Ganeshotsav: ಕುಮಟಾದಲ್ಲಿ ಗಣಪತಿ ವಿಸರ್ಜನೆ ವೇಳೆ ಥೇಟ್​ ಪ್ರಧಾನಿ ನರೇಂದ್ರ ಮೋದಿಯಂತೆ ಕಾಣಿಸಿಕೊಂಡ ವ್ಯಕ್ತಿ!

PM Narendra Modi: ಪ್ರಧಾನಿ ಮೋದಿ ಗೆಟಪ್‌ನಲ್ಲಿ ಕಾಣಿಸಿಕೊಂಡ ಆ ವ್ಯಕ್ತಿಯ ಹೆಸರು ಸದಾನಂದ ನಾಯಕ್. ಪ್ರಧಾನಿ ಮೋದಿ ಅವರಂತೆ ಕೈ ಬೀಸುತ್ತಾ ಕಾರ್ ಏರಿನಿಂತು ಆಕರ್ಷಣೆಯ ಕೇಂದ್ರಬಿಂದುವಾದರು.

Ganeshotsav: ಕುಮಟಾದಲ್ಲಿ ಗಣಪತಿ ವಿಸರ್ಜನೆ ವೇಳೆ ಥೇಟ್​ ಪ್ರಧಾನಿ ನರೇಂದ್ರ ಮೋದಿಯಂತೆ ಕಾಣಿಸಿಕೊಂಡ ವ್ಯಕ್ತಿ!
ಕುಮಟಾ: ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ಹೋಲಿಕೆ ವ್ಯಕ್ತಿ!
Updated By: ಸಾಧು ಶ್ರೀನಾಥ್​

Updated on: Sep 12, 2022 | 9:03 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ (uttara kannada) ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ (Ganeshotsav) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತದ್ರೂಪಿ (PM Narendra Modi) ಹೋಲಿಕೆಯ ವ್ಯಕ್ತಿಯೊಬ್ಬರು ಪಾಲ್ಗೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಕುಮಟಾ (Kumta) ತಾಲೂಕಿನ ಸಾರ್ವಜನಿಕ ಗಣಪತಿ ವಿಸರ್ಜನೆಯಲ್ಲಿ ಮೋದಿ ಗೆಟಪ್‌ನಲ್ಲಿ ಪಾಲ್ಗೊಂಡ ವ್ಯಕ್ತಿ ಥೇಟ್ ಮೋದಿಯಂತೆ ಇದ್ದರು. ಮೋದಿ ಹೋಲಿಕೆ ವ್ಯಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಪ್ರಧಾನಿ ಮೋದಿ ಅವರಂತೆ ಕೈ ಬೀಸುತ್ತಾ ಕಾರ್ ಏರಿನಿಂತು ಆಕರ್ಷಣೆಯ ಕೇಂದ್ರಬಿಂದುವಾದರು. ಪ್ರಧಾನಿ ಮೋದಿ ಗೆಟಪ್‌ನಲ್ಲಿ ಕಾಣಿಸಿಕೊಂಡ ಆ ವ್ಯಕ್ತಿಯ ಹೆಸರು ಸದಾನಂದ ನಾಯಕ್. ಇವರು ಉಡುಪಿ ಜಿಲ್ಲೆಯವರು. ಮೋದಿ ಗೆಟಪ್ ನಲ್ಲಿರುವ ವ್ಯಕ್ತಿಯನ್ನು ನೋಡಿ ಜನರಂತೂ ಫುಲ್ ಖುಷ್ ಆದರು.

ಶಿರಾಳಕೊಪ್ಪದಲ್ಲಿ ಸಂಸದ ರಾಘವೇಂದ್ರ ಸಂಭ್ರಮ

ಇನ್ನು, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆಗೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಅವರು ಡಿಜೆ ಮ್ಯೂಸಿಕ್​ಗೆ ಹೆಜ್ಜೆಹಾಕಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಬಿಗಿ ಭದ್ರತೆ ನಡುವೆ ಹಿಂದೂ ಸಭಾ ಮೆರವಣಿಗೆ ನಡೆಯಿತು.

ಮಸೀದಿ ಬಳಿ ಪ್ರಚೋದನಾಕಾರಿ ಹಾಡು, ನೃತ್ಯ – ಪ್ರಕರಣ ದಾಖಲು

ಕಲಬುರಗಿ ನಗರದಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಡಿಜೆ ಬಳಕೆ ಮಾಡುವಾಗ ನಗರದ ಸೂಪರ್ ಮಾರ್ಕೆಟ್ ನಲ್ಲಿರೋ ಮೆಹಬಾಸ್ ಮಸೀದಿ ಬಳಿ ಪ್ರಚೋದನಾಕಾರಿ ಹಾಡು ಹಾಕಿ, ನೃತ್ಯ ಮಾಡಿದ ಆರೋಪದ ಮೇಲೆ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋವಿ ಸಮಾಜ ಗಣೇಶೋತ್ಸವ ಮಂಡಳಿ ಅಧ್ಯಕ್ಷ ತುಕಾರಾಂ ಸೇರಿ ನಾಲ್ವರ ವಿರುದ್ಧ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲುಗೊಂಡಿದೆ. ಸೆಪ್ಟೆಂಬರ್ 10ರಂದು ಮತೀಯ ಗಲಭೆಗೆ ಪ್ರಚೋದಿಸುವಂತಹ ಹಾಡು ಹಾಕಿದ್ದ ಆರೋಪ ಕೇಳಿಬಂದಿದೆ. ಜತೆಗೆ ಅನುಮತಿ ಪಡೆಯದೇ ಡಿಜೆ ಬಳಕೆ ಮಾಡಿದ ಆರೋಪವೂ ಇದೆ.

Published On - 8:55 pm, Mon, 12 September 22