AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆಯಲ್ಲಿ ಹಂಚಲು ಗೋವಾದಿಂದ ಆಲ್ಕೋಹಾಲ್ ತಂದು ಸಿಕ್ಕಿಬಿದ್ದ ಆರೋಪಿ; ಎಣ್ಣೆ ಸಾಗಾಟಕ್ಕೆ ಖತರ್ನಾಕ್ ಐಡಿಯಾ!

ಗೋವಾದಿಂದ ಮೀನು ಸಾಗಣೆಯ ಕಂಟೈನರ್‌ನಲ್ಲಿ 1.69 ಲಕ್ಷ ರೂ. ಮೌಲ್ಯದ ಗೋವಾ ರಾಜ್ಯದ ಪರವಾನಗಿಯ ವಿಸ್ಕಿ ಹಾಗೂ ಕೊಕೋನಟ್ ಫೆನ್ನಿಯನ್ನು ಅಂಕೋಲಾಕ್ಕೆ ಸಾಗಿಸುತ್ತಿದ್ದ ವೇಳೆ ಕಾರವಾರದಲ್ಲಿ ಓರ್ವ ವ್ಯಕ್ತಿ ಅಬಕಾರಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಚುನಾವಣೆಯಲ್ಲಿ ಹಂಚಲು ಗೋವಾದಿಂದ ಆಲ್ಕೋಹಾಲ್ ತಂದು ಸಿಕ್ಕಿಬಿದ್ದ ಆರೋಪಿ; ಎಣ್ಣೆ ಸಾಗಾಟಕ್ಕೆ ಖತರ್ನಾಕ್ ಐಡಿಯಾ!
ಕಾರವಾರದಲ್ಲಿ ವಶಪಡಿಸಿಕೊಂಡ ಆಲ್ಕೋಹಾಲ್
TV9 Web
| Edited By: |

Updated on:Dec 03, 2021 | 6:12 PM

Share

ಕಾರವಾರ: ಗೋವಾ ಹೇಳಿಕೇಳಿ ಆಲ್ಕೋಹಾಲ್​ಗೆ ಫೇಮಸ್. ಕೆಲವರು ಅಲ್ಲಿ ಕಡಿಮೆ ದರದಲ್ಲಿ ಸಿಗುವ ಮದ್ಯವನ್ನು ಕರ್ನಾಟಕಕ್ಕೆ ತಂದು ಮಾರಾಟ ಮಾಡಿ ಹಣ ಗಳಿಸುವ ಕಾರ್ಯವೇನೂ ಗುಟ್ಟಾಗಿ ಉಳಿದಿಲ್ಲ. ಅನೇಕ ಪ್ರಕರಣಗಳಲ್ಲಿ ಅಬಕಾರಿ ದಾಳಿಗಳೂ ನಡೆದು ಮದ್ಯ ಜಪ್ತಿಪಡಿಸಿಕೊಂಡು, ಆರೋಪಿಗಳನ್ನು ವಶಪಡಿಸಿಕೊಂಡಿರುವುದೂ ಇದೆ. ಆದರೀಗ ವಿಧಾನ ಪರಿಷತ್ ಚುನಾವಣೆಗಾಗಿ ಮತದಾರರಿಗೆ ಹಂಚಿಕೆ ಮಾಡಲು ಲಕ್ಷಗಟ್ಟಲೆ ಮೌಲ್ಯದ ಮದ್ಯವನ್ನು ಗಡಿ ಜಿಲ್ಲೆ ಉತ್ತರ ಕನ್ನಡಕ್ಕೆ ಪೊಲೀಸ್, ಅಬಕಾರಿಗಳ ಕಣ್ತಪ್ಪಿಸಿ ತರುತ್ತಿರುವ ಕೆಲಸ ನಡೆಯುತ್ತಿದೆ.

ಸದ್ಯ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದೆ. ಚುನಾವಣೆ ಎನ್ನುವುದು ಕೊನೆಯ ದಿನದ ಆಟ ಎಂಬಂತೆ, ಮತದಾನಕ್ಕೆ ಎರಡು ದಿನ ಇರುವಾಗ ಮತ ಪಡೆಯಲು ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದವರು ಹೆಂಡ- ಹಣ ಹಂಚುವ ಕಾರ್ಯಕ್ಕೆ ಇಳಿಯುವುದು ಇತ್ತೀಚಿನ ಚುನಾವಣೆಗಳ ಒಂದು ಭಾಗವೇ ಆಗಿದೆ. ಕಾನೂನು ಪ್ರಕಾರ ಇದು ಅಪರಾಧವಾಗಿರುವ ಕಾರಣ ಅಧಿಕಾರಿಗಳ ಕಣ್ತಪ್ಪಿಸಿ ಇಂಥ ಕಾರ್ಯಕ್ಕೆ ಕೆಲವರು ಇಳಿಯುತ್ತಾರೆ.

ಇದಕ್ಕೆ ಪುಷ್ಠಿ ನೀಡುವಂತೆ, ಗೋವಾದಿಂದ ಮೀನು ಸಾಗಣೆಯ ಕಂಟೈನರ್‌ನಲ್ಲಿ 1.69 ಲಕ್ಷ ರೂ. ಮೌಲ್ಯದ ಗೋವಾ ರಾಜ್ಯದ ಪರವಾನಗಿಯ ವಿಸ್ಕಿ ಹಾಗೂ ಕೊಕೋನಟ್ ಫೆನ್ನಿಯನ್ನು ಅಂಕೋಲಾಕ್ಕೆ ಸಾಗಿಸುತ್ತಿದ್ದ ವೇಳೆ ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್​ನಲ್ಲಿ ಓರ್ವ ವ್ಯಕ್ತಿ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಮೀನು ಸಾಗಾಣೆಯ ನೆಪದಲ್ಲಿ ಈತ ಎಣ್ಣೆ ಸಾಗಾಟಕ್ಕೆ ಮಾಡಿದ್ದ ವ್ಯವಸ್ಥೆಯನ್ನು ಕಂಡು ಅಬಕಾರಿ ಸಿಬ್ಬಂದಿಯೇ ಒಮ್ಮೆ ಶಾಕ್ ಆಗಿದ್ದಾರೆ.

ಮೀನು ಸಾಗಣೆ ಕಂಟೈನರ್‌ನ ಮೇಲ್ಭಾಗದಿಂದ ಸಣ್ಣ ಕಿಟಿಕಿಯಂಥ ವ್ಯವಸ್ಥೆ ಮಾಡಿ, ಮೀನು ಇಡುವಲ್ಲಿ ಎರಡು ಪ್ರತ್ಯೇಕ ಕಂಪಾರ್ಟ್​ಮೆಂಟ್ ಮಾಡಿ, ಯಾರಿಗೂ ಗೊತ್ತಾಗದಂತೆ ಗೌಪ್ಯ ವ್ಯವಸ್ಥೆಗೊಳಿಸಿ ಅದರಲ್ಲಿ ಮದ್ಯ ಅಡಗಿಸಿಟ್ಟಿದ್ದ. ಅದರ ಮುಂಭಾಗದ ಕಂಪಾರ್ಟ್​ಮೆಂಟ್‌ನಲ್ಲಿ ಖಾಲಿ ಮೀನಿನ ಟ್ರೇಗಳನ್ನಿಟ್ಟು, ಗೊತ್ತೇ ಆಗದಂತೆ ಮರೆಮಾಚಿ ಸಾಗಣೆ ಮಾಡುತ್ತಿದ್ದ. ಎಂದಿನಂತೆ ಮಾಜಾಳಿ ಚೆಕ್‌ಪೋಸ್ಟ್​ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಅಬಕಾರಿ ಸಿಬ್ಬಂದಿ, ಅನುಮಾನದ ಮೇರೆಗೆ ವಾಹನದ ಮೇಲೆ ಹತ್ತಿ ನೋಡಿದಾಗ ಮೂರ್ನಾಲ್ಕು ಜನರು ನಿಂತು ಪ್ರಯಾಣಿಸುವಷ್ಟು ಇದ್ದ ಜಾಗದಲ್ಲಿ 1,51,200 ರೂ. ಮೌಲ್ಯದ ಗೋವಾ ರಾಜ್ಯದ ಪರವಾನಗಿಯ ಕೋಕೋನಟ್ ಫೆನ್ನಿ ಹಾಗೂ 18,000 ಮೌಲ್ಯದ ರಾಯಲ್ ಸ್ಟಾಗ್ ವಿಸ್ಕಿಯ ಬಾಟಲಿಗಳನ್ನು ಜೋಡಿಸಿಟ್ಟುವುದು ಬೆಳಕಿಗೆ ಬಂದಿದೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು, ಮದ್ಯ ಹಾಗೂ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಜಿಲ್ಲಾ ಉಪ ಆಯುಕ್ತೆ ವನಜಾಕ್ಷಿ ತಿಳಿಸಿದ್ದಾರೆ.

ಇನ್ನು, ಚುನಾವಣೆಯ ಸಲುವಾಗಿಯೇ ಈ ಮದ್ಯ ಸಾಗಾಟವಾಗುತ್ತಿದ್ದುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಈ ರೀತಿ ಅಕ್ರಮವಾಗಿ ಗೋವಾ ರಾಜ್ಯದಿಂದ ಬರುವ ಮದ್ಯವನ್ನು ತಡೆಗಟ್ಟಲು ಅಬಕಾರಿ ಜಿಲ್ಲಾ ಉಪ ಆಯುಕ್ತೆ ವನಜಾಕ್ಷಿಯವರು ತಮ್ಮ ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ತಂಡಗಳನ್ನು ರಚನೆ ಮಾಡಿ, ದೂರುಗಳನ್ನು ನೀಡಲು ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ. ಜೊಯಿಡಾ ಅನಮೋಡ ಹಾಗೂ ಕಾರವಾರದ ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ಅಕ್ರಮ ಮದ್ಯ ಸಾಗಾಟದ ಮೇಲೆ ಕಣ್ಣಿಡುವಂತೆ ಖಡಕ್ ಸೂಚನೆ ಕೂಡ ನೀಡಿದ್ದಾರೆ.

ಒಟ್ಟಾರೆಯಾಗಿ, ಅಬಕಾರಿ ಇಲಾಖೆಯೇನೋ ಚುನಾವಣೆಯ ಸಲುವಾಗಿ ಸದ್ಯ ಅಬಕಾರಿ ಅಕ್ರಮ ನಡೆಯದಂತೆ ಪಹರೆ ಹಾಕಿದೆ. ಆದರೆ, ಈ ಪಹರೆ ಚುನಾವಣೆಯ ನಂತರವೂ ನಿರಂತರವಾಗಿ ಮುಂದುವರಿದರೆ ಜಿಲ್ಲೆಯ ಜನತೆಗೂ ಒಳ್ಳೆಯದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವರದಿ: ದೇವರಾಜ್​ ನಾಯ್ಕ್​

ಇದನ್ನೂ ಓದಿಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅನುಮಾನ; ಕೈ ನಾಯಕ ಗುಲಾಂ ನಬಿ ಆಜಾದ್ ಭವಿಷ್ಯ

ದೇವೇಗೌಡರು ದೆಹಲಿಯಿಂದ ಬಂದ ನಂತರ ಮೇಲ್ಮನೆ ಚುನಾವಣೆ ಮೈತ್ರಿ ಬಗ್ಗೆ ನಿರ್ಧಾರ: ಎಚ್.ಡಿ.ಕುಮಾರಸ್ವಾಮಿ

Published On - 3:46 pm, Fri, 3 December 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ