AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಂತಿ, ಸೌಹಾರ್ದತೆ, ಪೋಲಿಯೋ ಮುಕ್ತ ಸಂದೇಶ ಸಾರಲು ಸೈಕಲ್ ಯಾತ್ರೆ: ಕೇರಳ to ಲಂಡನ್‌ಗೆ ಹೊರಟ ವ್ಯಕ್ತಿ

ಫಾಯಿಸ್ ಅಶ್ರಪ್ ಅಲಿ ಇಂಜಿನಿಯರಿಂಗ್ ಉದ್ಯೋಗಿಯಾಗಿದ್ದು ಈತ ಕೇರಳದ ತಿರುವನಂತಪುರಂ ನಿಂದ ಸುಮಾರು 35 ದೇಶಗಳನ್ನ ಸುತ್ತಿ ಲಂಡನ್ ತಲುಪಲಿದ್ದಾನೆ.

ಶಾಂತಿ, ಸೌಹಾರ್ದತೆ, ಪೋಲಿಯೋ ಮುಕ್ತ ಸಂದೇಶ ಸಾರಲು ಸೈಕಲ್ ಯಾತ್ರೆ: ಕೇರಳ to ಲಂಡನ್‌ಗೆ ಹೊರಟ ವ್ಯಕ್ತಿ
ಫಾಯಿಸ್ ಅಶ್ರಪ್ ಅಲಿ
TV9 Web
| Edited By: ಆಯೇಷಾ ಬಾನು|

Updated on:Sep 07, 2022 | 12:45 PM

Share

ಕಾರವಾರ: ಆಗಸ್ಟ್ 15 ರಂದು ಅಜಾದಿ ಕಾ ಅಮೃತ ಮಹೋತ್ಸವ ಆಚರಣೆ ಬಳಿಕ, ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂನಿಂದ ಲಂಡನ್‌ ವರಗೆ ಸೈಕ್ಲಿಂಗ್ ಆರಂಭಿಸಿದ ವ್ಯಕ್ತಿ ಫಾಯಿಸ್ ಅಶ್ರಪ್ ಅಲಿ ಇಂದು ಕಾರವಾರಕ್ಕೆ ಬಂದು ತಲುಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾರ್ ಶಿಪ್ ಮ್ಯೂಸಿಯಮ್ ಮುಂದೆ ಅಶ್ರಪ್ ಅಲಿಗೆ ರೋಟರಿ ಕ್ಲಬ್ ವತಿಯಿಂದ ಅದ್ದೂರಿ ಸ್ವಾಗತ ಮಾಡಲಾಗಿದೆ‌. ಇನ್ನು ಶಾಂತಿ, ಸೌಹಾರ್ದತೆ ಹಾಗೂ ಪೋಲಿಯೋ ಮುಕ್ತ ಸಂದೇಶ ಸಾರಲು ಫಾಯಿಸ್ ಸೈಕಲ್ ಏರಿ ದೇಶ ಸುತ್ತಲು ಪ್ರಾರಂಭ ಮಾಡಿದ್ದಾರೆ.

ಕೇರಳದ ತಿರುವನಂತಪುರಂ ನಿಂದ ಆರಂಭವಾದ ಈ ಸೈಕಲ್ ಯಾತ್ರೆ ಸುಮಾರು 35 ದೇಶಗಳನ್ನ ಸುತ್ತಿ ಲಂಡನ್ ತಲುಪಲಿದೆ. ಅಂದರೆ 35,000 ಕಿಮೀ ದೂರದ ವರಗೆ ಸೈಕಲ್ ಯಾತ್ರೆ ಮಾಡಿ ಲಂಡನ್‌ಗೆ ಈತ ತಲುಪಲಿದ್ದಾನೆ. ಇನ್ನು ಲಂಡನ್ ತಲುಪಬೇಕಾದರೆ ಈತನಿಗೆ ಸುಮಾರು 450 ದಿನಗಳು ಬೇಕಾಗುತ್ತೆ.‌ ಅಂದರೆ 2024 ಮಾರ್ಚ ತಿಂಗಳಿನಲ್ಲಿ ಈತ ಲಂಡನ್ ತಲುಪುತ್ತಾನೆ. ದಾರಿಯುದ್ದಕ್ಕೂ ಈತನಿಗೆ ರೋಟರಿ ಕ್ಲಬ್ ವತಿಯಿಂದ ಸಹಾಯ ಮಾಡಲಾಗುತ್ತೆ. Kerala to London cycling

ಇನ್ನೂ ಫಾಯಿಸ್ ಅಶ್ರಪ್ ಅಲಿ ಇಂಜಿನಿಯರಿಂಗ್ ಉದ್ಯೋಗಿಯಾಗಿದ್ದು ಈತನಿಗೆ ಮಡದಿ ಮುದ್ದಾದ ಎರಡು ಮಕ್ಕಳು ಇದ್ದಾರಂತೆ. ಕುಟುಂಬದ ಸಹಕಾರದೊಂದಿಗೆ ಈತ ಸೈಕ್ಲಿಂಗ್ ಆರಂಭಿಸಿದ್ದಾನೆ. ಇನ್ನು 2019 ರಲ್ಲಿ ಸೈಕ್ಲಿಂಗ್ ಮಾಡಿ ಸಿಂಗಪುರಕ್ಕೆ ಹೋಗಿದ್ದ. ಈಗ ಕೇರಳ ದಿಂದ ಲಂಡನ್‌ಗೆ ಹೋಗುವ ನಿರ್ಧಾರ ಮಾಡಿದ್ದಾನೆ.

ಈತನ ಸೈಕ್ಲಿಂಗ್ ಮಾರ್ಗ ಕಾರವಾರ ದಿಂದ ಗೋವಾ, ಮುಂಬಯಿ, ಮಸ್ಕತ್, ಓಮನ್, ಯುಎಇ, ಸೌದಿ ಅರೇಬಿಯಾ, ಕ್ವಾಟರ್, ಬ್ರಹೈನ್, ಕುವೈತ್, ಇರಾಕ್, ಇರಾನ್, ಅಜರ್ ಬೈಜಾನ್, ಜಾರ್ಜಿಯಾ ಹಾಗೂ ಟರ್ಕಿ ಮೂಲಕ ಲಂಡನ್ ತಲುಪಲಿದ್ದಾನೆ.

ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ

Published On - 12:45 pm, Wed, 7 September 22

Follow Us
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್