AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಕೇಸ್​ಗೆ ಬಿಗ್ ಟ್ವಿಸ್ಟ್: ನಕ್ಸಲರ ಕಥೆ ಹಿಂದಿದೆಯಾ ಡ್ರಗ್ ಮಾಫಿಯಾ?

ಕೊಲ್ಲೂರು ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಕ್ಸಲರ ಕಥೆ ಹಿಂದೆ ಇದೀಗ ಡ್ರಗ್ ಮಾಫಿಯಾ ಕೇಳಿಬರುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ವ್ಯಾಪ್ತಿಯಲ್ಲಿ ಐವರು ನಕ್ಸಲರ ಓಡಾಟದ ಬಗ್ಗೆ ವರದಿ ಬೆನ್ನಲ್ಲೇ ಟಿವಿ9 ಜೊತೆ ಮಾತನಾಡಿದ ಸ್ಥಳೀಯ ನಿವಾಸಿ ಅಕ್ಕು, 20 ವರ್ಷಗಳ ಹಿಂದೆ ಇಂತಹದ್ದೇ ಕಥೆ ಕಟ್ಟಲಾಗಿತ್ತು. ನಾವು 40 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇವೆ. ಈ ಭಾಗದಲ್ಲಿ ಇದುವರೆಗೆ ನಕ್ಸಲರ ಓಡಾಟ ಕಂಡು ಬಂದಿಲ್ಲ ಎಂದಿದ್ದಾರೆ.

ಉಡುಪಿ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಕೇಸ್​ಗೆ ಬಿಗ್ ಟ್ವಿಸ್ಟ್: ನಕ್ಸಲರ ಕಥೆ ಹಿಂದಿದೆಯಾ ಡ್ರಗ್ ಮಾಫಿಯಾ?
ಸ್ಥಳೀಯ ನಿವಾಸಿ ಅಕ್ಕು
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Feb 11, 2024 | 3:07 PM

Share

ಉಡುಪಿ, ಫೆಬ್ರವರಿ 11: ನಾವು 40 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇವೆ. ಈ ಭಾಗದಲ್ಲಿ ಇದುವರೆಗೆ ನಕ್ಸಲರ (Naxal) ಓಡಾಟ ಕಂಡು ಬಂದಿಲ್ಲ. ನಕ್ಸಲರು ಬಂದಿದ್ದಾರೆ ಅನ್ನೋದನ್ನ ಯಾರೂ ನಂಬಲು ತಯಾರಿಲ್ಲ ಎಂದು ಸ್ಥಳೀಯ ನಿವಾಸಿ ಅಕ್ಕು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮೂಲಕ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​ ಸಿಕ್ಕಿದೆ. ನಕ್ಸಲರ ಕಥೆ ಹಿಂದೆ ಡ್ರಗ್ ಮಾಫಿಯಾ ಇದೆ ಎನ್ನುವ ಅನುಮಾನಗಳು ಸಹ ಹುಟ್ಟಿಕೊಂಡಿವೆ. ಐವರು ನಕ್ಸಲರ ಓಡಾಟದ ಬಗ್ಗೆ ವರದಿ ಬೆನ್ನಲ್ಲೇ ಟಿವಿ9 ಜೊತೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಇಂತಹದ್ದೇ ಕಥೆ ಕಟ್ಟಲಾಗಿತ್ತು. ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಅಕ್ರಮ ಅವ್ಯವಹಾರ ಮುಚ್ಚಿ ಹಾಕಲು ನಕ್ಸಲರ ಕಥೆ ಕಟ್ಟಲಾಗಿದೆ. ನಕ್ಸಲರು ಬಂದಿದ್ದಾರೋ, ಇಲ್ಲವೋ ಗೊತ್ತಿಲ್ಲ. ನಕ್ಸಲರು ಭೇಟಿ ನೀಡಿರುವ ಸಾಧ್ಯತೆ ಇಲ್ಲ. ಹೆಬ್ರಿ ಮೂಲದ ನಕ್ಸಲ್ ವಿಕ್ರಂ ಗೌಡ ತಂಡ ಓಡಾಟ ನಡೆಸಿದೆ ಎಂದು ಹೇಳಲಾಗಿತ್ತು ಎಂದಿದ್ದಾರೆ.

ನಕ್ಸಲರ ಸುಳಿವಿಗಾಗಿ ಚುರುಕುಗೊಂಡ ಕಾರ್ಯಚರಣೆ 

ಮುಂಜಾನೆ 2:30 ಸುಮಾರಿಗೆ ನಕ್ಸಲರ ತಂಡ ಒಂದು ನಮ್ಮ ಮನೆಯ ಬಳಿ ಭೇಟಿ ನೀಡಿದೆ ಎಂದು ಉದಯನಗರ ಮೂಲದ ವ್ಯಕ್ತಿ ಯೋರ್ವರು ಮಾಡಿದ ಕರೆಗೆ ಎಎನ್ಎಫ್ ತಂಡ ಕೊಲ್ಲೂರು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕೂಂಬಿಂಗ್ ನಡೆಸಿತ್ತು. ನಕ್ಸಲ ಕುರಿತು ಮಾಹಿತಿ ನೀಡಿದ ವ್ಯಕ್ತಿಯನ್ನು ಕೂಡ ವಿಚಾರ ನಡೆಸಿದ ಎಎನ್ ಎಫ್, ನಕ್ಸಲರ ಸುಳಿವಿಗಾಗಿ ಕಾರ್ಯಾಚರಣೆ ಚುರುಕು ಗೊಳಿಸಿದೆ. ಜಿಲ್ಲೆಯ ಬೈಂದೂರು ತಾಲೂಕಿನ ಹಳ್ಳಿಹೊಳೆ, ದೇವರ ಬಾಳು, ಅಮಾಸೆಬೈಲು ಇವೆಲ್ಲ ಈ ಮೊದಲೇ ನಕ್ಸಲರ ನೆರಳಿನಲ್ಲಿ ಗುರುತಿಸಿಕೊಂಡಿದ್ದ ಸ್ಥಳಗಳು.

ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಆಕ್ಟಿವ್​ ಆದ ನಕ್ಸಲ್​ ಚಟುವಟಿಕೆ ! ಗ್ರಾಮಸ್ಥರಿಗೆ ಪೊಲೀಸರ ಸೂಚನೆ

ಸುಮಾರು ಹತ್ತು ವರ್ಷಗಳ ಹಿಂದೆ ಈ ಭಾಗದಲ್ಲೆಲ್ಲಾ ನಕ್ಸಲರ ಆರ್ಭಟ ಹೆಚ್ಚಾಗಿಯೇ ಇತ್ತು ಎಂದರೆ ತಪ್ಪಾಗಲಾರದು. 2005 ರಲ್ಲಿ ದೇವರ ಬಾಳು ಎಂಬಲ್ಲಿ ಪೊಲೀಸರಿಗೆ ನಕ್ಸಲರ ಮಾಹಿತಿ ನೀಡುತ್ತಿದ್ದರು ಎನ್ನುವ ಉದ್ದೇಶದಿಂದ ಕೇಶವ ಯಡಿಯಾಳ್ ಎನ್ನುವರನ್ನು ನಕ್ಸಲರ ತಂಡ ಹತ್ಯೆ ಮಾಡಿತ್ತು. ಆ ಬಳಿಕ ನಕ್ಸಲರ ಬೇಟೆಗೆ ಇಳಿದ ಎಎನ್​ಎಸ್ ಮತ್ತು ಎಎನ್​ಎಫ್ ತಂಡ ಕೇಶವ ಯಡಿಯಾಳರನ್ನ ಹತ್ಯೆ ಮಾಡಿದ 12 ಜನ ತಂಡದ ನಕ್ಸಲರಲ್ಲಿ ಇಬ್ಬರನ್ನು ಹೊಡೆದುರುಳಿಸುವ ಮೂಲಕ ಈ ಭಾಗದಲ್ಲಿ ನಕ್ಸಲ್ ನಿಯಂತ್ರಣಕ್ಕೆ ನಾಂದಿ ಹಾಡಿತು. ಸದ್ಯ ಎರಡು ಮೂರು ದಿನಗಳ ಹಿಂದೆ ಮತ್ತೆ ಇದೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿರುವ ಉದಯನಗರ ಗ್ರಾಮದ ವ್ಯಾಪ್ತಿಯಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ ಎನ್ನುವ ಗುಮಾನಿ ಶುರುವಾಗಿದೆ.

ಎಎನ್​ಎಫ್​ಗೆ ಕರೆ ಮಾಡಿದ ಪ್ರತ್ಯಕ್ಷದರ್ಶಿ

ಬೈಂದೂರು ತಾಲೂಕು ವ್ಯಾಪ್ತಿಗೆ ಸೇರುವ ಜಡಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದಯನಗರ ಎನ್ನುವ ಪ್ರದೇಶಕ್ಕೆ ಹತ್ತಿರವಿರುವ ಗುಂಡಿನ ಹೊಳೆ ಎನ್ನುವ ಸ್ಥಳದಲ್ಲಿ ವಾಸುತ್ತಿರುವ ಶಾಜು, ನಕ್ಸಲರನ್ನು ನೋಡಿದ್ದೇನೆ ಎಂದು ಎಎನ್​ಎಫ್​ಗೆ ಕರೆ ಮಾಡಿದ ಪ್ರತ್ಯಕ್ಷದರ್ಶಿ. ರಾತ್ರಿ 2.30 ರ ಸುಮಾರಿಗೆ ಮನೆಯ ಪಕ್ಕದಲ್ಲಿ ನಕ್ಸಲರಂತೆ ಬಟ್ಟೆ ಧರಿಸಿರುವ ಬಂದೂಕು ಹಿಡಿದು ತೆರಳುತ್ತಿರುವ ಐದು ಜನರ ತಂಡವನ್ನು ನಾನು ಗಮನಿಸಿದ್ದೇನೆ ಎಂದು ಶಾಜು ಇಲಾಖೆಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮತ್ತೆ ಆಕ್ಟಿವ್​ ಆದ ನಕ್ಸಲರು: ಉಡುಪಿ, ಚಿಕ್ಕಮಗಳೂರಿನಲ್ಲಿ 5 ದಿನ ಹೈ ಅಲರ್ಟ್​​

ಇದೇ ಹಿನ್ನೆಲೆಯಲ್ಲಿ 10 ವರ್ಷದ ಬಳಿಕ ಆಕ್ಟಿವ್ ಆದ ಎಎನ್​ಎಫ್ ತಂಡ, ಸ್ಥಳೀಯ ಕೊಲ್ಲೂರು ಪೊಲೀಸರ ಸಹಭಾಗಿತ್ವವನ್ನ ಪಡೆದು ಪ್ರತ್ಯಕ್ಷ ದರ್ಶಿ ಶಾಜು ಅನ್ನು ವಿಚಾರಣೆ ನಡೆಸಿದೆ. ವಿಚಾರಣೆಯ ಸಂದರ್ಭ ಐದು ಜನರ ತಂಡವನ್ನ ನಾನು ಗಮನಿಸಿದ್ದೇನೆ. ಅವರ ಕೈಯಲ್ಲಿ ಆಯುಧಗಳು ಇತ್ತು ಎನ್ನುವುದನ್ನು ಶಾಜು ತಿಳಿಸಿದ್ದಾರೆ. ಇನ್ನು ಇದೇ ದೂರಿನ ಆಧಾರದ ಮೇಲೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ, ಎಎನ್​ಎಫ್ ಮೂರು ತಂಡಗಳು ಕೂಂಬಿಂಗ್ ನಡೆಸಿದ್ದಾರೆ.

ಡ್ರೋನ್ ಬಳಸಿಯು ಕೂಡ ಇದೇ ಭಾಗದಲ್ಲಿ ಪರಿಶೀಲನೆ ನಡೆಸಿದರು ಕೂಡ ಇದುವರೆಗೆ ಯಾವುದೇ ನಕ್ಸಲರ ಸುಳಿವಿಲ್ಲ. ಹೀಗಾಗಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನಲಾದ ಪ್ರದೇಶದಲ್ಲಿ ಬಿಗು ಬಂದೋಬಸ್ತ್ ಹಾಕುವ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ.

ನಕ್ಸಲ್ ನೆರಳಿನಲ್ಲಿ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಸದ್ಯ ನಕ್ಸಲರ ಭಯ ಆವರಿಸಿದೆ. ಹತ್ತು ವರ್ಷದ ಬಳಿಕ ಸ್ವಲ್ಪಮಟ್ಟಿನ ಅಭಿವೃದ್ಧಿಗೆ ಕಾಣುವಂತಾಗಿದ್ದ ಪ್ರದೇಶಕ್ಕೆ ಮತ್ತೆ ನಕ್ಸಲರು ಭೇಟಿ ನೀಡಿದ್ದಾರೆ ಎನ್ನುವ ವದಂತಿ ಸ್ಥಳೀಯರನ್ನ ಚಿಂತೆಗೀಡು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?