AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀನುಗಾರಿಕೆ ವಿಚಾರದಲ್ಲಿ ಗಲಾಟೆ; ಮೊಗವೀರ ಹಾಗೂ ಶಿಳ್ಳೆಕ್ಯಾತ ಅಲೆಮಾರಿ ಬೆಸ್ತರ ನಡುವೆ ಮಾರಾಮಾರಿ

ಸಮುದ್ರ ಮತ್ತು ನದಿಯಲ್ಲಿ ಕಸುಬು ಮಾಡುವ ಸಾಹಸಿಗಳ ನಡುವೆ ವೈಷಮ್ಯ ಏರ್ಪಟ್ಟಿದೆ. ಕರಾವಳಿಯ ಮೊಗವೀರ ಮತ್ತು ಮಲೆನಾಡ ಅಲೆಮಾರಿ ಬೆಸ್ತರು ನಡುವೆ ಕಲಹ ನಡೆದಿದೆ. ಮಾತಿಗೆ ಮಾತು ಬೆಳೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಮಗೆ ಕೂಲಿ ಮಾಡಲು ಅವಕಾಶ ಕೊಟ್ಟು ಬದುಕಲು ಬಿಡಿ ಎಂದು ಉಡುಪಿ ಜಿಲ್ಲಾಡಳಿತದ ಮುಂದೆ ಶಿಳ್ಳೆಕ್ಯಾತರು ಬೇಡಿಕೆಯಿಟ್ಟಿದ್ದಾರೆ. ಏನಾಗಿದೆ ಅಂತೀರಾ? ಈ ಸ್ಟೋರಿ ಓದಿ.

ಮೀನುಗಾರಿಕೆ ವಿಚಾರದಲ್ಲಿ ಗಲಾಟೆ; ಮೊಗವೀರ ಹಾಗೂ ಶಿಳ್ಳೆಕ್ಯಾತ ಅಲೆಮಾರಿ ಬೆಸ್ತರ ನಡುವೆ ಮಾರಾಮಾರಿ
ಮೊಗವೀರ ಹಾಗೂ ಶಿಳ್ಳೆಕ್ಯಾತ ಅಲೆಮಾರಿ ಬೆಸ್ತರ ನಡುವೆ ಮಾರಾಮಾರಿ
ಪ್ರಜ್ವಲ್ ಅಮೀನ್​, ಉಡುಪಿ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Jun 20, 2024 | 6:03 PM

Share

ಉಡುಪಿ, ಜೂ.20: ಸ್ಥಳಿಯ ಮೊಗವೀರ(Mogaveera) ಸಮುದಾಯದವರು, ಶಿಳ್ಳೆಕ್ಯಾತ(Sillekyatha)ರ ಅಲೆಮಾರಿ ಜನಾಂಗದ ಜೊತೆ ಕ್ಯಾತೆ ತೆಗೆದು ಜಗಳವಾಡಿದ್ದಾರೆ. ಈ ವೇಳೆ ಅಲೆಮಾರಿಗಳು ಗಾಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ. ಗುಲ್ವಾಡಿ ಹೊಳೆಯಲ್ಲಿ ಕಳೆದ 10 ರಿಂದ 20 ವರ್ಷಗಳಿಂದ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯದ ಐದಾರು ಕುಟುಂಬಗಳು ಮೀನು ಹಿಡಿದು ಜೀವನ ನಡೆಸುತ್ತಿದೆ. ನದಿ ಮತ್ತು ಹೊಳೆಯ ತೀರದಲ್ಲಿ ಸಣ್ಣಪುಟ್ಟ ಬಲೆಗಳನ್ನು ಹಾಕಿ ದಿನಗೂಲಿಯನ್ನು ದುಡಿಯುತ್ತಾರೆ. ಇದೇ ವಿಚಾರಕ್ಕೆ ಸ್ಥಳೀಯ ಮೊಗವೀರ ಹಾಗೂ ಶಿಳ್ಳೆಕ್ಯಾತರ ಸಮುದಾಯದ ನಡುವೆ ಜಗಳ ಶುರುವಾಗಿದೆ.

ಹಲವಾರು ವರ್ಷಗಳಿಂದ ಜಗಳ ಹೊಡೆದಾಟಗಳು ನಡೆಯುತ್ತಾ ಬಂದಿದೆ. ಈವರೆಗೆ ವಿಕೋಪಕ್ಕೆ ಹೋಗಿರಲಿಲ್ಲ. ಆದರೆ, ಕಳೆದ ವಾರ ದೊಡ್ಡ ಮಾರಾ ಮಾರಿಯೇ ನಡೆದುಬಿಟ್ಟಿದೆ. ಸುಮಾರು 25 ಜನ ಗಂಗೊಳ್ಳಿ ಭಾಗದ ಮೀನುಗಾರರು ತೆಪ್ಪಗಳಿಗೆ ದಾಳಿ ಮಾಡಿ, ಮಹಿಳೆಯರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನು ಮುಂದೆ ನದಿಗೆ ಇಳಿಯಬಾರದು, ಕಸುಬು ನಡೆಸಬಾರದು ಎಂದು ತಾಕೀತು ಮಾಡಿದ್ದಾರೆ.

ಇದನ್ನೂ ಓದಿ:ವಾಯುಭಾರ ಕುಸಿತ: 5 ದಿನ ಮೀನುಗಾರಿಕೆಗೆ ತೆರಳದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಸೂಚನೆ

ಅಲೆಮಾರಿ ಸಮುದಾಯ ಜೊತೆ ಬೆಂಬಲಕ್ಕೆ ನಿಂತ ಎಡಪಂಥೀಯ ಸಂಘಟನೆಗಳು

ಹಲ್ಲೆ ನಡೆಸಿದವರು ವಿರುದ್ಧ ಶಿಳ್ಳೆಕ್ಯಾತ ಸಮುದಾಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಅಲೆಮಾರಿ ಸಮುದಾಯ ಜೊತೆ ಎಡಪಂಥೀಯ ಸಂಘಟನೆಗಳು ಬೆಂಬಲವಾಗಿ ನಿಂತಿದೆ. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಅಲೆಮಾರಿ ಸಮುದಾಯಕ್ಕೆ ಶಿಕ್ಷಣ ಮತ್ತು ಆರ್ಥಿಕ ಶಕ್ತಿಯನ್ನು ಸರಕಾರ ನೀಡಬೇಕು ಎಂದು ಒತ್ತಾಯಿಸಿದೆ. ಮಳೆಗಾಲದಲ್ಲಿ ಅಪಾಯದಲ್ಲಿ ಜೀವನ ನಡೆಸುವ ಅಲೆಮಾರಿ ಜನಾಂಗಕ್ಕೆ ಜಿಲ್ಲಾಡಳಿತ ರಕ್ಷಣೆ ಕೊಡಬೇಕು. ಇಡೀ ಜಿಲ್ಲೆಯಲ್ಲಿ ಬೆರಳೆಣಿಕೆಯ ಕುಟುಂಬಗಳು ಮಾತ್ರ ಅಲ್ಲಲ್ಲಿ ತೆಪ್ಪ ಮೀನುಗಾರಿಕೆಯಲ್ಲಿ ತೊಡಗಿರೋದರಿಂದ ಮೊಗವೀರರ ಜೊತೆ ಸಂಧಾನ ನಡೆಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲೂ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ