AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಂತಿ, ಸೌಹಾರ್ದತೆ, ಪೋಲಿಯೋ ಮುಕ್ತ ಸಂದೇಶ ಸಾರಲು ಸೈಕಲ್ ಯಾತ್ರೆ: ಕೇರಳ to ಲಂಡನ್‌ಗೆ ಹೊರಟ ವ್ಯಕ್ತಿ

ಫಾಯಿಸ್ ಅಶ್ರಪ್ ಅಲಿ ಇಂಜಿನಿಯರಿಂಗ್ ಉದ್ಯೋಗಿಯಾಗಿದ್ದು ಈತ ಕೇರಳದ ತಿರುವನಂತಪುರಂ ನಿಂದ ಸುಮಾರು 35 ದೇಶಗಳನ್ನ ಸುತ್ತಿ ಲಂಡನ್ ತಲುಪಲಿದ್ದಾನೆ.

ಶಾಂತಿ, ಸೌಹಾರ್ದತೆ, ಪೋಲಿಯೋ ಮುಕ್ತ ಸಂದೇಶ ಸಾರಲು ಸೈಕಲ್ ಯಾತ್ರೆ: ಕೇರಳ to ಲಂಡನ್‌ಗೆ ಹೊರಟ ವ್ಯಕ್ತಿ
ಫಾಯಿಸ್ ಅಶ್ರಪ್ ಅಲಿ
TV9 Web
| Edited By: ಆಯೇಷಾ ಬಾನು|

Updated on:Sep 07, 2022 | 12:45 PM

Share

ಕಾರವಾರ: ಆಗಸ್ಟ್ 15 ರಂದು ಅಜಾದಿ ಕಾ ಅಮೃತ ಮಹೋತ್ಸವ ಆಚರಣೆ ಬಳಿಕ, ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂನಿಂದ ಲಂಡನ್‌ ವರಗೆ ಸೈಕ್ಲಿಂಗ್ ಆರಂಭಿಸಿದ ವ್ಯಕ್ತಿ ಫಾಯಿಸ್ ಅಶ್ರಪ್ ಅಲಿ ಇಂದು ಕಾರವಾರಕ್ಕೆ ಬಂದು ತಲುಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾರ್ ಶಿಪ್ ಮ್ಯೂಸಿಯಮ್ ಮುಂದೆ ಅಶ್ರಪ್ ಅಲಿಗೆ ರೋಟರಿ ಕ್ಲಬ್ ವತಿಯಿಂದ ಅದ್ದೂರಿ ಸ್ವಾಗತ ಮಾಡಲಾಗಿದೆ‌. ಇನ್ನು ಶಾಂತಿ, ಸೌಹಾರ್ದತೆ ಹಾಗೂ ಪೋಲಿಯೋ ಮುಕ್ತ ಸಂದೇಶ ಸಾರಲು ಫಾಯಿಸ್ ಸೈಕಲ್ ಏರಿ ದೇಶ ಸುತ್ತಲು ಪ್ರಾರಂಭ ಮಾಡಿದ್ದಾರೆ.

ಕೇರಳದ ತಿರುವನಂತಪುರಂ ನಿಂದ ಆರಂಭವಾದ ಈ ಸೈಕಲ್ ಯಾತ್ರೆ ಸುಮಾರು 35 ದೇಶಗಳನ್ನ ಸುತ್ತಿ ಲಂಡನ್ ತಲುಪಲಿದೆ. ಅಂದರೆ 35,000 ಕಿಮೀ ದೂರದ ವರಗೆ ಸೈಕಲ್ ಯಾತ್ರೆ ಮಾಡಿ ಲಂಡನ್‌ಗೆ ಈತ ತಲುಪಲಿದ್ದಾನೆ. ಇನ್ನು ಲಂಡನ್ ತಲುಪಬೇಕಾದರೆ ಈತನಿಗೆ ಸುಮಾರು 450 ದಿನಗಳು ಬೇಕಾಗುತ್ತೆ.‌ ಅಂದರೆ 2024 ಮಾರ್ಚ ತಿಂಗಳಿನಲ್ಲಿ ಈತ ಲಂಡನ್ ತಲುಪುತ್ತಾನೆ. ದಾರಿಯುದ್ದಕ್ಕೂ ಈತನಿಗೆ ರೋಟರಿ ಕ್ಲಬ್ ವತಿಯಿಂದ ಸಹಾಯ ಮಾಡಲಾಗುತ್ತೆ. Kerala to London cycling

ಇನ್ನೂ ಫಾಯಿಸ್ ಅಶ್ರಪ್ ಅಲಿ ಇಂಜಿನಿಯರಿಂಗ್ ಉದ್ಯೋಗಿಯಾಗಿದ್ದು ಈತನಿಗೆ ಮಡದಿ ಮುದ್ದಾದ ಎರಡು ಮಕ್ಕಳು ಇದ್ದಾರಂತೆ. ಕುಟುಂಬದ ಸಹಕಾರದೊಂದಿಗೆ ಈತ ಸೈಕ್ಲಿಂಗ್ ಆರಂಭಿಸಿದ್ದಾನೆ. ಇನ್ನು 2019 ರಲ್ಲಿ ಸೈಕ್ಲಿಂಗ್ ಮಾಡಿ ಸಿಂಗಪುರಕ್ಕೆ ಹೋಗಿದ್ದ. ಈಗ ಕೇರಳ ದಿಂದ ಲಂಡನ್‌ಗೆ ಹೋಗುವ ನಿರ್ಧಾರ ಮಾಡಿದ್ದಾನೆ.

ಈತನ ಸೈಕ್ಲಿಂಗ್ ಮಾರ್ಗ ಕಾರವಾರ ದಿಂದ ಗೋವಾ, ಮುಂಬಯಿ, ಮಸ್ಕತ್, ಓಮನ್, ಯುಎಇ, ಸೌದಿ ಅರೇಬಿಯಾ, ಕ್ವಾಟರ್, ಬ್ರಹೈನ್, ಕುವೈತ್, ಇರಾಕ್, ಇರಾನ್, ಅಜರ್ ಬೈಜಾನ್, ಜಾರ್ಜಿಯಾ ಹಾಗೂ ಟರ್ಕಿ ಮೂಲಕ ಲಂಡನ್ ತಲುಪಲಿದ್ದಾನೆ.

ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ

Published On - 12:45 pm, Wed, 7 September 22

Follow Us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ