ಉಡುಪಿಯಲ್ಲಿ ಫ್ರೀಡಂ ರನ್​ಗೆ ಶೋಭಾ ಕರಂದ್ಲಾಜೆ ಚಾಲನೆ

ನೂರಾರು ವಿದ್ಯಾರ್ಥಿಗಳಿಂದ ಪಿಟ್ ಇಂಡಿಯಾ ಓಟ ನಡೆಯಿತು. ವಿದ್ಯಾರ್ಥಿಗಳ ಜೊತೆ ಓಟದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು.

ಉಡುಪಿಯಲ್ಲಿ ಫ್ರೀಡಂ ರನ್​ಗೆ ಶೋಭಾ ಕರಂದ್ಲಾಜೆ ಚಾಲನೆ
ಫ್ರೀಡಂ ರನ್​ಗೆ ಚಾಲನೆ ನೀಡದ ಶೋಭಾ ಕರಂದ್ಲಾಜೆ
Edited By: sandhya thejappa

Updated on: Sep 25, 2021 | 11:13 AM

ಉಡುಪಿ: ಜಿಲ್ಲೆಯಲ್ಲಿ ನಡೆದ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಫ್ರೀಡಂ ರನ್ಗೆ ಚಾಲನೆ ನೀಡಿದರು. ನಗರದ ಮಹಾತ್ಮ ಗಾಂಧಿ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಿದರು. ನೆಹರು ಯುವ ಕೇಂದ್ರ, ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಎನ್​ಸಿಸಿ, ಎನ್ಎಸ್ಎಸ್, ಭಾರತ ಸ್ಕೌಡ್ಸ ಮತ್ತು ಗೈಡ್ಸ್, ರೆಡ್​ಕ್ರಾಸ್​, ಉಡುಪಿಯ ಕೆನಾರ ಬ್ಯಾಂಕ್ ಸರ್ಕಲ್ ಆಫೀಸ್ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

ನೂರಾರು ವಿದ್ಯಾರ್ಥಿಗಳಿಂದ ಪಿಟ್ ಇಂಡಿಯಾ ಓಟ ನಡೆಯಿತು. ವಿದ್ಯಾರ್ಥಿಗಳ ಜೊತೆ ಓಟದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಹಿರಿಯರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಕೈಜೋಡಿಸೋಣ. ಭಾರತವನ್ನು ಸದೃಢ ಮಾಡುವ ಅವಕಾಶ ನಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳು 25 ವರ್ಷದ ಮುಂದಿನ ಕನಸು ಕಾಣಬೇಕು. ಭಾರತವನ್ನು ವಿಶ್ವದಲ್ಲೇ ನಂಬರ್ 1 ಸ್ಥಾನಕ್ಕೆ ಸೇರಿಸಬೇಕು ಎಂದು ತಿಳಿಸಿದರು.

ಓಟದಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡ ಶೋಭಾ ಕರಂದ್ಲಾಜೆ

ಇನ್ನು ಕೋಲಾರದಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಚಾಲನೆ ನೀಡಿದರು. ನೆಹರು ಯುವ ಕೇಂದ್ರ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಮುನಿರತ್ನ ಚಾಲನೆ ನೀಡಿದರು. ಮ್ಯಾರಥಾನ್ನಲ್ಲಿ ಮಕ್ಕಳೊಂದಿಗೆ ಸಂಸದ ಮುನಿಸ್ವಾಮಿ ಭಾಗಿಯಾದರು. 75ನೇ ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ್ ಹಿನ್ನೆಲೆ ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು, ಫಿಟ್ ಇಂಡಿಯಾ ಫ್ರೀಡಂನಲ್ಲಿ ನೂರಾರು ಯುವಕರು ಭಾಗಿಯಾಗಿದ್ದರು.

ಇದನ್ನೂ ಓದಿ

PM Modi in Nee York: ನ್ಯೂಯಾರ್ಕ್​ ತಲುಪಿದ ಪ್ರಧಾನಿ ಮೋದಿ; ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ

ಎಲ್ಲ ಕಂಪನಿಗಳ ಷೇರುಗಳು ಹಣವನ್ನು ದ್ವಿಗುಣಗೊಳಿಸಲಾರವು, ಹಣ ಹೂಡುವಾಗ ವಿವೇಚನೆ ಬಳಸಬೇಕು: ಡಾ ಬಾಲಾಜಿ ರಾವ್

(Shobha karandlaje inaugurated freedom run in udupi)

Published On - 10:19 am, Sat, 25 September 21

Web contact

TV9 Kannada

Read More
Follow Us