AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡದಲ್ಲಿ 350ಕ್ಕೂ ಹೆಚ್ಚು ಅಡಕೆ ಮರಗಳ ಮಾರಣಹೋಮ! ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆರೋಪ

ಎಂಟು ಅರಣ್ಯ ಅಧಿಕಾರಿಗಳ ತಂಡ ಧಿಡೀರನೆ ತೋಟಕ್ಕೆ ಬಂದು ಐದು ವರ್ಷದಿಂದ ಕಷ್ಟ ಪಟ್ಟು ಬೆಳೆದ ಅಡಕೆ ಮರಗಳನ್ನ ಕಡೆದು ಹಾಕಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಕೆ ಮತ್ತು ಬಾಳೆ ಬೆಳೆದಿದ್ದ ರೈತರು ಈಗ ನ್ಯಾಯ ಕೊಡಿಸಿ ಅಂತಾ ಅಂಗಲಾಚುತ್ತಿದ್ದಾರೆ.

ಉತ್ತರ ಕನ್ನಡದಲ್ಲಿ 350ಕ್ಕೂ ಹೆಚ್ಚು ಅಡಕೆ ಮರಗಳ ಮಾರಣಹೋಮ! ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆರೋಪ
ಕಡೆದ ಅಡಕೆ ಮರಗಳು, ಬಾಳೆ ಗಿಡಗಳು
TV9 Web
| Updated By: sandhya thejappa|

Updated on: Jan 29, 2022 | 2:56 PM

Share

ಕಾರವಾರ: ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ 350 ಕ್ಕೂ ಅಧಿಕ ಅಡಕೆ ಮರಗಳ (Areca Trees) ಮಾರಣಹೋಮ ನಡೆದಿದೆ ಅಂತಾ ಜಮೀನು ಮಾಲೀಕರು ಆರೋಪಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನ ಹಟ್ಟಿಕೇರೆಯ ಶವಗುಳಿ ಗ್ರಾಮದಲ್ಲಿ ನಡೆದಿದೆ. ಬೆಳ್ಳಾ ತಮ್ಮಣ್ಣ ಕುಣಬಿ ಮತ್ತು ಸಾತಾ ಒಳ್ಳು ಕುಣಬಿ ಎಂಬ ರೈತರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿದ್ದ ಅಡಕೆ ಮರಗಳು ಮತ್ತು ಬಾಳೆಯನ್ನ ಅರಣ್ಯ ಅಧಿಕಾರಿಗಳು ಧಿಡೀರನೆ ದಾಳಿ ಮಾಡಿ ಕಡೆದು ಹಾಕಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಎಂಟು ಅರಣ್ಯ ಅಧಿಕಾರಿಗಳ ತಂಡ ಧಿಡೀರನೆ ತೋಟಕ್ಕೆ ಬಂದು ಐದು ವರ್ಷದಿಂದ ಕಷ್ಟ ಪಟ್ಟು ಬೆಳೆದ ಅಡಕೆ ಮರಗಳನ್ನ ಕಡೆದು ಹಾಕಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಕೆ ಮತ್ತು ಬಾಳೆ ಬೆಳೆದಿದ್ದ ರೈತರು ಈಗ ನ್ಯಾಯ ಕೊಡಿಸಿ ಅಂತಾ ಅಂಗಲಾಚುತ್ತಿದ್ದಾರೆ. ಅಡಕೆ ಮರಗಳನ್ನ ಕಡಿಬೇಡಿ ಅಂತಾ ರೈತರು ಕೇಳಿಕೊಂಡರು ಮಾತು ಕೇಳದೆ ಮನಸೋಇಚ್ಛೆ ಗಿಡಗಳನ್ನ ಕಡೆದು ಹಾಕಿದ್ದಾರೆ. ಈ ಹಿಂದೆಯು ಅಧಿಕಾರಿಗಳು ತಮ್ಮ ತೋಟಕ್ಕೆ ಬಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ನಾವು ಕೊಟ್ಟಿರಲಿಲ್ಲ. ಕೊಡುವುದಕ್ಕೆ ನಮ್ಮ ಹತ್ತಿರ ಹಣ ಸಹ ಇಲ್ಲ. ದುಡ್ಡು ಕೊಟ್ಟಿಲ್ಲ ಅಂತಾ ಅಧಿಕಾರಿಗಳು ಹೀಗೆ ನಮಗೆ ಅನ್ಯಾಯ ಮಾಡಿದ್ದಾರೆ ಅಂತಾ ರೈತರು ಆರೋಪ ಮಾಡಿದ್ದಾರೆ.

ಗಿಡ, ಮರಗಳನ್ನ ಬೆಳೆಸಿ ಕಾಡು ಉಳಿಸಿ ಅಂತಾ ಹೇಳಬೇಕಾದವರೆ ಈ ರೀತಿ ವರ್ತನೆ ಮಾಡಿದ್ದಾರೆ. ಮುಂಚಿತವಾಗಿ ನಮಗೆ ಮಾಹಿತಿ ನೀಡಿಲ್ಲ. ಜೊತೆಗೆ ಕಳೆದ ಐದು ವರ್ಷದಿಂದ ನಾವು ಈ ಭೂಮಿಯಲ್ಲಿ ಅಡಕೆ, ಬಾಳೆ ಬೆಳೆಯುತ್ತಿದ್ದೇವೆ. ಇಷ್ಟು ದಿನ ಬಿಟ್ಟು ಈಗ ಏಕಾಏಕಿ ಬಂದು ಮರಗಳನ್ನ ಕಡೆದಿದ್ದಾರೆ. ಕೆಲವೇ ತಿಂಗಳಲ್ಲಿ ಅಡಕೆ ಮರಗಳು ಫಲ ಕೊಡುತ್ತಿದ್ದವು. ಅವುಗಳನ್ನ ಕಡೆದು ಹಾಕಿದ್ದಾರೆ. ಕೈಗೆ ಬಂದ ತುತ್ತನ್ನ ಅಧಿಕಾರಿಗಳು ಮಣ್ಣು ಪಾಲು ಮಾಡಿದ್ದಾರೆ ನಮಗೆ ನ್ಯಾಯ ಕೊಡಿಸಿ ಅಂತ ರೈತರು ಕೇಳುತ್ತಿದ್ದಾರೆ.

ಈ ಪ್ರಕರಣ ಕುರಿತು ಅಂಕೋಲ ಆರ್​ಎಫ್​ಓವಿಪಿ ನಾಯಕ್ ಅವರನ್ನ ಕೇಳಿದರೆ, ಹೊಸದಾಗಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಅಲ್ಲಿ ಅಡಕೆ ಮತ್ತು ಬಾಳೆ ಬೆಳೆದಿದ್ದರು. ಹೀಗಾಗಿ ಅದನ್ನ ತೆರವು ಮಾಡಿದ್ದೇವೆ. ಹಳೆಯ ಅತಿಕ್ರಮಣ ಇದ್ದರೆ ಅರಣ್ಯ ಇಲಾಖೆಯಿಂದಲೇ ಮಾಹಿತಿ ಸಂಗ್ರಹಿಸಿ ಫಲಾನುಭವಿಗಳಿಗೆ ಪಟ್ಟ ಸಿಗುವಂತೆ ಮಾಡಿದ್ದೇವೆ. ಹಟ್ಟಿಕೇರೆ ಮತ್ತು ಶವಗುಳಿ ಗ್ರಾಮದ ರೈತರು ಹೊಸದಾಗಿ ಅತಿಕ್ರಮಣ ಮಾಡಿ ಕೃಷಿ ಮಾಡಿದ್ದರು ಅದನ್ನ ತಡೆದಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ

ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು! ಮೈಸೂರು ಮಹಾರಾಜರನ್ನು ಬಿಟ್ಟರೆ ನೆಕ್ಸ್ಟ್​​ ನಾನೇ: ಮೈಸೂರು ಶಾಸಕರಿಗೆ ಸಿಂಹ ಸವಾಲು

Winter Allergy: ಚಳಿಗಾಲದಲ್ಲಿ ಉಂಟಾಗುವ ಅಲರ್ಜಿಗಳಿಂದ ಆರೋಗ್ಯ ಹದಗೆಡಬಹುದು; ಇಲ್ಲಿದೆ 5 ಪರಿಹಾರ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!