
ಭಾರತೀಯ ಆಡಳಿತ ಸೇವೆಗೆ ಬಾಗಿಲು ತೆರೆಯುವ UPSC ಪರೀಕ್ಷೆಯು ಅಭ್ಯರ್ಥಿಗಳಿಗೆ ಅಗ್ನಿ ಪರೀಕ್ಷೆಯಾಗಿರುತ್ತದೆ. ದೇಶಾದ್ಯಂತ ಪ್ರತಿ ವರ್ಷ 9-10 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಅವರಲ್ಲಿ ಕೇವಲ 1,000 ಮಂದಿ ಮಾತ್ರವೇ ದೇಶದಲ್ಲಿ ಆಡಳಿತಾತ್ಮಕ ಸೇವೆಗೆ ಆಯ್ಕೆಯಾಗುತ್ತಾರೆ. IAS, IPS ಕ್ಯಾಟಗರಿಯ ಇತರೆ ಅಧಿಕಾರಿಗಳಿಗೆ ಸರ್ಕಾರ ಏನೆಲ್ಲಾ ಸವಲತ್ತುಗಳನ್ನು ಕಲ್ಪಿಸುತ್ತವೆ ಒಮ್ಮೆ ನೋಡಿಕೊಂಡು ಬರೋಣ ಬನ್ನೀ. UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಭಾರತೀಯ ಆಡಳಿತ ಸೇವೆಯಲ್ಲಿ ಉದ್ಯೋಗ ಪಡೆಯಬಹುದು. ಈ ಪ್ರತಿಷ್ಠಿತ ಉದ್ಯೋಗವು ಉನ್ನತ ಸ್ಥಾನಮಾನ, ಉತ್ತಮ ಸಂಬಳ, ಘನತೆ ಮತ್ತು ಸೌಕರ್ಯಗಳಿಂದ ತುಂಬಿದೆ. ವರ್ಷಕ್ಕೊಮ್ಮೆ ವಿದೇಶ ಪ್ರವಾಸಕ್ಕೆ ಹೋಗಿಬರಬಹುದು. ಈ ಉದ್ಯೋಗವು ಬಂಗಲೆ, ಕಾರ್ ಸೇವಕ, ಮಕ್ಕಳಿಗಾಗಿ ಸೆಂಟ್ರಲ್ ಬೋರ್ಡ್ ಶಾಲೆಗೆ ಪ್ರವೇಶ ಮುಂತಾದ ಸೌಕರ್ಯಗಳ ಕೊಡುಗೆಯೊಂದಿಗೆ ಬರುತ್ತದೆ. ಅಂತಹ ಸರ್ಕಾರಿ ಕೆಲಸವನ್ನು ಯಾರುತಾನೆ ಬಯಸುವುದಿಲ್ಲ ಹೇಳಿ. ಆದ್ದರಿಂದ ಮೆಡಿಕಲ್, ಸಿವಿಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ ನಂತರವೂ ಅಭ್ಯರ್ಥಿಗಳು UPSC ಪರೀಕ್ಷೆಯನ್ನು ಬರೆಯುವ ಮೂಲಕ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಾರೆ. ಭಾರತೀಯ ಆಡಳಿತ ಸೇವೆಯಲ್ಲಿ ಉದ್ಯೋಗ ಪಡೆಯಲು UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನೀವು ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅದಕ್ಕಾಗಿ ಬರ್ಜರಿ ತಯಾರಿ ನಡೆಸಬೇಕು. ಕಾಲೇಜು ಹಂತದಲ್ಲಿಯೇ ಅದರೆಡೆಗೆ ಸೆಳೆತ ಹೊಂದಿರಬೇಕು. ಯಾವುದೇ ಸ್ಟ್ರೀಮ್ನ ಪದವೀಧರರು ಈ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಬಹುದು. ಹಾಗಾದರೆ ಈ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಧಿಕಾರಿಗೆ ಸಂಬಳ ಸವಲತ್ತು ಎಷ್ಟು ಇರುತ್ತದೆ ಎಂಬುದನ್ನು ಇಲ್ಲಿ ನೋಡೋಣ… ಯುಪಿಎಸ್ಸಿ ನಡೆಸುವ ವಿವಿಧ ಪರೀಕ್ಷೆಗಳು ಮತ್ತು ಪ್ರಕ್ರಿಯೆಗಳ ಮೂಲಕ, ನೀವು ಐಎಎಸ್ (ಐಎಎಸ್...