AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿನಡಿಯಲ್ಲಿತ್ತು ಕಾಳಿಂಗ ಸರ್ಪ! 80 ಕಿಮೀ ಪ್ರಯಾಣಿಸಿ ಬೆಚ್ಚಿ ಬಿದ್ದ ಸವಾರರು ಆಮೇಲೆ ಮಾಡಿದ್ದೇನು?

ಗೋವಾದ ಕ್ಯಾಸಲ್ ರಾಕ್-ದೂಧಸಾಗರ ಪ್ರದೇಶದ ಕಂಡೇವಾಡಿಯ ವ್ಯಕ್ತಿಯೊಬ್ಬರು ಮತ್ತು ಅವರ ಸೋದರಸಂಬಂಧಿಗಳು ಜಗಲ್‌ಪೇಟೆ ಸಮೀಪದ ಮೆಸ್ಟ್ ಬಿರೋಡಾ ಗ್ರಾಮದ ಸಂಬಂಧಿಕರ ಮನೆಗೆ ಬೆಳಿಗ್ಗೆ ಮನೆಯಿಂದ ಹೊರಟಿದ್ದರು. ಕಾಳಿಂಗ ಸರ್ಪವೊಂದು ತಮ್ಮೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ! ಆಮೇಲೇನಾಯ್ತು? ಮುಂದೆ ಓದಿ...

ಕಾರಿನಡಿಯಲ್ಲಿತ್ತು ಕಾಳಿಂಗ ಸರ್ಪ! 80 ಕಿಮೀ ಪ್ರಯಾಣಿಸಿ ಬೆಚ್ಚಿ ಬಿದ್ದ ಸವಾರರು ಆಮೇಲೆ ಮಾಡಿದ್ದೇನು?
ಕಾಳಿಂಗ ಸರ್ಪ (ಸಾಂದರ್ಭಿಕ ಚಿತ್ರ)
ಗಣಪತಿ ಶರ್ಮಾ
|

Updated on: Oct 17, 2023 | 3:31 PM

Share

ಜಗಲ್‌ಪೇಟೆ (ಉತ್ತರ ಕನ್ನಡ), ಅಕ್ಟೋಬರ್ 17: ಕಾರಿನಲ್ಲಿ ಕಾಳಿಂಗ ಸರ್ಪ (King Cobra) ಇರುವುದು ಗೊತ್ತೇ ಇಲ್ಲದೆ ಕಿಲೋಮೀಟರುಗಟ್ಟಲೆ ಪ್ರಯಾಣಿಸಿ ದಿಢೀರ್ ಆಗಿ ಹಾವಿರುವುದು ಗೊತ್ತಾದರೆ ಹೇಗಿರಬಹುದು! ಬೆಚ್ಚಿ ಹೌಹೌರುವ ಪರಿಸ್ಥಿತಿ ಸವಾರರದ್ದಾಗಬಹುದಲ್ಲವೇ? ಇಂಥದ್ದೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada Disrtrict) ಜಗಲ್‌ಪೇಟೆ ಬಳಿ ನಡೆದಿರುವುದು ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಜಗಲ್‌ಪೇಟೆಯಲ್ಲಿ ಭಾನುವಾರ ಕಾರಿನಲ್ಲಿ ಕಾಳಿಂಗ ಸರ್ಪದ ಜತೆ 80 ಕಿಮೀ ಪ್ರಯಾಣಿಸಿದ ನಾಲ್ವರು ಸಹೋದರ ಸಂಬಂಧಿಗಳು ಆಘಾತಕ್ಕೊಳಗಾಗಿದ್ದಾರೆ. ಪ್ರಯಾಣದ ವೇಳೆ ಕಾರಿನ ಬೂಟ್​​ ಸ್ಪೇಸ್​​ನಲ್ಲಿ ಕಾಳಿಂಗ ಸರ್ಪ ಇದ್ದುದು ಅವರ ಅರಿವಿಗೇ ಬಂದಿರಲಿಲ್ಲ.

ಗೋವಾದ ಕ್ಯಾಸಲ್ ರಾಕ್-ದೂಧಸಾಗರ ಪ್ರದೇಶದ ಕಂಡೇವಾಡಿಯ ವ್ಯಕ್ತಿಯೊಬ್ಬರು ಮತ್ತು ಅವರ ಸೋದರಸಂಬಂಧಿಗಳು ಜಗಲ್‌ಪೇಟೆ ಸಮೀಪದ ಮೆಸ್ಟ್ ಬಿರೋಡಾ ಗ್ರಾಮದ ಸಂಬಂಧಿಕರ ಮನೆಗೆ ಬೆಳಿಗ್ಗೆ ಮನೆಯಿಂದ ಹೊರಟಿದ್ದರು. ಕಂಡೇವಾಡಿಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಜಗಲ್‌ಪೇಟೆ ಬಳಿ ದತ್ತಾತ್ರೇಯ ದೇವರ ದರ್ಶನಕ್ಕೆ ಕಾರನ್ನು ನಿಲ್ಲಿಸಿದ್ದರು. ಆಗಲೂ ಕಾಳಿಂಗ ಸರ್ಪವೊಂದು ತಮ್ಮೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ!

ಗಮ್ಯ ಸ್ಥಾನವನ್ನು ತಲುಪಿದ ನಂತರ, ವ್ಯಕ್ತಿ ಮತ್ತು ಅವರ ಸೋದರಸಂಬಂಧಿಗಳು ಕಾರಿನಿಂದ ಇಳಿದು ಬಾಗಿಲು ತೆರೆದಿದ್ದಾರೆ. ಬಳಿಕ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ, ಬೆಕ್ಕೊಂದು ಕಾರಿನ ಸುತ್ತಲೂ ಕೂಗುತ್ತಾ ಸುಳಿಯಲು ಪ್ರಾರಂಭಿಸಿತ್ತು.

ಇದನ್ನೂ ಓದಿ: ಮಂಗಳೂರು: KSRTC ಬಸ್​ನಲ್ಲಿ ಕೋಳಿ ಮಾಂಸ ಜಗಳ; ಠಾಣೆಗೆ ಬಸ್​ ತೆಗೆದುಕೊಂಡು ಹೋದ ಚಾಲಕ

ಆರಂಭದಲ್ಲಿ, ಮಾತಿನ ಭರಾಟೆಯಲ್ಲಿ ಅವರು ಅದನ್ನು ಗಮನಿಸಲಿಲ್ಲ. ಆದರೆ ನಂತರ ಕಾರಿನಡಿ ಏನೋ ಸದ್ದು ಕೇಳುತ್ತಿದೆ ಎಂದು ನೋಡಿದಾಗ ಹಿಂಬದಿಯ ಚಕ್ರಗಳ ನಡುವೆ ಹಾವು ಸುತ್ತಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಅವರು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಲವು ಗಂಟೆಗಳ ನಂತರ, ಅರಣ್ಯ ಇಲಾಖೆಯ ಹಾವು ರಕ್ಷಕರು ಕಾಳಿಂಗ ಸರ್ಪವನ್ನು ಕಾರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಹಾವನ್ನು ಸಮೀಪದ ಅರಣ್ಯದಲ್ಲಿ ಬಿಡಲಾಗಿದೆ ಎಂದು ಸ್ಥಳೀಯರ ಹೇಳಿಕೆ ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ