಿಪ್ರೊ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭ

ವಿಪ್ರೊ ಮಾಡಿಕೊಂಡಿದ್ದ ರಾಜಲಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕಿತ್ತು. ಈ ಬಗ್ಗೆ Tv9 ವರದಿ ಮಾಡಿದ ಬಳಿಕ ಸೈಲೆಂಟ್ ಆಗಿದ್ದ ಬುಲ್ಡೋಜರ್​ಗಳು ಮತ್ತೆ ಘರ್ಜಿಸಲು ಆರಂಭಿಸಿದೆ.

Tv9 Impact: ವಿಪ್ರೊ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭ
ವಿಪ್ರೋ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ
TV9 Web
| Edited By: |

Updated on:Sep 20, 2022 | 3:01 PM

Share

ಬೆಂಗಳೂರು: ಮಹಾ ಮಳೆಯ ನಂತರ ಸಂಭವಿಸಿದ ಜಲಪ್ರವಾಹವ ಮುಂದೆ ಸಂಭವಿಸಬಾರದು ಎಂಬ ಕಾರಣಕ್ಕೆ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ (BBMP) ಮುಂದಾಗಿತ್ತು. ಅದರಂತೆ ತೆರವು ಕಾರ್ಯಾಚರಣೆ ಆರಂಭಗೊಂಡು ಕೆಲವು ದಿನಗಳವರೆಗೆ ನಗರದಲ್ಲಿ ಬುಲ್ಡೋಜರ್​ಗಳು ಘರ್ಷಿಸಿತ್ತು. ಆದರೆ ದೈತ್ಯ ಕಂಪನಿ ವಿಪ್ರೋ ಮಾಡಿಕೊಂಡಿದ್ದ ಒತ್ತವರಿಯನ್ನು ತೆರವುಗೊಳಿಸುವ ಬದಲು ಅದರ ಮುಂದೆ ಮಂಡಿಯೂರಿತ್ತು. ಅದರಂತೆ ಆರಂಭವಾಗಿದ್ದ ತೆರವು ಕಾರ್ಯಾಚರಣೆ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಸ್ಥಗತಿಗೊಂಡಿತ್ತು. ಈ ಬಗ್ಗೆ ವರದಿ ಮಾಡಿದ ಟಿವಿ9 ಮತ್ತೆ ಪಾಲಿಕೆಯನ್ನು ಎಚ್ಚರಿಸುವ ಕಾರ್ಯ ಮಾಡಿತು. ಅದರಂತೆ ಮತ್ತೆ ಬುಲ್ಡೋಜರ್​ಗಳು ಸ್ಥಳದಲ್ಲಿ ಘರ್ಷಿಸಲು ಆರಂಭಿಸಿವೆ.

ವಿಪ್ರೋ ಕಂಪನಿಯು ಒತ್ತುವರಿ ಮಾಡಿಕೊಂಡ ಸ್ಥಳವನ್ನು ತೆರವುಗೊಳಿಸಲು ಪಾಲಿಕೆ ಹಿಂದೇಟು ಹಾಕಿತ್ತು. ಆದರೆ ವರದಿ ಬಳಿಕ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ನಗರದ ಸರ್ಜಾಪುರ ರಸ್ತೆಯಲ್ಲಿರುವ ವಿಪ್ರೋ ಹಾಗೂ ಸಲಾರ್ ಪುರಿಯಾ ಅಪಾರ್ಟ್‌ಮೆಂಟ್ ಮಾಡಿಕೊಂಡಿದ್ದ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ವಿಪ್ರೋ ಕಂಪನಿಯಿಂದ 2.4 ಮೀ. ಅಗಲ ಮತ್ತು 300 ಮೀ. ಒತ್ತುವರಿ ಆಗಿತ್ತು.

ಸ್ಥಳಕ್ಕೆ AEE ಮಾರ್ಕಾಂಡೇಯ ಭೇಟಿ

ವಿಪ್ರೋ ಕಂಪನಿಯಿಂದ ರಾಜಕಾಲುವೆ ಒತ್ತುವರಿ ತೆರವು ಹಿನ್ನೆಲೆ ಸ್ಥಳಕ್ಕೆ ಮಹದೇವಪುರ ವಲಯದ ಎಇಇ ಮಾರ್ಕಾಂಡೇಯ ಅವರು ಭೇಟಿ ನೀಡಿದರು. ಈ ವೇಳೆ ಹೇಳಿಕೆ ನೀಡಿದ ಅವರು, ನಿನ್ನೆ ಮೆಸ್ ಇದ್ದ ಕಾರಣ ಕಾಂಪೌಂಡ್ ತೆರವು ಆಗಲಿಲ್ಲ. ಇಂದು ವಿಪ್ರೋದವರೇ ಒತ್ತುವರಿ ತೆರವು ಮಾಡಿದ್ದಾರೆ. ಸರ್ವೆ ಮೂಲಕ ಸುಮಾರು 8 ಅಡಿಯಷ್ಟು ಒತ್ತುವರಿ ಮಾಡಿರುವುದು ಪತ್ತೆಯಾಗಿತ್ತು. ನಮ್ಮ ವಿಲೇಜ್ ಮ್ಯಾಪ್ ಪ್ರಕಾರ ಸರ್ವೇಯರ್ ಮಾರ್ಕ್ ಮಾಡಿಕೊಟ್ಟಿದ್ದಾರೆ. ಅದರ ಪ್ರಕಾರ ಒತ್ತುವರಿ ತೆರವು ಮಾಡುತ್ತೇವೆ. ಕಸವನಹಳ್ಳಿಯಲ್ಲಿ ಶೆಡ್ ಡೆಮಾಲಿಶನ್ ಇತ್ತು. ಹೀಗಾಗಿ ಇಲ್ಲಿಗೆ ಬರುವುದು ತಡವಾಯಿತು ಎಂದರು.

ಸೋಮವಾರ ಆಗಿದ್ದೇನು?

ವಿಪ್ರೋ ಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮಾತ್ರ ಆಗಮಿಸಿರುವ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿತ್ತು. ಇಷ್ಟೂ ದಿನ ಯಾವುದೇ ತೆರವು ಕಾರ್ಯಾಚರಣೆಗೆ ತಹಶೀಲ್ದಾರ್ ಆಗಮಿಸಿರಲಿಲ್ಲ. ಸೋಮವಾರ (ಸೆ.19) ಬೆಳಗ್ಗೆ 11:30ಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾರ್ಕಿಂಗ್ ಪರಿಶೀಲನೆ ಮಾಡಿದ್ದು, 12 ಗಂಟೆಗೆ ಬುಲ್ಡೋಜರ್ ಬಳಸಿ ವಿಪ್ರೋ ಕಂಪೌಂಡ್ ವಾಲ್ ತೆರವಿಗೆ ಮುಂದಾಗಿತ್ತು. ತೆರವು ಕಾರ್ಯಾಚರಣೆ ಶುರುವಾದ ಒಂದು ಗಂಟೆಯಲ್ಲಿ ಸ್ಥಳಕ್ಕೆ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ರೈ ಆಗಮಿಸಿದ್ದು, ನಂತರದ 20 ನಿಮಿಷಕ್ಕೆ ಇಡೀ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತವಾಗಿತ್ತು. ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ತಹಶೀಲ್ದಾರ್ ಗರಂ ಆಗಿದ್ದರು.

ಒತ್ತುವರಿ ತೆರವು ಆದೇಶ, ಬಾಗಮಾನೆ ಟೆಕ್ ಪಾರ್ಕ್ ಮತ್ತು ಪೂರ್ವಾ ಪಾರ್ಕಿಡ್ಜ್ ಸಂಕಷ್ಟ

ಒತ್ತುವರಿ ತೆರವು ಮಾಡುವಂತೆ ಬೆಂಗಳೂರು ತಹಶೀಲ್ದಾರ್ ಕೋರ್ಟ್ ಆದೇಶ ಮಾಡಿರುವ ಹಿನ್ನೆಲೆ ಬಾಗಮಾನೆ ಟೆಕ್ ಪಾರ್ಕ್ ಮತ್ತು ಪೂರ್ವಾ ಪಾರ್ಕಿಡ್ಜ್ ಸಂಕಷ್ಟ ಎದುರಾಗಿದೆ. ಸರ್ವೇ ನಂಬರ್ 35/1, 35/2, 35/3, 38/2, ಮತ್ತು ಸರ್ವೇ ನಂಬರ್ 85 ರಲ್ಲಿನ ಒತ್ತುವರಿ ತೆರವು ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿದ್ದು, ಒತ್ತುವರಿದಾರರೆ ತಮ್ಮ ಸ್ವಂತ ಖರ್ಚಿನಲ್ಲೇ ತೆರವು ಮಾಡುವಂತೆ ಸೂಚನೆ ನೀಡಿದೆ. ಇಲ್ಲವಾದಲ್ಲಿ ಬಿಬಿಎಂಪಿ ಸರ್ವೆಯರ್ ನೆರವಿನಿಂದ ತೆರವುಗೊಳಿಸಬೇಕು, ಅದಕ್ಕಾಗುವ ಖರ್ಚನ್ನು ಕೂಡ ಒತ್ತುವರಿದಾರರೇ ಭರಿಸಬೇಕು.  ಒಂದೊಮ್ಮೆ ಒತ್ತುವರಿದಾರರು ತೆರವು ಮಾಡದಿದ್ದರೆ ಸರ್ಕಾರ ತೆರವು ಕಾರ್ಯಾಚರಣೆಗೆ ಮುಂದಾಗಬೇಕು. ಅಲ್ಲದೆ ಒತ್ತುವರಿ ಮಾಡಿಕೊಂಡವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಹೇಳಿದೆ. ಅದರಂತೆ ಬಾಗಮಾನೆ ಮತ್ತು ಪೂರ್ವ ಪ್ರಾಕಿಡ್ಜ್​ಗೆ ಸಂಕಷ್ಟ ಎದುರಾಗಿದೆ. ಒತ್ತುವರಿ ತೆರವು ಮಾಡದಂತೆ ಬಿಲ್ಡರ್​ಗಳು ಕೋರ್ಟ್ ಮೊರೆ ಹೋಗಿದ್ದರು.

ಮತ್ತಷ್ಟು ಬೆಂಗಳೂರು ನಗರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Tue, 20 September 22

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ