Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗೋಗುತ್ತೆ ಅಂತಿವೆ ಟ್ರೋಲ್​​ಗಳು; ಸಾರ್ವಜನಿಕರಿಗೆ ಪರಿಹಾರ ಸಿಗೋದು ಯಾವಾಗ?

Viral Video: ಶಿರಸಿ - ಕುಮಟಾ ರಸ್ತೆಯಲ್ಲಿ ಓಡಾಡೋದೇ ಬೇಡ ಅಂತಿದ್ದಾರೆ ಜನಸಾಮಾನ್ಯರು. ಈ ರಸ್ತೆ ಎಷ್ಟು ಹಾಳಾಗಿ ಹೋಗಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ನಮ್ಮ ಉತ್ತರಕನ್ನಡ ಟ್ರೋಲ್ ಪೇಜ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಸಕತ್ತಾಗಿದೆ ನೋಡಿ.

Viral Video: ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗೋಗುತ್ತೆ ಅಂತಿವೆ ಟ್ರೋಲ್​​ಗಳು; ಸಾರ್ವಜನಿಕರಿಗೆ ಪರಿಹಾರ ಸಿಗೋದು ಯಾವಾಗ?
ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗೋಗುತ್ತೆ ಅಂತಿವೆ ಟ್ರೋಲ್​​ಗಳು
Follow us
TV9 Web
| Updated By: shruti hegde

Updated on:Sep 21, 2021 | 4:20 PM

ಉತ್ತರ ಕನ್ನಡ ಶಿರಸಿ- ಕುಮಟಾ ರಸ್ತೆ ನೋಡಿದ್ರೆ ನೀವು ಏನಂತಿರೋ ಏನೋ? ಅಲ್ಲಿಯ ಜನರ ಪರದಾಟ ಅಲ್ಲಿಯವರಿಗೇ ಗೊತ್ತು ಎಂಬಂತಾಗಿದೆ. ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಿ ವಾಹನ ಚಲಿಸುವುದೆಂದರೆ ಸಾಹಸವೇ ಸರಿ ಎಂಬಂತಾಗಿದೆ. ಮಳೆಗಾಲದ ಸಮಯದಲ್ಲಂತೂ ಕೇಳೋದೇ ಬೇಡ, ಅದರಲ್ಲಿಯೂ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಒಂದು ವರ್ಷ ಪೂರ್ಣಗೊಂಡರೂ ಕೆಲಸ ಮಾತ್ರ ಮುಗಿಯುತ್ತಿಲ್ಲ. ವಾಹನ ಸವಾರರ ಪರಿಸ್ಥಿತಿ ನೋಡಿ, ಈ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ಹೆರಿಗೆಯೇ ಆಗುತ್ತೆ ಅಂತಿವೆ ಟ್ರೋಲ್​ ಪೇಜ್​ಗಳು. ಇದಕ್ಕೆ ಕುಮ್ಮಕ್ಕು ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ತಮಾಷೆಯ ವಿಡಿಯೋವೊಂದು ಹರಿದಾಡುತ್ತಿದೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಸಿಗೋ ಹಾಗೆ ಕಾಣಿಸ್ತಿಲ್ಲ. ಟ್ರೋಲ್ ನೋಡಿ ಪರಿಹಾರ ಕಂಡುಕೊಳ್ಳಬೇಕಷ್ಟೇ!

ಶಿರಸಿ – ಕುಮಟಾ ರಸ್ತೆಯಲ್ಲಿ ಓಡಾಡೋದೇ ಬೇಡ ಅಂತಿದ್ದಾರೆ ಜನಸಾಮಾನ್ಯರು. ಈ ರಸ್ತೆ ಎಷ್ಟು ಹಾಳಾಗಿ ಹೋಗಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ನಮ್ಮ ಉತ್ತರಕನ್ನಡ (Namma UK) ಟ್ರೋಲ್ ಪೇಜ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಮಜವಾಗಿದೆ ನೋಡಿ.

ಶಿರಸಿ- ಕುಮಟಾ ರಸ್ತೆಯಲ್ಲಿ ಸಾಗಿದ್ರೆ ಗರ್ಭಿಣಿಗೆ ರಸ್ತೆ ಮಧ್ಯವೇ ಹೆರಿಗೆ ಆಗುತ್ತೆ ಅಂತಿದ್ದಾರೆ. ಮನೆಯ ಕೆಲಸದವ, ಯಜಮಾನನ ಬಳಿ ಬಂದು ಹೆಂಡತಿ ಗರ್ಭಿಣಿ ಹಾಗಾಗಿ ಹೆರಿಗೆಗೆ ಒಟ್ಟು 40 ಸಾವಿರ ಖರ್ಚಾಗತ್ತಂತೆ, ನೀವೇ ಸಹಾಯ ಮಾಡ್ಬೇಕು ದಣಿ ಅಂತ ಬಂದಿದ್ದಾನೆ. ಮನೆಯ ಯಜಮಾನ, ಒಂದು ರೂಪಾಯಿಯೂ ಖರ್ಚಿಲ್ಲದಂತೆ ಹೆರಿಯಾಗೋ ಹಾಗೆ ಸಲಹೆ ನೀಡಿದ್ದಾನೆ. ಅದೇನೂ ಅಂತಿರಾ? ವಿಡಿಯೋದಲ್ಲೇ ನೋಡಿ..

ಮತ್ತೇನೂ ಇಲ್ಲ, ಆಸ್ಪತ್ರೆಗೆ ದುಡ್ಡು ಸುರಿಯುವ ಅವಶ್ಯಕತೆಯೇ ಇಲ್ಲ, ನಿನ್ನ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಶಿರಸಿ- ಕುಮಟಾ ರಸ್ತೆಯಲ್ಲಿ ಹೋಗು. ರಸ್ತೆ ಮಧ್ಯವೇ  ಹೆಂಡತಿಗೆ ಹೆರಿಗೆ ಆಗ್ಬಿಡತ್ತೆ ಅಂದಿದ್ದಾರೆ ಮನೆ ಯಜಮಾನರು. ಒಟ್ಟಿನಲ್ಲಿ ರಸ್ತೆ ಕಾಮಗಾರಿ ಕೆಲಸ ಮುಗಿಯೋದಿಲ್ಲ, ಸಾರ್ವಜನಿಕರಿಗೆ ಬಹು ಬೇಗ ಪರಿಹಾರ ಸಿಗೋ ಹಾಗೆ ಕಾಣಿಸ್ತಿಲ್ಲ.

ಇದನ್ನೂ ಓದಿ:

Viral Video: ಜೇಡರಹುಳದಂತ ಹುಡುಗಿ ಇವಳು; ಗೋಡೆ ಹತ್ತುವ ವಿಚಿತ್ರ ಭಂಗಿಗೆ ನೆಟ್ಟಿಗರು ಫಿದಾ

Viral Video: ವೈರಲ್ ಆಗಲು ನಡು ರಸ್ತೆಯಲ್ಲಿ ಮೈ ಬಳುಕಿಸಿದ ಯುವತಿ

(Uttara Kannada sirsi kumta road video viral)

Published On - 4:04 pm, Tue, 21 September 21

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ