AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿಗೆ ಬಳಲಿದ್ದ ಗೋಶಾಲೆಯ ಗೋವುಗಳಿವೆ 3 ಸಾವಿರ ಕೆ.ಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟ ಯುವಕರ ತಂಡ

ವಾತಾವರಣದಲ್ಲಿನ ಉಷ್ಣತೆ ಕೇವಲ ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿಗಳನ್ನು ಕೂಡ ಕಾಡುತ್ತಿದೆ. ಅದರಲ್ಲೂ ಕೊಟ್ಟಿಗೆಯಿಂದ ಹೊರಗೆ ತಿರುಗಾಡುವ ಹಸುಗಳು ನೀರಿಗಾಗಿ ಸಂಕಟಪಡುತ್ತಿವೆ. ಗೋಪಾರ್ಟಿ ಹೆಸರಲ್ಲಿ ಗೋ ಸೇವೆ ನಡೆಸುತ್ತಿರುವ ಯುವಕರ ತಂಡವೊಂದು ನೀಲಾವರ ಗೋಶಾಲೆಯ ಬಳಲಿದ ಹಸುಗಳಿಗೆ ಕೆ.ಜಿಗಟ್ಟಲೆ ಕಲ್ಲಂಗಡಿ ಕೊಟ್ಟು, ಸಾರ್ಥಕತೆ ಮೆರೆದಿದ್ದಾರೆ.

ಬಿಸಿಲಿಗೆ ಬಳಲಿದ್ದ ಗೋಶಾಲೆಯ ಗೋವುಗಳಿವೆ 3 ಸಾವಿರ ಕೆ.ಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟ ಯುವಕರ ತಂಡ
ಗೋಶಾಲೆಯ ಗೋವುಗಳಿವೆ 3 ಸಾವಿರ ಕೆ.ಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟ ಯುವಕರ ತಂಡ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 01, 2024 | 7:28 PM

Share

ಉಡುಪಿ, ಮೇ.01: ಅನಾಥ ಹಸುಗಳ ಆಪ್ತರಕ್ಷಕ ಈ ನೀಲಾವರ ಗೋಶಾಲೆ. ಉಡುಪಿ(Udupi) ಜಿಲ್ಲೆಯಲ್ಲಿ ಪೇಜಾವರ ಮಠಾಧೀಶರ ನಡೆಸುವ ಗೋಶಾಲೆಯಲ್ಲಿ ಸಾವಿರಾರು ಗೋವುಗಳಿವೆ. ಸೆಖೆಯಿಂದ ಸಂಕಟ ಪಡುತ್ತಿರುವ ಗೋವುಗಳಿಗೆ ಯುವಕರ ತಂಡದವರು 3,000 ಕೆ.ಜಿ ಕಲ್ಲಂಗಡಿ ಕೊಟ್ಟು ಖುಷಿಪಟ್ಟಿದ್ದಾರೆ. ಗೋಶಾಲೆಗೆ ಬಂದು ಕಲ್ಲಂಗಡಿ(Watermelon) ಗಳನ್ನು ತಾವೇ ಕೈಯಾರೆ ಕೊಯ್ದು, ತುಂಡು ಮಾಡಿ ಗೋವುಗಳ ಬಾಯಿಗೆ ಕೊಟ್ಟು ಸಂಭ್ರಮಿಸಿದ್ದಾರೆ. ಬಿಸಿಲಿಗೆ ಬಳಲಿದ್ದ ಗೋವುಗಳು ಈ ಸಿಹಿ ನೀರಿನ ಹಣ್ಣುಗಳನ್ನು ತಿಂದು ಖುಷಿಪಟ್ಟವು.

ಗೋ ಸೇವೆ ನಡೆಸುತ್ತಿದೆ ಈ ತಂಡ

ಇದೊಂದು ಅಪರೂಪದ ಯುವಕರ ತಂಡ. ರಘುನಂದನ್ ಹೆಬ್ಬಾರ್ ಎಂಬವರ ನೇತೃತ್ವದಲ್ಲಿ, ಈ ತಂಡ ಗೋ ಸೇವೆ ನಡೆಸುತ್ತಿದೆ. ಯುಗಾದಿ ಗೋಪಾರ್ಟಿ ಹೆಸರಲ್ಲಿ, ಗೋವುಗಳಿಗೆ ಕಾಲ ಕಾಲಕ್ಕೆ ತಿನ್ನಲು ಕೊಡುತ್ತಾ ಬಂದಿದ್ದಾರೆ. ನೀಲಾವರ ಗೋಶಾಲೆಯೂ ಸೇರಿದಂತೆ ಪರಿಸರದ ಹತ್ತಾರು ಗೋಶಾಲೆಗಳಿಗೆ ಈ ತಂಡ ಭೇಟಿ ನೀಡುತ್ತದೆ. ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡಿ ವಾಪಸ್ ಬರುತ್ತದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್​ಗಿರಿ: ಅಕ್ರಮವಾಗಿ ಗೋವು ಸಾಗಾಟ ಮಾಡ್ತಿದ್ದ ಚಾಲಕನಿಗೆ ಥಳಿತ

ಪ್ರತಿಯೊಬ್ಬರೂ ಕೂಡ ಗೋಸೇವೆ ನಡೆಸಬೇಕು ತಿಂಗಳ ಗಳಿಕೆಯಲ್ಲಿ ಒಂದು ಸಣ್ಣ ಮೊತ್ತವನ್ನು ಪರಿಸರದಲ್ಲಿ ಅಡ್ಡಾಡುವ ಗೋವುಗಳ ಹಿತರಕ್ಷಣೆಗೆ ಬಳಸಬೇಕು ಎನ್ನುವುದು ಇವರ ಆಶಯವಾಗಿದೆ. ಅಕ್ರಮ ಸಾಗಾಟದ ವೇಳೆ ಸಿಕ್ಕಿ ಬಿದ್ದ ಅನಾಥ ಹಸುಗಳಿಗೆ ನೀಲಾವರ ಗೋಶಾಲೆಯೇ ಆಶ್ರಯ ತಾಣವಾಗಿದೆ. ಪಾರ್ಟಿ ಹೆಸರಲ್ಲಿ ಮೋಜು ಮಸ್ತಿ ಮಾಡುವ ಜನರು ಈ ರೀತಿಯ ಗೋಪಾರ್ಟಿ ನಡೆಸಿದರೆ, ಮನಸ್ಸಿಗೂ ಸಂತೋಷ, ಗೋವುಗಳಿಗೂ ಸಂಭ್ರಮ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?